Friday, July 31, 2020

ಪಯಣ - 14

ಅವರು ನನ್ನೊಟ್ಟಿಗೆ ಮಾತು ಬಿಟ್ಟು ಅದಾಗಲೇ ವಾರಗಳೇ ಕಳೆದಿವೆ. ಹಾಗಂತ ನಾನೇನು ಅವರ ಮೆಸೇಜಿಗೂ, ಫೋನ್ ಕಾಲಿಗೂ ಹಾತೊರೆಯುತ್ತಿಲ್ಲ. ಐ ಶುಡ್ ಮೇಂಟೈನ್ ಮೈ ಡಿಗ್ನಿಟಿ. ಆದರೆ ಅವರು ಇದ್ದಷ್ಟು ದಿವಸನೂ ನನ್ನಲ್ಲಿ ಮೂಡುತಿದ್ದದ್ದು ಒಂದೇ ಭಾವ. ಅದೇ ಕಾಮ. ಅದು ಅವರ ತಪ್ಪಿರದಿರಬಹುದು. ನಾನೂ ಸಹ ಬೇಕಂತಲೇ ಏನೋ ಅದನ್ನು ಇಚ್ಛಿಸದಿರಬಹುದು. ಆದರೆ ನನ್ನ ಗುರಿಯೆಂಬ ಹರಿವು ಅವರೆದುರಿಗಿರುವಾಗ ಹಾಳು ಬಯಕೆಯ ಆಸೆಯಲ್ಲಿ ಅಲ್ಲೋಲಕಲ್ಲೋಲವಾಗುವುದಂತು ಸುಳ್ಳಲ್ಲ. ಕೂಡಲೇ ಮದುವೆ ಸಂಬಂಧ ಎಂಬ ನೂರಾರು ಯೋಚನೆಗಳು.

ಸಾಧ್ಯವೇ ಇಲ್ಲ. ನಾನು ತಿಳಿಯಬೇಕು. ಕಲಿಯಬೇಕು.ಅರಿಯಬೇಕು. ನಮ್ಮ ಹಿರಿಯರನ್ನು. ನಮ್ಮ ಕಲೆ ಸಂಸ್ಕೃತಿಯನ್ನು. ಅದೂ ಸಹ ನನ್ನದೇ ದೃಷ್ಟಿಕೋನದಲ್ಲಿ. ನಾನು ಸುಖವಾಗಿರಲು ಬೇರೆಯೊಬ್ಬರ ಅಥವ ಬಾಹ್ಯ ವಸ್ತುಗಳ ಪ್ರಭಾವ ನನ್ನೊಳಗೆ ಒಂದಿನಿತು ಇರಕೂಡದು. ಅಲ್ಲದೆ ಸುಖವೆನ್ನುವುದು ಕೇವಲ ಕಾಮವಷ್ಟೇ ಆಗಕೂಡದು. ಮದ್ಯ, ಮಾಂಸ, ಮೋಜು ,ಮಸ್ತಿಗಳಿಂದಾಚೆಗಿನ ಸಂತೋಷದ ಲಹರಿ ನನ್ನೊಳಗೆ ಮೂಡಬೇಕು. ಧ್ಯಾನ ಮಾಡಿದಾಗ ಮೂಡುವ ಆ ಅರೆಕ್ಷಣದ ನೆಮ್ಮದಿ ಜೀವನದುದ್ದಕ್ಕೂ ನನಗೆ ಬೇಕು. ದ್ವಾರಕಸಮುದ್ರದ ದೇವಾಲಯದ ಒಳಗಿರುವ ಶಾಂತತೆ ಅನಂತವಾಗಿ ಮೂಡಬೇಕು.ಇದು ಕೇವಲ ಆ ಒಂದು ದೇವಾಲಯದೊಳಗೆ. ದೇಶದ ಇಂತಹ ಸಾವಿರಾರು ದೇವಾಲಯಗಳು ಅದೆಂತಹ ಪ್ರಭೆಯನ್ನು ನಮ್ಮೊಳಗೇ ಬೀರಬಹುದು?.

ಯಾರಿಗೊತ್ತು, ಆ ಮಹಾದೇವನೇ ಒಂದು ದಿನ ಕಾಣಲು ಸಿಕ್ಕರೆ?!

ಹೋಗಬೇಕು. ಪ್ರತಿದಿನ ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯದಲ್ಲಿ ಒಂದೊಂದು ಹೊಸ ದೇವಾಲಯಗಳಿಗೆ ಭೇಟಿಯಿಟ್ಟು ಧ್ಯಾನಿಸಬೇಕು. ಶಾಂತಿಯ ಸಾಗರದಲ್ಲಿ ಈಜುತ್ತಾ ಅವುಗಳ ಕಲೆ , ಕೆತ್ತನೆಗಳನ್ನು ಅರಿಯಬೇಕು. ಎಂಬ ಆಲೋಚನೆಗಳು ಮೂಡುತ್ತಿದ್ದಂತೆಯೇ ಮನದೊಳಗೆ ಸಂತೋಷದ ಅಲೆಗಳು ಉಕ್ಕಿ ಬರಲಾರಂಭಿಸಿದವು. ಬೆಟ್ಟದ ತುದಿಗೆ ನಾನಿಂದು ಒಬ್ಬನೇ ಬಂದಿದ್ದೆ. ಇನ್ನರೆ ಹೊತ್ತಿನಲ್ಲಿ ಸೂರ್ಯ ಪಡುವಣ ದಿಕ್ಕಿನಲ್ಲಿ ಮರೆಯಾಗುವುನ್ನು ತಡೆಯಲೇನೋ ಎಂಬಂತೆ ಸಾಲು ಸಾಲು ಹಕ್ಕಿಗಳು ಆ ಕಡೆಗೇ ಧಾವಿಸತೊಡಗಿದ್ದವು. ಯಾವುದೇ ಯಾಂತ್ರಿಕ ಸದ್ದುಗಳಿರದ ಆ ಎತ್ತರದ ಸ್ಥಳದಲ್ಲಿ ಒಂದು ಘಳಿಗೆ ಧ್ಯಾನಿಸುವ ಮನಸ್ಸಾಗಿ ನಿಧಾನವಾಗಿ ಕಣ್ಣುಮುಚ್ಚಿದೆ.


****


'ದೀಪಾವಳಿಗಾದ್ರು ಬಾರೋ ಮಾರಾಯ.. ಏನ್ ಸೀಮೆಗಿರದ ಕಾಲೇಜು ನಿಂದು..' ಎಂದು ಮನೆಗೆ ತೆರಳುವ ಕಷ್ಟದ ಕಾಯಕಕ್ಕೆ ಅಮ್ಮನಿಂದ ಆಮಂತ್ರಣ ದೊರೆಕಿತು. ತಾನಿರುವಲ್ಲಿಂದ ಊರಿಗೆ ಹೋಗುವ ಧಟ್ಟ ಹಸಿರಾದ ರಮಣೀಯ ಹಾದಿಯನ್ನು ಇಂಪಾದ ಹಾಡುಗಳೊಟ್ಟಿಗೆ ಬೆಳ್ಳಂಬೆಳೆಗೆ ಕ್ರಮಿಸುವುದೆಂದರೆ ಆದಿಗೂ ಎಲ್ಲಿಲ್ಲದ ಸಂತೋಷವೇ ಆದರೂ ಅಂತಹ ಸ್ವರ್ಗದಾರಿಯನ್ನು ಕ್ರಮಿಸಿ ಮನೆಗೆ ತಲುಪಿದನೆಂದರೆ ಮಾನಸಿಕ ಒತ್ತಡದಿಂದ ಕೂಡಿರುವ ಮಹಾ ಕೂಪದೊಳಗೆ ಬಿದ್ದಂತಹ ಕಹಿಯಾದ ಅನುಭವ. ಮಗನಿಗಾಗಿ ಅಮ್ಮ ಮಾಡಿಡುವ ಭಕ್ಷಾದಿಗಳು ಒಂದೆರಡಲ್ಲ. ಆದರೂ ಕಹಿಯಾದ ಅತ್ತಕಡೆ ಕಾಲಿಡಲು ಮನಸ್ಸೇ ಬಾರದು. ಇಲ್ಲದ ಮನಸ್ಸಿನಲ್ಲಿಯೇ 'ಸರಿ, ನೋಡ್ತೀನಿ..' ಎಂದು ಆತ ಫೋನನ್ನು ಕೆಳಗಿಟ್ಟ. ತಂಗಿ ಬಂದಿದ್ದರೆ ಹೋಗಬಹುದಿತ್ತು ಆದರೆ ಅವಳೆಲ್ಲಿ ಬರುತ್ತಾಳೆ ಎಂದು ಮನದಲ್ಲೇ ಅಂದುಕೊಂಡ. ಹತಾಶೆಯ ನಿಟ್ಟುಸಿರನ್ನು ಬಿಟ್ಟ. ಸಿಗುವ ನಾಲ್ಕೈದು ದಿನಗಳ ರಜೆಯ ನೆಮ್ಮದಿಯನ್ನು ಪುಸ್ತಕ ಓದುತ್ತಲೋ , ರಾತ್ರಿಯಿಡಿ ಕಷ್ಟಪಟ್ಟು ಇಂಟರ್ನೆಟ್ಟಿನಿಂದ ಬಟ್ಟಿಇಳಿಸಿದ ಚಲನಚಿತ್ರಗಳನ್ನು ನೋಡುವುದರಲ್ಲೋ ಅಥವಾ ಸಂಜೆ ಒಂದೆರೆಡು ಬಿಯರ್ಗಳನ್ನು ಹಾಕಿ ಎಲ್ಲವನ್ನು ಮರೆಯುವುದರಲ್ಲಿ ಕಳೆಯಬೇಕೆಂದುಕೊಂಡಿದ್ದ ಆದಿಗೆ ಈಗ ಮನೆಗೆ ಹೋಗಬೇಕೆಂಬುದನ್ನು ನೆನೆದು ಮನಸ್ಸು ಕುಗ್ಗತೊಡಗಿತು. ಮೊದಲೆಲ್ಲ ಅಮ್ಮನ ವಾರಾಂತ್ಯದ ಬಾಡೂಟವನ್ನು ಸವಿಯಲೆಂದೇ ಇಷ್ಟಬಿದ್ದು ಹೋಗುತ್ತಿದ್ದ ಮನೆ ಬರಬರುತ್ತಾ ಏಕೋ ಬೇಡವಾಗತೊಡಗಿದೆ.

ಆತನಿಗೆ ಯೋಚನೆಯೊಂದು ಮೂಡಿತು. ಬಹುದಿನಗಳ ತನ್ನ ಕನಸ್ಸನ್ನು ಈಡೇರಿಸಿಕೊಳ್ಳಬಹುದೆಂಬ ಖುಷಿಯ ಬುಗ್ಗೆ ಆತನೊಳಗೆ ಪುಟಿದೇಳತೊಡಗಿತು. ಶಾಲಾ ದಿನಗಳ ನಂತರ ಕೇವಲ ತನ್ನ ಕಲ್ಪನೆಗಷ್ಟೇ ಸೀಮಿತವಾಗಿದ್ದ ಖುಷಿಯನ್ನು ಈ ಬಾರಿ ಕಣ್ತುಂಬ ಕಾಣಬಹುದೆಂಬ ಆಲೋಚನೆ ಕಾರ್ಮೋಡ ಕವಿದ ಆಗಸದಲ್ಲಿ ನಕ್ಷತ್ರವೊಂದು ಮಿನುಗಿದಂತೆ ಮೂಡಿತು.. ಕೂಡಲೇ ಅಮ್ಮನಿಗೆ ಫೋನಾಯಿಸಿ 'ಬರ್ತೀನಿ.. ಕಾಯಿ ಹೋಳ್ಗೆ ಮತ್ತು ಬೇಳೆ ಹೋಳ್ಗೆ ಮಾಡು' ಎಂದು ಆಜ್ಞಾಪಿಸಿ ಫೋನನ್ನು ಇರಿಸಿದ. ತುಸು ಹೊತ್ತಿನ ಮೊದಲು ಬೇಡವಾಗಿದ್ದ ಮನೆ ಈಗ ಎಲ್ಲಿಲ್ಲದ ಖುಷಿಯನ್ನು ತುಂಬಿ ಕೊಡುವ ಅಕ್ಷಯಪಾತ್ರೆಯಂತೆ ಭಾಸವಾಯಿತು.

ಆದಿನ ಸಂಜೆ ನಿಗದಿತ ಸಮಯಕ್ಕೂ ಮೊದಲೇ ಟೆರೇಸಿನ ಮೇಲೋಗಿ ಖುಷಿಯ ನಂಬರಿಗೆ ಫೋನಾಯಿಸಿದ. ಎಂದಿನಂತೆಯೇ ಎಲ್ಲಿಲ್ಲದ ಹುರುಪಿನಲ್ಲಿ ಅದೇ ಪ್ರೆಶ್ನೆಗಳನ್ನು ಮತ್ತೊಮ್ಮೆ ಕೇಳಿ ಮುಂದೇನೂ ತೋಚದಿದ್ದಾಗ ಕೊನೆಯಲ್ಲಿ ತಾನು ಹಬ್ಬಕ್ಕೆ ಊರಿಗೆ ಬರುವುದನ್ನು ಹೇಳಿ ಆಕೆಯೂ ಬಂದರೆ ಸಿಗಬಹುದೆಂಬುದನ್ನು ಹೇಳಿ ಆಕೆಯ ಉತ್ತರಕ್ಕೆ ಕಾಯುತ್ತಾನೆ. 'ಸರಿ, ನೋಡೋಣ' ಎಂಬ ಎರಡಂಕಿಯ ಉತ್ತರವನ್ನು ಬಿಟ್ಟರೆ ಬೇರೇನೂ ಹೆಚ್ಚಾಗಿ ಆಕೆ ಹೇಳಲಿಲ್ಲ. ಆದಿ ಮತ್ತೊಮ್ಮೆ ಆಕೆಯನ್ನು ಕೇಳಿದ. ಆಗಲೂ ಒಂದು ಬಗೆಯ ಅಸಡ್ಡೆಯ ಉತ್ತರ. ಇಷ್ಟು ವರ್ಷಗಳ ನಂತರ ಸಿಗುವ ಖುಷಿಗೆ ಆಕೆಯ ಒಲ್ಲದ ಮನಸ್ಸಿನ ಉತ್ತರವನ್ನು ಕಂಡು ಆದಿಯ ಮುಖ ಕೆಂಪೇರತೊಡಗಿತು. ಆಕೆಗೆ ನಿಜವಾಗಿಯೂ ನನ್ನ ಕಾಣಲು ಆಸ್ಥೆಯಿಲ್ಲವೇ ಅಥವಾ ಬೇರೇನೋ ಕಾರಣವಿರಬಹುದೇ? ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಹಬ್ಬಕ್ಕೆ ಊರಿಗೆ ಬರುತ್ತಾರೆ. ಅದನ್ನರಿತು, ನಾನು ಹೇಳುವ ಮೊದಲೇ ಆಕೆಯೇ ನನಗೆ ಫೋನಾಯಿಸಿ ಕೇಳಬಹುದಿತ್ತು. ಸಿಗಲು ಜಾಗ ಹಾಗು ಸ್ಥಳವನ್ನು ನಿಗದಿಮಾಡಬಹುದಿತ್ತು. ಇಲ್ಲ, ಆಕೆಗೆ ಇವೆಲ್ಲ ಬೇಕಿಲ್ಲ. ತಾನಾಯಿತು ತನ್ನ ಓದಾಯಿತು. ಇಂತಹ ಹಲವು ಯೋಚನೆಗಳೇ ಮೂಡತೊಡಗಿದ ಮೇಲೆ ಮತ್ತೇನೂ ಹೆಚ್ಚಾಗಿ ಮಾತನಾಡಲು ಕಾಣದೆ ಆತ ಫೋನನ್ನಿರಿಸಿದ. ಊರಿಗೆ ಹೋಗಬೇಕೆಂದು ಮೂಡುತ್ತಿದ್ದ ಆನಂದದ ಅಲೆ ಮತ್ತೊಮ್ಮೆ ಕಣ್ಮರೆಯಾಗತೊಡಗಿತು.

ಖುಷಿಯ ಈ ನಿರಾಸಕ್ತಿಯ ಮಾತುಗಳು ಆದಿಯ ಮನದೊಳಗೆ ಹಲವು ಪ್ರೆಶ್ನೆಗಳನ್ನು ಹುಟ್ಟುಹಾಕಿದವು. ಆಕೆ ಹೀಗೇಕೆ ಮಾಡುತ್ತಿದ್ದಾಳೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾನೇಕೆ ಅವಳನ್ನು ಇಷ್ಟು ಹಚ್ಚಿಕೊಂಡೆ ಎಂಬುದಾಗಿರುತ್ತವೆ. ತನ್ನ ಜೀವನದಲ್ಲಿ ಆಕೆಯ ಪುನರಾಗಮನ ಅವ್ಯಕ್ತವಾದೊಂದು ಖುಷಿಯನ್ನು ತಂದಿರುವುದಂತೂ ಸುಳ್ಳಲ್ಲ. ಹಾಗಂದ ಮಾತ್ರಕ್ಕೆ ಆಕೆ ನನ್ನೊಳಗಿನ ಪ್ರತಿಯೊಂದು ಭಾವನೆಗಳ ನಿಯಂತ್ರಕಿಯಾಗಿರುವುದು ಆತನಿಗೆ ದಿಗ್ಬ್ರಮೆಯನ್ನು ಹುಟ್ಟಿಸುತ್ತದೆ. ಆಕೆ ನಕ್ಕರೆ ನನ್ನ ನಗು, ಆಕೆಗೆ ನೋವಾದರೆ ತನಗೆ ಅಳು, ನಲಿದರೆ ಖುಷಿ, ಮುನಿದರೆ ದುಃಖ, ಏನಿದು? ನಾನು ನನ್ನ ಮನೆಗೋಗಲು ಈಕೆಯನ್ನು ಕೇಳಬೇಕೆನ್ನುವ ತನ್ನ ನಿರ್ಧಾರ ಅದೆಂತಹದ್ದು? ಖುಷಿ ಪ್ರತಿದಿನ ಫೋನಾಯಿಸಿ ಮಾತಾಡುತ್ತಿದ್ದರೆ ಎಲ್ಲವೂ ಸರಿ. ನನ್ನ ಗೆಳತಿ ಎಂಬ ಅಹಃ. ಆದರೆ ಕನಿಷ್ಠ ಒಂದು ದಿನ ಫೋನಾಯಿಸದಿದ್ದರೆ ಅಥವಾ ಸಂತೋಷದಿಂದ ಮಾತಾಡದಿದ್ದರೆ ತನಗ್ಯಾಕೆ ಈ ಬಗೆಯ ವಿಪರೀತ ಕೋಪ? ಆಕೆಯ ಅಗಲುವಿಕೆ ನನ್ನೊಳಗೆ ಎಲ್ಲಿಲ್ಲದ ತುಮುಲವನ್ನು ಉಂಟುಮಾಡುವುದೇಕೆ? ಶಾಲಾದಿನಗಳಂತೆಯೇ ತನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಬಾರದು, ನಾನಿಲ್ಲದ ಆಟದಲ್ಲಿ ಆಕೆ ಬಾಗಿಯಾಗಬಾರದು ಎಂಬಂತಹ ಹಠ ಈಗಲೂ ಇದೆ. ಅದಕ್ಕೆ ಅದ್ಯಾವ ವ್ಯಾಖ್ಯಾನವನ್ನು ಸಮಾಜ ಕೊಡುತ್ತದೆಯೂ ತಿಳಿಯದು. ಆದರೆ ಆಕೆ ನನ್ನ ಗೆಳತಿ. ಅಣ್ಣ ತಮ್ಮ ಅಕ್ಕ ತಂಗಿಯರಿಗಿಂತಲೂ ಮಿಗಿಲಾದ ಸಲುಗೆ. ನನ್ನ ಜೀವನದಲ್ಲಿ ಅದೇನೇ ಜರುಗಿದರೂ ಕನ್ನಡಿಯ ಪ್ರತಿಬಿಂಬದಂತೆ ಅದು ಆಕೆಯಲ್ಲಿಯೂ ಮೂಡಬೇಕು. ಯಾರೊಟ್ಟಿಗೂ ಹಂಚಿಕೊಳ್ಳದ ಕನಸ್ಸುಗಳನ್ನು, ನೋವನ್ನು, ಹತಾಶೆಯನ್ನು, ಗುರಿಯನ್ನು ನಾನು ಆಕೆಯೊಟ್ಟಿಗೆ ಹಂಚಿಕೊಳ್ಳಬೇಕೆಂಬ ಹಂಬಲವೇಕೆ?

ಏನಿದರ ಅರ್ಥ.

ಅದೇನೇ ಇರಲಿ ತಾನು ಎಂದಿಗೂ ಬೇರೊಬ್ಬರ ಚಟುವಟಿಕೆಗಳ ಕೈಗೊಂಬೆಯಂತೂ ಸುತರಾಂ ಆಗಬಾರದು ಎಂದುಕೊಳ್ಳುತ್ತಾನೆ. ಅದು ಖುಷಿಯೇ ಯಾಕಾಗಿರಬಾರದು. ಆಕೆ ನನಗಾಗಿಯೇ ಆಗಸದಿಂದ ಬಂದಿಳಿದ ಗೆಳತಿಯಾದರೂ ಸರಿಯೇ ನನ್ನ ತೀರ್ಮಾನಗಳು ಎಂದಿಗೂ ನನ್ನದಾಗಿಯೇ ಇರಬೇಕು.

ಬಹುಷಃ ಈ ಮಾತನ್ನು ಬೇರ್ಯಾರ ಬಗ್ಗೆಯಾದರೂ ಹೇಳಿದ್ದರೆ ಆದಿಯ ಮನ ಕೇಳುತ್ತಿತ್ತೇನೋ ಆದರೆ ಖುಷಿಯ ಬಗೆಗೆ ಅದು ಆ ನಿಲುವನ್ನು ತಾಳಲು ಸಾಧ್ಯವಿರಲಿಲ್ಲ. ಗೊಂದಲ ಹಾಗು ಸಿಟ್ಟಿನಲ್ಲಿಯೇ ಆದಿ ಮನೆಗೆ ಹೋಗುವುದೆಂದು ನಿರ್ಧರಿಸಿದ. ಖುಷಿಯನ್ನು ಹೇಗಾದರೂ ಮಾಡಿ ಬೇಟಿಯಾಗಬೇಕೆಂಬ ಉತ್ಕಟ ಹಠದ ಉಸಿರನ್ನು ಕಟ್ಟತೊಡಗಿದ.

**

ಆದಿ ಊರನ್ನು ತಲುಪಿದ. ವಿಚಿತ್ರವೆಂಬಂತೆ ಕಳೆದ ಎರಡು ದಿನಗಳಲಿಂದ ಅಪ್ಪ ಮನೆಯಲಿಲ್ಲದೆ ತನ್ನ ಫೋನನ್ನೂ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಮ್ಮನನ್ನು ವಿಚಾರಿಸಿದಾಗ 'ಹಬ್ಬ ಹರಿದಿನ ಬಂತು ಅಂದ್ರೆ ಇದ್ದದ್ದೇ ಬಿಡು .. ಯಾರ್ದೋ ಹಳೆ ನೆಂಟ್ರ ಮನೆಗೆ ಹೋಗಿರ್ತಾರೆ .. ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಬರಬಹದು' ಎಂದು ಸುಮ್ಮನಾದಳು. ಆಕೆಯ ಮನದಲ್ಲೂ ಬಹುಷಃ ಮುಟ್ಟಿದರೆ ಮುನಿಯಂತಾಡುವ ಗಂಡ ಇಲ್ಲದೆ ಹಬ್ಬದ ದಿನದಲ್ಲಾದರೂ ಮನೆ ಶಾಂತವಾಗಿರುತ್ತದೆ ಎಂಬ ನೆಮ್ಮದಿ. ರಾತ್ರಿಯಿಡಿ ಮಾಡಿಟ್ಟ ಹೋಳಿಗೆ, ಜಾಮೂನು ಹಾಗು ಇನ್ನು ಹಲವು ಭಕ್ಷಾದಿಗಳನ್ನು ಸಾಕು ಸಾಕೆನ್ನುವಷ್ಟು ಉಣಬಡಿಸಿದಳು. ಅದೆಷ್ಟೇ ಕೊಬ್ಬಿ ಕೋಣನಂತಾದರೂ ಹೊಟ್ಟೆಗೆ ಹಿಟ್ಟಿಲ್ಲದ ಬಡಪಾಯಿಯಂತೆಯೇ ಮನೆಯ ಹೊರಗಿರುವ ಅಮ್ಮನ ಮಗ. ಹೊಟ್ಟೆಬಿರಿಯುವಷ್ಟು ತಿಂದು ಮಧ್ಯಾಹ್ನದ ರಣಬಿಸಿಲಿಗೆ ಹೊರಹೋಗಲು ಮನಸ್ಸಾಗದೆ ಸೋಫಾದ ಮೇಲೆ ಮಲಗಿ ಖುಷಿಯ ಮೆಸೇಜುಗಳು ಬಂದಿರಬಹುದೇ ಎಂದು ಕಣ್ಣಾಯಿಸುವಲ್ಲಿಯೇ ನಿದ್ರಾದೇವಿ ಬಂದು ಆತನನ್ನು ಆವರಿಸಿದಳು.

ಕನಸ್ಸಲ್ಲಿ ಖುಷಿ ತನಗಾಗಿ ಶಾಲೆಯ ದೊಡ್ಡಗೇಟಿನ ಬಳಿ ಕಾಯುತ್ತಿರುವಂತೆ, ಆಟವಾಡಲು ಕೈತುಂಬ ಕಲ್ಲುಗಳನ್ನು ಹಿಡಿದು ನಿಂತಿರುವಂತೆ ಕಾಣತೊಡಗಿತು. ಅದೆಷ್ಟೋ ಹೊತ್ತಿನವರೆಗೂ ಆಡಿದ ಆಕೆಗೆ ಪ್ರತಿ ಆಟದಲ್ಲೂ ಗೆಲ್ಲುತ್ತಿದ್ದ ಆದಿಯೊಟ್ಟಿಗೆ ಆಡಲು ಬೇಸರವಾದಂತೆನಿಸಿದಾಗ ದೂರದಲ್ಲಿದ್ದ ಮತ್ಯಾರೋ ಆಕೆಯನ್ನು ಕರೆಯುತ್ತಾರೆ. ಖುಷಿ ಹೇಳದೆಯೇ ಎದ್ದು ಹೋರಡಲು ಅಣಿಯಾಗುತ್ತಾಳೆ. ತನ್ನನ್ನು ಒಬ್ಬನೇ ಬಿಟ್ಟು ಹೊರಡಲು ಅಣಿಯಾದ ಆಕೆಯನ್ನು ಕಂಡು ಆದಿಗೆ ವಿಪರೀತ ಕೋಪ ಬರುತ್ತದೆ. ಖುಷಿ ನೆಡೆಯುತ್ತಾ ದೂರವಾಗತೊಡಗಿದಳು. ಕೂಡಲೇ ಆದಿಯ ಸಿಟ್ಟು ದುಃಖವಾಗಿ ಮಾರ್ಪಡುತ್ತದೆ. 'ಖುಷಿ .. ಹೋಗ್ ಬೇಡ್ವೇ' ಎಂದು ಗದ್ಗದಿತ ಸ್ವರದಲ್ಲಿ ಆತ ಅಳತೊಡಗುತ್ತಾನೆ. ಆದಿಯ ಅಳುವನ್ನೂ ಲೆಕ್ಕಿಸದೆ ಆಕೆ ದೂರವಾದಳು. ತನ್ನ ಅತ್ಯಾಪ್ತ ಆಟಿಕೆಯನ್ನು ಕಳೆದುಕೊಂಡಹಾಗೆ ಆದಿ ನೆಲದ ಮೇಲೆ ಬಿದ್ದು ಒದ್ದಾಡತೊಡಗಿದ. ರೋಧಿಸತೊಡಗಿದ.

'ಆದಿ..!' ಎಂದು ಅಮ್ಮ ಬಂದು ಮೈಯನ್ನು ಅಲುಗಾಡಿಸಿದ ಮೇಲೆಯೇ ಆತನಿಗೆ ಅದು ಕನಸ್ಸೆಂದು ಅರಿವಾದದ್ದು. ಸಂಜೆ ಅದಾಗಲೇ ಐದಾಗಿತ್ತು.

'ಏನಾಯ್ತೋ..?' ಎಂದ ಆಕೆಯ ಪ್ರೆಶ್ನೆಗೆ ಏನಿಲ್ಲವೆನುತ ಎದ್ದು ರೆಡಿಯಾಗಿ ಆಕೆ ಮಾಡಿಟ್ಟ ಘಮಭರಿತ ಕಾಫಿಯನ್ನು ಹೀರಿ ಊರಿನ ಬೆಟ್ಟಕ್ಕೆ ಹೋಗಿ ಸೂರ್ಯಾಸ್ತವನ್ನು ನೋಡಿ ಸಂಜೆ ಹಾರಿಸಲು ಒಂದಿಷ್ಟು ಪಟಾಕಿಗಳನ್ನು ತರಲು ತನ್ನ ಬೈಕನ್ನು ಹೊರಗೆಳೆದ.

**

ಬೆಟ್ಟದ ಆ ಜಾಗ ಆದಿಯ ಸ್ವರ್ಗಬಿಂದು. ಅದರ ತಪ್ಪಲನ್ನು ಮುಟ್ಟುವಾಗಲೇ ಸೂರ್ಯದೇವ ತನ್ನ ದೈನಂದಿನ ಕಾರ್ಯವನ್ನು ಮುಗಿಸಿ ಮರೆಯಾಗಿ ಹೋಗಿದ್ದ. ಆಗಸದಲ್ಲಿ ಮೂಡಿಸಿದ್ದ ಕೆಂಪಾದ ಪ್ರಭೆ ಹಾಗೆಯೇ ಇನ್ನೂ ಥಳಥಳಿಸುತ್ತಿತ್ತು. ಯಾರೊಬ್ಬರೂ ಹೆಚ್ಚಾಗಿ ಬಾರದ ಆ ಜಾಗದಲ್ಲಿ ತನ್ನಿಷ್ಟದ ಹಾಡುಗಳೊಟ್ಟಿಗೆ ಕೆಂದಾವರೆಯಂತಾದ ಆಗಸದಲ್ಲಿ ಕೆಲವೊಮ್ಮೆ ನಕ್ಷತ್ರಗಳು ಹೊಳೆಯುವವರೆಗೂ ಆತ ಅಲ್ಲಿ ನಿಲ್ಲುವುದುಂಟು. ಅದೇನೋ ಒಂದು ಬಗೆಯ ನೆಮ್ಮದಿ ಅಲ್ಲಿ. ದೂರದಿಂದೆಲ್ಲೋ ಖುಷಿಯೂ ನಿಂತು ನನ್ನನ್ನೇ ನೋಡುತ್ತಿರುವಳೆಂಬ ಭಾವನೆ.

ಸಮಯ ಉರುಳಿತು. ಕೂಡಲೇ ಅಮ್ಮನ ಫೋನು. ಮನೆ ಬಿಟ್ಟು ಅದಾಗಲೇ ಎರಡು ತಾಸುಗಳಗಿವೆ. ಸಿಟಿಗೆ ಬಂದು ಒಂದಿಷ್ಟು ಪಟಾಕಿಗಳನ್ನು ಕೊಂಡು ಮನೆಗೆ ಧಾವಿಸಿದ. ಅಮ್ಮನೊಟ್ಟಿಗೆ ಹಬ್ಬವನ್ನು ಆಚರಿಸಿದ. ಖುಷಿಯ ಮನೆಯ ವಿಳಾಸ ತಿಳಿಯದಿದ್ದರೂ ಹೇಗಾದರು ಮಾಡಿ ಹುಡುಕಿದರೆ ಸಿಗುತ್ತಿತ್ತು. ಆದರೆ ತಾನು ಊರಿಗೆ ಬಂದಿರುವುದು ತಿಳಿದಿದ್ದರೂ ಖುಷಿ ಬೇಕಂತಲೇ ಮೆಸೇಜನ್ನು ಮಾಡದಿರುವುದು ಆದಿಯ ಅನುಭವಕ್ಕೆ ಬಂದಿತು. ಬೇಕಾದರೆ ಆಕೆಯೇ ಮಾಡಲಿ ಎಂದು ಸುಮ್ಮನಾದ. ಅಂತೂ ಕಾದು ನೋಡಿ ಕೊನೆಗೆ ಹಬ್ಬದ ರಜೆಯ ದಿನಗಳು ಕಳೆದರೂ ಆಕೆಯ ಮೆಸೇಜು ಬಾರದಿದ್ದದ್ದು ಆತನಿಗೆ ಮುಳ್ಳಿನ ಹಾಸಿಗೆಯ ಮೇಲೆ ಅಂಗಾತ ಮಲಗಿದಂತಾಗಿತ್ತು. ಜೊತೆಗೆ ಆಪ್ಪನೂ ಮನೆಗೆ ಬಾರದಿದ್ದದ್ದು ಆತನಲ್ಲಿ ಕೊಂಚ ದಿಗಿಲನ್ನು ಹುಟ್ಟುಹಾಕಿದರೂ ಆತ ಆದನ್ನು ವ್ಯಕ್ತಪಡಿಸಲಿಲ್ಲ.

ಒಲ್ಲದ ಮನಸ್ಸಿನಲ್ಲಿಯೇ ಬರುವುದಾಗಿ ಹೇಳಿ ಕೆಜಿಗಟ್ಟಲೆ ಮನೆತಿಂಡಿಯನ್ನು ಹೊತ್ತು ಕಾಲೇಜಿಗೆ ವಾಪಸ್ಸಾದ.



****

ಚಚ್ಚಿ ಹೊಡೆಯುವ ರಣಬಿಸಿಲು, ಹಾದಿಯ ಇಬ್ಬದಿಗೂ ಕಿಕ್ಕಿರಿದು ಅಂಟಿಕೊಂಡಿರುವ ಗೂಡಂಗಡಿಗಳ ಸಾಲು, ರಸ್ತೆಯನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡಿರುವ ಮಕ್ಕಳ ಸಂತೆ ಹಾಗು ತಮ್ಮ ಶಕ್ತಿಯನ್ನೆಲ್ಲ ವ್ಯಹಿಸಿ ರಾಶಿ ರಾಶಿಯಾಗಿ ಹೊಗೆಯನ್ನುಗುಳುವ ಮೋಟಾರುಗಳು. ಇವೆಲ್ಲವನ್ನು ನೋಡಿದಾಗ ಶತಮಾನಗಳಷ್ಟು ಹಳೆಯ ಜಗತ್ಪ್ರಸಿದ್ದ ದೇವಾಲಯವೊಂದು ಇಲ್ಲಿದೆ ಎಂದು ನಂಬಲೇ ಸಾಧ್ಯವಾಗದು. ದಾರಿಗೆ ಅಡ್ಡಲಾಗಿ ಬರುತ್ತಿದ್ದ ನಾಯಿ, ಬೆಕ್ಕು ಹಾಗು ಸಹನೆಯನ್ನೇ ಮರೆತಿರುವ ಮಾನವರೆಲ್ಲರನ್ನು ತನ್ನ ಬೈಕಿನ ಮೊದಲ ಗೇರಿನಲ್ಲಿಯೇ ದಾಟಿ ಆಗಸವನ್ನು ಚುಂಬಿಸುವಂತೆ ನಿಂತಿದ್ದ ದೇವಾಲಯದ ಭವ್ಯರಮಣೀಯ ವಿಮಾನ ನನ್ನನ್ನು ಮಾತುಮರೆತ ವ್ಯಕ್ತಿಯನ್ನಾಗಿಸಿತು. ಇಂಟರ್ನೆಟ್ಟಿನಲ್ಲಿ ಬಹಳ ಬಾರಿ ದೇವಾಲಯದ ಬಗೆಗೆ ಅದೆಷ್ಟೇ ಓದಿ ಅರಿತಿದ್ದರೂ ಇಂದು ಕಣ್ಣೆದುರಿಗೇ ಪ್ರತ್ಯಕ್ಷವಾದಂತಹ ಈ ವಿಹಂಗಮ ಆಕೃತಿ ನನ್ನ ವರ್ಣನೆಗೆ ನಿಲುಕದಂತಾಯಿತು. ಮಧ್ಯಾಹ್ನದ ರಣಬಿಸಿಲು ಜೊತೆಗೆ ದೇವಾಲಯದ ಸಂದಿಗೊಂದಲದಲ್ಲೂ ಕಿಕ್ಕಿರಿದು ನೆರೆದಿರುವ ಪ್ರವಾಸಿಗರ ಗದ್ದಲವನ್ನು ಕಂಡು ಹೊತ್ತು ಕಳೆದು ಸಂಜೆಯಾದ ಮೇಲೆಯೇ ದೇವಾಲಯವನ್ನು ಪ್ರವೇಶಿಸುವುದಾಗಿ ತೀರ್ಮಾನಿಸಿ ಹತ್ತಿರದಲ್ಲಿ ಉಳಿದುಕೊಳ್ಳಲು ರೂಮಿನ ವ್ಯವಸ್ಥೆಯನ್ನು ನೋಡತೊಡಗಿದೆ.

ಗೆಳೆಯನೊಬ್ಬನ ರಾಯಲ್ ಏನ್ಫೀಲ್ಡ್ ಬೈಕನ್ನು ಪಡೆದು ಎರಡು ತಿಂಗಳ ಮಟ್ಟಿಗೆ ದೇಶ ಪರ್ಯಟನೆ ಎಂದು ಹೊರಟ ನಾನು ಧಕ್ಷಿಣ ಭಾರತದಿಂದಿಡಿದು ಉತ್ತರ ಭಾರತದ ತುತ್ತತುದಿಯ ಸಾಧ್ಯವಾದಷ್ಟು ದೇವಾಲಯಗಳಿಗೆ ಹೋಗುವುದೆಂದು ತೀರ್ಮಾನಿಸಿದ್ದೆ. 'ಸೋಲೋ ಟ್ರಿಪ್' ಎಂದಷ್ಟೇ ಹೇಳಿ ಹೊರಟಿದ್ದೆ. ಬಹುಶಃ ದೇವಾಲಯಗಳ ಯಾತ್ರೆ ಎಂದಿದ್ದರೆ ಆದಿಯೂ ಜೊತೆಗೂಡುತ್ತಿದ್ದನೇನೋ ತಿಳಿಯದು.

ಅದರಂತೆ ದಕ್ಷಿಣ ವಾರಣಾಸಿಯ ಈ ಚೆನ್ನಕೇಶವ ದೇವಾಲಯ ನನ್ನ ಯಾತ್ರೆಯ ಮೊದಲ ಶಾಂತಿಕೇಂದ್ರ.

ಮೊದಲೇ ತೀರ್ಮಾನಿಸಿದಂತೆ ಅದೆಷ್ಟೇ ಕಷ್ಟಗಳಾದರೂ ಸರಿಯೇ ದೇವಾಲಯಗಳನ್ನು ನಾನು ಒಂದೋ ಬೆಳಗಿನ ತಿಳಿ ಜಾವದಲ್ಲೋ ಅಥವಾ ಸಂಜೆಯ ಶಾಂತ ಸಮಯದಲ್ಲೂ ನೋಡಬೇಕೆಂಬುದೆ ಆಗಿದ್ದಿತು. ಸಂಜೆ ಸುಮಾರು ಆರಕ್ಕೆ ಸ್ನಾನಾದಿಗಳನ್ನು ಮುಗಿಸಿ ದೇವಾಲಯಕ್ಕೆ ಬಂದು ಗರ್ಭಗುಡಿಯ ಬಳಿಯೂ ಅಥವಾ ದೇವಾಲಯದ ಮತ್ಯಾವುದೋ ಜನರಹಿತ ಜಾಗದಲ್ಲಿ ಶಾಂತವಾಗಿ ಕೂತು ಓಂಕಾರವನ್ನು ಗುನುಗುತ್ತಾ ಧ್ಯಾನವನ್ನು ಮಾಡತೊಡಗಿದರೆ ಆಗಸವನ್ನು ಸೀಳಿ ಇಡೀ ಬ್ರಹ್ಮಾಂಡದಿಂದ ಬಲುದೂರಕ್ಕೆ ಹೋದಂತಹ ಅವರ್ಣೀಯ ಸುಖಾನುಭವ. ಅದೇನು? ಅದೇಕೆ? ನನಗೆ ತಿಳಿಯುವುದಿಲ್ಲ. ಆದರೆ ನನ್ನ ಆ ಧ್ಯಾನ ಯಾರಿಂದಲೋ ಆಮಂತ್ರಣವೊಂದನ್ನು ಪಡೆದಂತೆ ಭಾಸವಾಗುತ್ತಿತ್ತು.

ಅಲ್ಲದೆ ಪ್ರತೀ ದೇವಾಲಯದ ಇತಿಹಾಸವನ್ನು ಓದಿ ಅಲ್ಲಿನ ಪ್ರತಿಯೊಂದು ವಿಷಯಗಳನ್ನು ಕಣ್ಣಾರೆ ನೋಡಿ ಒರೆಹಚ್ಚಿ ಅನುಭವಿಸತೊಡಗಿದೆ. ಹೀಗೆ ಮಾಡುವಾಗ ಶತಮಾನಗಳಷ್ಟು ಹಿಂದಿನ ಶಿಲ್ಪಿಗಳು, ಕವಿಗಳು, ರಾಜರು ನನ್ನನ್ನು ನೋಡಿ ಮಂದಹಾಸವನ್ನು ಬೀರುತ್ತಿರುವರೆಂಬ ಅನುಭವ. ಅವರು ಹೇಗಿದ್ದಿರಬಹುದು, ನಾಟ್ಯರಾಣಿ ಶಾಕುಂತಲೆ ನೈಜವಾಗಿ ಅದೇಗೆ ಕಂಗೊಳಿಸುತ್ತಿದ್ದಿರಬಹುದು, ಚೀವಿಂಗ್ ಗಮ್ಮಿಗಿಂತಲೂ ನಯವಾಗಿ ಕಲ್ಲುಗಳನ್ನು ತಿದ್ದಿ ತೀಯುವ ಕಲೆಗಾರರ ನಗುವಿನ ಹಿಂದಿರುವ ಆ ಮರ್ಮವಾದರೂ ಏನು, ಅವರು ಇಷ್ಟೆಲ್ಲಾ ಕೆತ್ತನೆಗಳನ್ನು ಮಾಡಿರುವಾಗ ಏನಾದರು ಮಹತ್ತರವಾದ ಸುಳಿವನ್ನು ರಹಸ್ಯವನ್ನು ಕೆತ್ತಿ ಮರೆಯಾಗಿರುವರೆ?ನಾನದನ್ನು ಪತ್ತೆ ಹಚ್ಚ ಬಲ್ಲೇನೆ ಎಂಬ ಅನೇಕಾನೇಕ ಪ್ರೆಶ್ನೆಗಳು ಮನದೊಳಗೆ ಮೂಡಿ ಮರೆಯಾಗತೊಡಗುವವು.

ಹೀಗೆ ದೇವಾಲಯವೊಂದಕ್ಕೆ ಒಂದೋ ಅಥವಾ ಕೆಲವು ಬಾರಿ ಎರಡು ದಿನಗಳನ್ನು ಮೀಸಲಿಡತೊಡಗಿದೆ.

ದಕ್ಷಿಣ ವಾರಣಾಸಿಯ ಚೆನ್ನಕೇಶವ ದೇವಸ್ಥಾನ ದ್ವಾರಸಮುದ್ರದ ದೇವಾಲಯದ ಮಂತ್ರತೆಯನ್ನೇ ತನ್ನೊಳಗೆ ಹಿಡಿದುಕೊಂಡಿದೆ. ಹೊರಗಿನ ಸಾಮಾಜಿಕ ಪರಿಸರ ಅದೇನೇ ಇದ್ದರೂ ಎಲ್ಲಿಲ್ಲದ ಶಾಂತತೆ ದೇವಾಲಯದೊಳಗೆ. ಬೆಳಗಿನ ಹಾಗು ಸಂಜೆಯ ಇಳಿಬಿಸಿಲಿನಲ್ಲಿ ದೇವಾಲಯವನ್ನು ಅನುಭವಿಸುವುದಾದರೆ, ಮಧ್ಯಾಹ್ನದ ಹೊತ್ತು ಆ ದೇವಾಲಯದ ಬಗೆಗೆ ಪುಸ್ತಕಗಳಲ್ಲೊ ಅಥವಾ ಇಂಟರ್ನೆಟ್ಟಿನಲ್ಲೂ ಓದುವುದು ಹಾಗೆ ಒಂದರೆಹೊತ್ತು ವಿಶ್ರಾಂತಿ. ಸಂಜೆಯ ಸೂರ್ಯ ಕಣ್ಮರೆಯಾದ ಕೆಲವು ತಾಸುಗಳ ನಂತರ ದೇವಾಲಯದ ಪ್ರಾಂಗಣದಲ್ಲಿ ತಂಪುಗಾಳಿಯ ಹಿತಾನುಭವದಲ್ಲಿ ನಭದ ರಾಶಿ ರಾಶಿ ನಕ್ಷತ್ರಗಳ ಕೆಳಗೆ ಅತ್ತಿಂದ್ದಿತ್ತ ಇತ್ತಿಂದ್ದತ್ತ ವಿಹಾರಿಸತೊಡಗಿದರೆ ಹೊತ್ತು ಕಳೆಯುವುದೇ ತಿಳಿಯುವುದಿಲ್ಲ. ಏರಿಳಿತಗಳಿಲ್ಲದ ತಿಳಿಯಾದ ತೊರೆಯೊಂದರ ಮೇಲಿನ ಹೂವಿನ ಅನುಭವ. ಅಲ್ಲದೆ ದೇವಾಲಯ ಹೊರಕ್ಕೂ ಹಾಗು ಒಳಕ್ಕೂ ಬರುವ ಹೋಗುವ ರಾಶಿ ರಾಶಿ ಬಗೆ ಬಗೆಯ ಹೂವುಗಳ ಸುಗಂಧ. ಆಹಾ.. ಜಗತ್ತಿನ ಸರ್ವ ಸುಖಗಳೂ ಸಹ ಏನಿಲ್ಲ ಇದರ ಮುಂದೆ. ರಾಜವೈಭೋಗವೆಂದರೆ ಇದೆಯೇ?

ಅಂದು ದೇವಾಲಯದ ಉಸ್ತುವರಿಯ ಜನ ಬಂದು ಹೊರಗೆ ಕರೆದುಕೊಂಡು ಹೋಗದಿದ್ದರೆ ರಾತ್ರಿಯಿಡಿ ಅಲ್ಲೇ ನೆಡೆದಾಡುತ್ತ ಇರುತ್ತಿದ್ದನೇನೋ?!!. ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೊಂದು ಪ್ರದಕ್ಷಿಣೆ ಬಂದು, ಅರೆ ಹೊತ್ತು ಧ್ಯಾನ ಮಾಡಿ ಮೋಡಗಳನ್ನು ಕೊರೆದು ಉದಯಿಸುತ್ತಿದ್ದ ರವಿಯ ಜಾಡನ್ನು ಹಿಡಿದು ಅಹಿರ್ ಭೈರವಿ ರಾಗವನ್ನು ಕೇಳುತ್ತಾ ಬೈಕಿನ ವೇಗವನ್ನು ಹೆಚ್ಚಿಸಿದೆ…

.

****



ಒಂದರಿಂದೊಂದು ಪಟಪಟನೆ ಮೂಡುತ್ತಿದ್ದ ಮೆಸೇಜುಗಳನ್ನು ಓದಿ ಯಾವ ಮೆಸೇಜಿಗೂ ಉತ್ತರಿಸುವ ಗೋಜಿಗೆ ಹೋಗದ ಆದಿ ಫೋನನ್ನು ತನ್ನ ಬದಿಗೆ ಎಸೆಯುತ್ತಿದ್ದನ್ನು ಏನೆಂದು ಕೇಳಿದ ಲೊಕೇಶನ ಪ್ರೆಶ್ನೆಗೆ ಏನನ್ನೂ ಉತ್ತರಿಸದೆ, ನಾಳೆ ಬೆಳಗ್ಗೆ ಆದಷ್ಟು ಬೇಗನೆ ರನ್ನಿಂಗ್ ಟ್ರ್ಯಾಕ್ ಗೆ ಹೋಗೋಣವೆಂದು ಅಲರಾಮನ್ನು ಬೆಳಗ್ಗೆ ಐದು ಘಂಟೆಗೆ ಹೊಂದಿಸಿ ಮಲಗಿದ. ತನ್ನ ಹಾಗು ಖುಷಿಯ ವಿಷಯವಾಗಿ ಹೆಚ್ಚೇನೂ ಯಾರೊಟ್ಟಿಗೂ ಹೇಳದಿದ್ದರೂ ಲೊಕೇಶನಂತಹ ಪರಾಕ್ರಮಿಗೆ ಇಂತಹ ಗುಪ್ತ ಕೋಟೆಯೊಳಗೆ ಭೇದಿಸುವುದು ಕಷ್ಟದ ಕೆಲಸವೇನಲ್ಲ. ಆದಿ ಮಲಗಿದ ಕೆಲ ನಿಮಿಷಗಳಲ್ಲಿಯೇ ಆತನ ಫೋನನ್ನು ತೆಗೆದು ಇವರಿಬ್ಬರ ಶೀತಲ ಸಮರದ ಸಂಭಾಷಣೆಗಳನ್ನು ಓದುತ್ತಾ ಆತ ನಗತೊಡಗಿದ. ತನ್ನ ಹಾಗು ಶಶಿಯ ಚಿಕ್ಕದಾದ ಹಾಗು ಅಷ್ಟೇ ಚೊಕ್ಕವಾದ ಸಂಭಾಷಣೆಗಳ ಮುಂದೆ ಇವುಗಳು ಎಂದಿಗೂ ಮುಗಿಯದ ಧಾರವಾಯಿಗಳಂತೆ ಇಲ್ಲ ಸಲ್ಲದ ಪ್ರೆಶ್ನೆಗಳು, ಸಿಡುಕಿನ ಉತ್ತರಗಳು ಹಾಗು ಮಕ್ಕಳಾಟಿಕೆಯಂತಹ ಜಗಳಗಳಿಂದ ಕೂಡಿದ್ದವು. ದೀರ್ಘವಾದ ಏದುಸಿರನ್ನು ಬಿಡುತ್ತಾ ಆತನ ಫೋನನ್ನು ಬದಿಗಿರಿಸಿದ. ಕೂಡಲೇ 'ಟನ್ ..' ಎಂಬ ಸದ್ದಿನೊಂದಿಗೆ ಮತ್ತೊಂದು ಮೆಸೇಜ್ ಬಂದಿತಾದರೂ ಆತ ಅದನ್ನು ಓದಲಿಲ್ಲ. ಏಕೆ ಈ ಪುಣ್ಯಾತ್ಮ ಆಕೆಯನ್ನು ಅಷ್ಟೊಂದು ಹಚ್ಚಿಕೊಂಡಿದ್ದಾನೆ ಎಂದು ಗಹನವಾಗಿ ಯೋಚಿಸತೊಡಗಿದ.

ಬೆಳಗ್ಗಿನ ಸರಿಯಾಗಿ ಐದಕ್ಕೆ ಎದ್ದು ಇನ್ನೂ ಮಲಗಿದ್ದ ಲೊಕೇಶನನ್ನು ಬಡಿದೇಳಿಸಿ ಡಿಸ್ಟ್ರಿಕ್ಟ್ ಫೀಲ್ಡ್ ಗೆ ಹೋದ ಆದಿ ತನ್ನೆಲ್ಲ ಶಕ್ತಿಯನ್ನು ಮೀರಿ ಓಡತೊಡಗಿದ. ಆತನ ಓಟವನ್ನು ನೋಡುತ್ತಾ ಲೋಕೇಶ 'ಶೋಲ್ಡರ್ ರಿಲಾಕ್ಸ್ .. ಡೋಂಟ್ ಬೌನ್ಸ್..' ಎನ್ನುತ ಪದೇ ಪದೇ ಅರಚತೊಡಗಿದ. ಆದರೆ ಆದಿ ಕೇಳಲಿಲ್ಲ. ಏನೋ ಮಾಡಬಾರದ ತಪ್ಪನ್ನು ಮಾಡಿ ತನ್ನ ದೇಹಕ್ಕೆ ತಾನೇ ದಂಡಿಸಿಕೊಳ್ಳುವನಂತೆ ಓಡಹತ್ತಿದ. ಲೊಕೇಶನ ಕೋಪ ನತ್ತಿಗೇರತೊಡಗಿತು. ಆದಿ ನಾಲ್ಕು ಸುತ್ತು ಓಟವನ್ನು ಓಡಿ ಬಂದು ಲೊಕೇಶನ ಕೈಯಲ್ಲಿದ್ದ ಟೈಮರನ್ನು ತೆಗೆದು ನೋಡಿದರೆ ಅದು 48 ಸೆಕೆಂಡ್ಗಳನ್ನು ತೋರಿಸುತ್ತಿತ್ತು.

'ಪರ್ವಾಗಿಲ ಅಲ .. Improved almost 6 ಸೆಕೆಂಡ್ಸ್..' ಎಂದ ಆದಿ.

'ನಿನ್ ತಲೆ! ಮಗ್ನೆ, ನಾನ್ ಇಲ್ಲಿ ಅರ್ಧ ನಿದ್ರೇಲಿ ಎದ್ದು ಇಲ್ಲಿಗೆ ಬರೋದು ನೀನ್ ಹುಚ್ಚ್ ಕುದ್ರೆ ತರ ಓಡೋದನ್ನ ನೋಡೋಕ್ ಅಲ್ಲ .. ಸ್ವಲ್ಪನಾದ್ರೂ ಪ್ರೆಸೆನ್ಸ್ ಆಫ್ ಮೈಂಡ್ ಅನ್ನೊದಿರ್ಲಿ..' ಎಂದು ತನ್ನ ಕೈಲಿದ್ದ ಟವೆಲ್ ಅನ್ನು ನೆಲಕ್ಕೆ ಬಡಿದು ಕೂಡಲೇ ಅಲ್ಲಿಂದ ರೂಮಿನೆಡೆಗೆ ನೆಡೆದ . ಆತನ ಮಾತುಗಳಿಗೆ ಹೆಚ್ಚೇನೂ ತಲೆಗೆಡಿಸಿಕೊಳ್ಳದ ಆದಿ ಮತ್ತೊಮ್ಮೆ ಓಡಲು ಅಣಿಯಾದ.

ಊರಿಗೆ ಹೋದಾಗ ಖುಷಿಯ ಮುಖದರ್ಶನವಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಕೋಪವೇ? ಆ ಸಿಟ್ಟನ್ನು ಓಟದ ಮೇಲೆ ಹಾಕಿ ಏದುಸಿರಿನಿಂದ ಮೂಡುವ ನೋವನ್ನು ಮರೆಮಾಚಬಹುದು. ಆದರಿಂದಲೇ ಹೀಗೆ ಶಕ್ತಿಯನ್ನೆಲ್ಲ ಬಿಟ್ಟು ಓಡುವುದು. ಪ್ರತಿ ಬಾರಿಯೂ ಆಕೆಯನ್ನು ನೆನೆದರೆ ಎಲ್ಲಿಲ್ಲದ ಕೋಪ. ಇಡೀ ಭೂಮಂಡಲವನ್ನೇ ನಾಲ್ಕು ನಿಮಿಷಗಳಲ್ಲಿ ಓಡಿ ಮುಗಿಸಬೇಕೆಂಬ ಹಠದ ಭಾವನೆಗಳು ಆತನೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತವೆ. ಆದರೆ ಹೀಗೆ ಮಾಡುವುದರಿಂದ ಖುಷಿ ನನ್ನಿಂದ ಇನ್ನೂ ದೂರವಾಗುತ್ತಾಳೆ ಎಂದೆನಿಸಿ ಕೂಡಲೇ ಗದ್ಗದಿಸತೊಡಗುತ್ತಾನೆ. ಬೆಂಕಿಗೆ ತುಪ್ಪವನ್ನು ಚುಮುಕಿಸಿದಂತೆ ಮನೆಯ ಕಷ್ಟಗಳೂ ಆಗ ಕಣ್ಣ ಮುಂದೆ ಬರುತ್ತವೆ. ನಂತರದ ಕೆಲ ಕ್ಷಣಗಳಲ್ಲೇ ಜೀವನದಲ್ಲಿ ಏನೇನೂ ಬೇಡವೆಂಬ ಶುಷ್ಕ ಭಾವವೊಂದು ಮೂಡುತ್ತದೆ. ಏನು ಮಾಡಬೇಕೆಂದು ತೋಚದೆ ಪುನ್ಹ ಓಡಲು ಅಣಿಯಾಗುತ್ತಾನೆ.

ದಿನಗಳು ಸಾಗಿದಂತೆ ಆದಿಯ ಚಿಂತೆಯೂ ವಿಪರೀತವಾಯಿತು. ಅದೇನೇ ಆಗಲಿ ತನ್ನ ಅಹಂ ಎಲ್ಲವನ್ನೂ ಬದಿಗಿಟ್ಟು ಒಮ್ಮೆಲೆ ಆಕೆಗೆ ಫೋನಾಯಿಸಿ ಕ್ಷಮೆಯಾಚಿಸಬೇಕೆಂದುಕೊಳ್ಳುತ್ತಾನೆ. ಅದೆಷ್ಟೇ ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗುವುದಿಲ್ಲ. ಬರಿ ಮೆಸ್ಸೇಜುಗಳಲ್ಲೇ ಅವರ ಶೀತಲಯುದ್ಧ ಮುಂದುವರೆಯುತ್ತದೆ. ಇತ್ತ ಕಡೆ ಅಪ್ಪ ಇನ್ನೂ ಮನೆಗೆ ವಾಪಸ್ಸಾಗಲಿಲ್ಲವೆಂಬ ಅಮ್ಮನ ಆತಂಕದ ಫೋನುಗಳು. 'ಎರ್ಡ್ ವಾರ ಆಯಿತೋ .. ಫೋನು ಇಲ್ಲ ಏನೂ ಇಲ್ಲ..' ಎನ್ನುತ ಆಕೆ ಹೇಳತೊಡಗಿದರೆ ಆದಿಗೆ ಎಲ್ಲಿಲ್ಲದ ದಿಗ್ಭ್ರಮೆ. ಅಪ್ಪ ಇರುವವರೆಗೂ ಹಾವು ಮುಂಗುಸಿಯಂತೆ ಕಚ್ಚಾಡುವ ಜನ ಎರಡು ವಾರಕ್ಕೇ ಆತಂಕಗೊಳಗಾಗುವರೇ? ಅಪ್ಪ ಬಾರದೆ ಇದ್ದರೆ ಒಳ್ಳೆಯದು ಎಂದುಕೊಂಡವನಿಗೆ ಈಗ ಅಮ್ಮನ ಒತ್ತಡದ ಮೇರೆಗೆ ದೂರದ ನೆಂಟರಿಷ್ಟರೆಲ್ಲರಿಗೂ ಫೋನಾಯಿಸುವ ಕಷ್ಟದ ಕಾಯಕ ಬಂದೊದಗಿತು. 'ಏನೂ ಆಗಲ್ಲ ನಾನ್ ವಿಚಾರಿಸ್ತಿನಿ, ಸುಮ್ನಿರು..' ಎಂದೇಳಿ ಫೋನನ್ನು ಇರಿಸತೊಡಗಿದ. ಆದರೆ ಇದ್ದೆಲ್ಲ ನೆಂಟರಿಷ್ಟರ ಮೆನೆಗಳಿಗೆಲ್ಲ ಫೋನಾಯಿಸಿದರೂ ಅಪ್ಪನ ಸುದ್ದಿಯಿರಲಿಲ್ಲ. ಹಿಂದೊಮ್ಮೆ ಹೀಗೆಯೇ ಹಲವು ದಿನಗಳ ಕಾಲ ಮೆನೆಯಲ್ಲಿರದೆ ಕೊನೆಗೆ ಪಕ್ಕದ ಊರಿನ ಕಾಡಿನೊಳಗಿರುವ ದೇವಾಲಯವೊಂದರಲ್ಲಿ ಅಡಿಗೆ ಮಾಡಿಕೊಂಡು ವಾಸವಿದ್ದು ಕೊನೆಗೆ ಕಾಡಿ ಬೇಡಿ ಮನೆಗೆ ಕರೆತಂದಿದ್ದು ಆತನಿಗೆ ನೆನಪಾಯಿತು.

ಆದಿ ಏಕಾಂತದಲ್ಲಿ ಹೀಗೆ ಯೋಚಿಸುತ್ತಿರುವಾಗ ಒಮ್ಮೊಮ್ಮೆ ತಾನು ಅಪ್ಪನನ್ನು ಅಷ್ಟಾಗಿ ದ್ವೇಷಿಸುವುದೇಕೆಂಬುವುದೇ ಆತನಿಗೆ ಅರಿವಾಗುವುದಿಲ್ಲ. ಆತನ ಮಾತುಗಳು ಒರಟಾದರೂ ಅವು ತನ್ನ ಸ್ಕೂಲಿನ ಪಿಟಿ ಮೇಷ್ಟರ ಪೆಟ್ಟಿನಂತೆ ಒಂದು ಹದ್ದುಬಸ್ತನ್ನು ತಂದಿಡುತ್ತಿದ್ದವು. ಅಂದು ಆದಿ ಶಾಲೆಯಲ್ಲಿಯೇ ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳಲು ಅಪ್ಪನ ಭಯವೆಂಬ ಚುಚ್ಚುಮದ್ದು ಬಹುವಾಗಿಯೇ ಸಹಾಯ ನೀಡಿತ್ತು ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಮುಂಗೋಪಿ , ಕೋಪಿಷ್ಠ. ಅದಕ್ಕೂ ಕಾರಣಗಳು ಹಲವಿರಬಹುದು. ಅಮ್ಮನ ಮಾತುಗಳೇ ಹಾಗೆ. ಮೈಮೇಲೆ ಕೆಂಡವನ್ನು ಸುರಿದಂತೆ. ಅವುಗಳನ್ನು ಕೇಳಿ ಕೂಡಲೇ ಮದವೇರಿದ ಗಜದಂತೆ ಆಡಿದರೂ ಆತನಿಗೆ ಈಕೆಯನ್ನು ಮಾತಿನಲ್ಲಿ ಸೋಲಿಸಲಾಗದು. ಆ ಸಿಟ್ಟಿನಲ್ಲೆ ಎಲ್ಲವನ್ನು ಬಿಟ್ಟು ದೂರ ಹೋಗುತ್ತಾನೆ. ಹಳೆಯ ಗುಡಿ ಗೋಪುರಗಳು, ಪಾಳು ಬಿದ್ದ ದೇವಾಲಯಗಳು ಆತನ ಏಕಾಂತದ ವಾಸಸ್ಥಾನ. ಅಲ್ಲದೆ ಕೆಲವೊಮ್ಮೆ ಕುಡಿದಾಗ ಆದಿಯೊಟ್ಟಿಗೆ ಮಾತಿನ ತತ್ವಯುದ್ಧಕ್ಕಿಳಿದರೆ ಆತನ ಮಾತುಗಳ ಆಳ ಆದಿಯ ಊಹೆಗೂ ನಿಲುಕದಾಗಿರುತ್ತದೆ. ಒಂದು ಪಕ್ಷ ಆತ ಅಮ್ಮನನ್ನು ಬೈಯದಿದ್ದರೆ, ಶಪಿಸದಿದ್ದರೆ ಬಹುಷಃ ಆದಿ ಆತನಲ್ಲಿ ಬೇರೊಬ್ಬ ಮಹಾಪುರುಷನನ್ನೇ ಕಾಣುತ್ತಿದ್ದನೇನೋ? ಅದೊಂದು ದಿನ ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದನ್ನು ನೋಡಿ ಮೊದಲ ಬಾರಿ ಎಂಬಂತೆ 'ಎಲ್ಲ ಬರಿ ಫೇಕು .. ಡ್ರಾಮಾ .. ಥು ಇವ್ರ ಜನ್ಮಕ್ಕೆ..' ಎಂದು ಚರ್ಚಾಕೂಟದಲ್ಲಿ ಬಾಗಿಯಾಗಿದ್ದ ಪಾನಾಲಿಸ್ಟ್ಗಳನ್ನು ನೋಡಿ ಬೈಯ್ಯತೊಡಗಿದ. ಗೋರಕ್ಷಣೆಯ ಬಗ್ಗೆ ಜರುಗುತ್ತಿದ್ದ ಆ ಚರ್ಚಾಕೂಟವನು ನೋಡುತ್ತಿದ್ದ ಆದಿ ಏಕೆಂದು ಕೇಳಿದರೆ, 'ಇನ್ನೇನು ಮತ್ತೆ. ರಕ್ಷಣೆ ಗೋವುಗಳಿಗೆ ಮಾತ್ರ ಸಾಕ. ದಿನ ಕೆ ಎಫ್ ಸಿ, ಮೆಕ್ಡಿ , ಮಣ್ಣು ಮಸಿ ಅಂತ ರಾಶಿ ರಾಶಿ ನುಂಗುವ ಕೋಳಿಗಳಿಗಾಗಲಿ, ಮೀನುಗಳಿಗಾಗಲಿ, ಹಂದಿ ಕುರಿಗಳಿಗಾಗಲಿ ಬೇಡವ? ಕಪಟ ಮನಸ್ಸಿನ ಮಾನವ ತನ್ನ ಬೇಳೆ ಬೇಯಿಸ್ಕೊಳ್ಳೋಕೆ ಎಷ್ಟ್ ಬೇಕೋ ಅಷ್ಟೇ ಮಾತ್ರ ಮಾತಾಡ್ತಾನೆ. ಅಲ್ಲಿರೋ ಒಬ್ರಲ್ಲೂ ನಿಜತ್ವ ಇಲ್ಲ. ಅವರ ಕಣ್ಣುಗಳನ್ನು ನೋಡಿದ್ರೇನೇ ನಾನ್ ಹೇಳ್ತಿನಿ. ಇತಿಹಾಸ ಪುರಾಣಗಳಲ್ಲಿ ಬಾರದ ಮಾತ್ರಕ್ಕೆ ಬೇರೆ ಜೀವಗಳು ಕರಿದ ರುಚಿಕರವಾದ ಸ್ವಾದಿಷ್ಟ ಭೋಜನಗಳು. ಅಲ್ಲಿರೋ ಒಬ್ಬನಾದ್ರು ನಿಜ ಮಾತಾಡಿದರೆ, ಒಳಗಿದ್ದದ್ದನ್ನು ಇದ್ದಹಾಗೆಯೇ ಕಕ್ಕಿದರೆ ನಾನು ಮೀಸೆ ಬೋಳಿಸಿಕೊಳ್ತೀನಿ' ಎಂದು ಹೇಳಿದ ಮಾತುಗಳೂ ಆತನಿಗೆ ನೆನಪಾಗತೊಡಗಿದವು.



Continues ....

Sunday, July 26, 2020

ಪಯಣ - 13

ಲೆಕ್ಕಾಚಾರವೆಲ್ಲ ತಲೆಕೆಳಗಾದ ಯುವಜನರ ಹುಲಿ ಅಳುತ್ತಲೇ ನಗುವಂತೆ ನಟಿಸುತ್ತಾ ತನ್ನ ಕುರ್ಚಿಯ ಮೆಲೋಗಿ ಆಸೀನವಾಯಿತು. 

'ಆತನ ಹೆಸರು ಮನೋಜ್ ಕುಮಾರ್ ಪಾಂಡೆ... ವಯಸ್ಸು ಜಸ್ಟ್ ಇಪ್ಪತ್ತರ ಆಸು ಪಾಸು .. ಪುಣೆಯಲ್ಲಿರೋ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಇಂಟರ್ವ್ಯೂ ಕೊಡೋಕ್ಕೆ ಬಂದಿದ್ದಾನೆ.. ಯಾರಿಗಾದ್ರೂ ಗೊತ್ತಿದ್ಯಾ ಈ ಅಕಾಡೆಮಿ ಏನ್ ಮಾಡುತ್ತೆ ಅಂತ..' ಎಂದು ಕೇಳಿದ ಲೋಕೇಶ ನೆರೆದಿದ್ದ ಅಷ್ಟೂ ಜನರನ್ನು ಒಮ್ಮೆ ನಿಧಾನವಾಗಿ ನೋಡಿದ. ಕೇವಲ ಗುಸುಗುಸು ಪಿಸುಪಿಸುಗಳನ್ನು ಬಿಟ್ಟರೆ ಯಾರಿಂದಲೂ ಈತನ ಪ್ರೆಶ್ನೆಗೆ ಉತ್ತರ ಬರಲಿಲ್ಲ. ಬಹುಶಃ ಗೊತ್ತಿದ್ದರೂ ಯಾಕೋ ಅಲ್ಲಿನ 'ಸತ್'ಪ್ರಜೆಗಳು ಉತ್ತರಿಸಲು ಹೆಣಗುತ್ತಿದ್ದರು ಅಥವಾ ಹೆದರುತ್ತಿದ್ದರು. ಯಾರೊಬ್ಬರಿಂದಲೂ ಉತ್ತರ ಬಾರದಿದ್ದಾಗ ಲೋಕೇಶ ಸ್ಟೇಜಿನ ಮೇಲೆ ತಿರುಗಿದ. ಬೆಳಗಿನ ಲೆಕ್ಕಾಚಾರವೆಲ್ಲ ತಪ್ಪಿ ಸಿಟ್ಟಿನ ಕೂಪದಲ್ಲಿದ್ದ ಜಿಲ್ಲೆಯ ನಾಯಕರನ್ನು ನೋಡಿದ. ಆದರೆ ಅವರು ತಾವ್ಯಾಕೆ ಈ ಪುಡುಗೋಸಿ ಯುವಕನ ಪ್ರೆಶ್ನೆಗೆ ಉತ್ತರಿಸಬೇಕು ಎನ್ನುವಂತೆ ಸುಮ್ಮನೆ ಕುಳಿತ್ತಿದ್ದರು. ಕೆಲವರು ತಮ್ಮ ಕೈಗಡಿಯಾರವನ್ನು ತೋರುತ್ತಾ ಸಮಯ ಮೀರುತ್ತಿದ್ದೆ ಎಂಬ ಮೂಕ ಸಂದೇಶವನ್ನು ನೀಡುತ್ತಿದ್ದರು. ಹುಲಿಯ ನಾಮಾಂಕಿತದ ನಾಯಕನೂ ಎಲ್ಲಿ ತನ್ನನ್ನು ಎದ್ದು ನಿಲ್ಲಿಸಿ ಕೇಳುತ್ತಾನೋ ಎಂಬ ಭಯದಲ್ಲಿ ತಮ್ಮ ಮೊಬೈಲಿನಲ್ಲಿ ಮುಳುಗಿ ಮಗ್ನನಾದಂತೆ ನಟಿಸತೊಡಗಿದ.

'ಇಂಟರ್ವ್ಯೂ ತೆಗೆದುಕೊಳ್ಳುವ ಅಧಿಕಾರಿಗಳು ಏನಪ್ಪಾ, ನೀನು ಸೈನ್ಯವನ್ನು ಏಕೆ ಸೇರಬೇಕು ಅಂದ್ಕೊಂಡಿದ್ದೀಯ? ಎಂದು ಕೇಳಿದರು. ಆಗ ಆತ 'ಸಾರ್ .. ನನ್ಗೆ ಪರಮವೀರ ಚಕ್ರ ಬೇಕು ಸಾರ್’ ಎಂದನಂತೆ! ಮೋನೋಜ್ ಬಿಸಿ ರಕ್ತದ ಹುಡುಗ. ಅಧಿಕಾರಿಗಳು ನಕ್ಕರು. ನಾಡು, ನೆಲ, ದೇಶ ಎಂದರೆ ಆತನ ಎದೆ ಹುಬ್ಬುತಿತ್ತು. ದೇಶಕ್ಕಾಗಿ ಏನಾದರು ಮಾಡಬೇಕೆಂಬ ಮಹಾದಾಸೆಯಿದ್ದ ಆತನಿಗೆ ಸೈನ್ಯದ ಸೇರ್ಪಡೆ ಇನ್ನೂ ಹೆಚ್ಚಿನ ಚೈತನ್ಯವನ್ನು ನೀಡಿತು. ಅಲ್ಲಿಂದ ಮುಂದೆ ಗೋರ್ಖಾ ರೆಜಿಮೆಂಟ್ ಸೇರ್ಕೊಂಡ , ಮುಂದೆ ಲೆಫ್ಟಿನಂಟ್ ಆದ, ಅಲ್ಲಿಂದ ಮುಂದೆ ಕ್ಯಾಪ್ಶನ್ ಕೂಡ ಆದ.

ಅದು 1999 ಜುಲೈ ತಿಂಗಳು. ಈ ತಿಂಗಳನ್ನ ಭಾರತೀಯರಾದ ಯಾರೂ ಕೂಡ ಮರೆಯೋಕ್ಕೆ ಸಾಧ್ಯನೇ ಇಲ್ಲ. ಅಲ್ವೇ?' ಎಂದ ಲೋಕೇಶ ಮತ್ತೊಮ್ಮೆ ಜನರ ಗುಂಪನ್ನು ನೋಡಿದ. ಆದರೆ ಈ ಬಾರಿ ಯಾರೋ ಪುಣ್ಯಾತ್ಮ ತನ್ನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ 'ಕಾರ್ಗಿಲ್ ವಾರ್..!!' ಎಂದು ಜೋರಾಗಿ ಅರಚಿದ. ಮುಗುಳ್ ನಕ್ಕ ಲೋಕೇಶ ಕೂಡಲೇ ಮುಂದುವರೆದ,

'ಯಸ್, ಕಾಶ್ಮೀರದ ಆ ಜಾಗದ ಹೆಸರು ಕಾಲುಬಾರ್. ಎತ್ತರದ ಬೆಟ್ಟದ ಮೇಲೆ ಪಾಕಿಸ್ತಾನಿ ಸೈನಿಕರು ಸೇರಿಕೊಂಡಿದ್ದಾರೆ.. 24 ವರ್ಷದ ಕ್ಯಾಪ್ಶನ್ ಮನೋಜ್ಗೆ ತನ್ನ ಮೇಲಧಿಕಾರಿಗಳಿಂದ ಸ್ಥಳವನ್ನು ವಶಪಡಿಸಿಕೊಳ್ಳಲು ಸಂದೇಶ ಬಂದಿತು. ಇದಕ್ಕಿಂತ ಮೊದಲು ಹೋದ 19 ಜನ ಸೈನಿಕರು ಅಲ್ಲಿಂದ ವಾಪಸ್ ಬಂದಿರಲೇ ಇಲ್ಲ! ಕಾರಣ ವೈರಿ ಸೈನಿಕರು ಕೂತಿರುವುದು ಬಹಳ ಎತ್ತರದ ಆಯಕಟ್ಟಿನ ಜಾಗದಲ್ಲಿ. ಅದು ಹೇಗೆ ಹೋದರೂ ಸಹ ಮೈಮೇಲೆ ಗುಂಡಿನ ಸುರಿಮಳೆಯಾಗುತ್ತದೆ. ಇಂತಹ ಸಾವಿನ ದವಡೆಗೆ ಹೋಗುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ. ಆದರೂ ತನ್ನ ತಂಡವನ್ನು ಹುರಿದುಂಬಿಸಿ ಮನೋಜ್ ತೆರಳಲು ಅಣಿಯಾದ. ಕಾರ್ಯಾಚರಣೆಯನ್ನು ರಾತ್ರಿಯೇ ಮಾಡೋಣವೆಂದು ನಿರ್ಧರಿಸಿ ಕಾಯತೊಡಗಿದ.

ಕೊನೆಗೂ ಆ ಸಮಯ ಬಂದಿತು. ಇಮ್ಯಾಜಿನ್ ಮಾಡ್ಕೊಳಿ. ಎತ್ತರವಾದ ಗುಡ್ಡ. ಅದರ ತುದಿಯಲ್ಲಿ ರಾಶಿಗಟ್ಟಲೆ ಮದ್ದುಗುಂಡುಗಳೊಟ್ಟಿಗೆ ಕೂತಿರುವ ವೈರಿಪಡೆ. ಗುಡ್ಡದ ತುದಿಗೆ ಏರಲು ಅದರ ಎರಡೂ ಕಡೆಗೂ ಒಂದೊಂದು ಬದುಗಳು ಬಿಟ್ಟರೆ ಬೇರೇನೂ ಇಲ್ಲ. ಬಿದ್ದರೆ ಆಳವಾದ ಪ್ರಪಾತ.. ಆ ಬದುವಿನ ಮೇಲೆ ನಾಜುಕ್ಕಾಗಿ ಓಡಿ ವೈರಿಳೊಟ್ಟಿಗೆ ಕಾದಾಡಬೇಕು.

ಕೂಡಲೇ ಮೋನೋಜ್ ಉಪಾಯವೊಂದನ್ನು ಮಾಡಿದ. ಒಂದು ಬದುವಿನಲ್ಲಿ ತಾನು ಹೋಗುವುದೆಂದು ಇನ್ನೊಂದು ಬದುವಿನ ಮೇಲೆ ಇತರ ಸೈನಿಕರು ನಂತರ ಬರುವುದೆಂದು. ಕೊಡಲೇ ಉಪಾಯ ಕಾರ್ಯಗತವಾಯಿತು. ಅಂದುಕೊಂಡಂತೆ ಮನೋಜ್ ಒಂದು ಬದುವಿನ ಮೇಲೆ ಓಡಹತ್ತಿ ವೈರಿಗಳಿದ್ದ ಒಂದು ಕಂದಕಕ್ಕೆ ಹಾರಿದ. ಅಚಾನಕ್ಕಾಗಿ ಭಾರತೀಯ ಯೋಧನೊಬ್ಬ ಹೀಗೆ ಪ್ರತ್ಯಕ್ಷನಾದದನ್ನು ಕಂಡು ಕಕ್ಕಾಬಿದ್ದಿಯಾದ ಇಬ್ಬರು ವೈರಿ ಸೈನಿಕರು ಇನ್ನೇನು ತಮ್ಮ ಬಂದೂಕನ್ನು ತೆಗೆದು ಗುಂಡು ಹಾರಿಸಬೇಕೆನ್ನುವಷ್ಟರಲ್ಲಿ ತನ್ನ ಕಠಾರಿಯನ್ನು ತೆಗೆದು ಅವರನ್ನು ಅಲ್ಲಿಯೇ ನಿರ್ನಾಮ ಮಾಡಿದ ಮನೋಜ! ಆದರೂ ಆತನ ಬಲಭುಜಕ್ಕೆ ಗುಂಡೊಂದು ತಗುಲಿತು. ಯುದ್ದೋನ್ಮಾದ ಗುಂಗಿನಲ್ಲಿದ್ದ ಆತನಿಗೆ ಆ ಗುಂಡಿನ ನೋವು ಗೊತ್ತಾಗಲೇ ಇಲ್ಲ! ಕೂಡಲೇ ಪಕ್ಕದ ಕಂದಕಕ್ಕೆ ಜಿಗಿದ. ಅಲ್ಲೂ ಮತ್ತಿಬ್ಬರನ್ನು ಮುಗಿಸಿದ. ಈ ಬಾರಿ ಬಂದ ಗುಂಡೊಂದು ಆತನ ಸೊಂಟಕ್ಕೆ ತಗುಲಿತು. ಕೂಡಲೇ ‘ಚಿಲ್..’ ಎಂದು ರಕ್ತ ಒಮ್ಮೆಲೇ ಹಾರತೊಡಗಿತು. ಹುಚ್ಚನಿಗೆ ಆಗಲೂ ಸಮಾಧಾನವಾಗಲಿಲ್ಲ. ತನ್ನ ರಕ್ತವನ್ನೇ ತುಣಿದುಕೊಳುತ್ತ ನಂತರದ ಕಂದಕಕ್ಕೂ ಹೋದ. ಆದರೆ ಈ ಬಾರಿ ಜಾಗೃತರಾಗಿದ್ದ ವೈರಿಗಳು ಈತನ ವಿರುದ್ಧ ಮುಗಿಬಿದ್ದರು. ಅಲ್ಲೂ ಸಹ ಆತ ಕಾದಾಡಿದ. ದುರದೃಷ್ಟವಶಾತ್ ವೈರಿಪಡೆಯ ಗುಂಡೊಂದು ಈ ಬಾರಿ ಸೀದಾ ಈತನ ತಲೆಗೆ ಬಂದು ರಪ್ಪನೆ ಬಡಿಯಿತು.ಮೋನೋಜ ಕುಸಿದ.

ವೈರಿಗಳು ಈತನೆಡೆಗೆ ಗಮನ ಕೇಂದ್ರೀಕರಿಸಿರುವುದನ್ನು ಗಮನಿಸಿದ ನಮ್ಮ ಸೈನ್ಯದ ಇನ್ನೊಂದು ತಂಡ ಕೂಡಲೇ ಮುನ್ನುಗ್ಗಿತು. ನಿಮಿಷಮಾತ್ರದಲ್ಲಿ ವೈರಿಪಡೆಯನ್ನು ಸಂಹರಿಸಿ ಬೆಟ್ಟವನ್ನು ಹಿಂಪಡೆಯಿತು. ಆದರೆ ಕೆಚ್ಚೆದೆಯ ಹುಲಿಯಂತೆ ಒಬ್ಬಂಟಿಗನಾಗಿ ಹೋರಾಡಿದ ಮೋನೋಜನನ್ನು ಜವರಾಯನಿಂದ ಮಾತ್ರ ಹಿಂಪಡೆಯಲಾಗಲಿಲ್ಲ. ಸಾಯುವಾಗಲು ಆತ 'ಬಿಡಬೇಡಿ.. ಹೊಡೆಯಿರಿ.. ನಾವು ಗೆಲ್ಲಬೇಕು' ಎಂದು ಎನ್ನುತ್ತಲೇ ಕೊನೆಯುಸಿರೆಳೆದ. ಕೊನೆಗೂ ಆತ ಅಂದುಕೊಂಡಂತೆ 1999 ರ ಯುದ್ಧದಲ್ಲಿ ದೊರೆತ ನಾಲ್ಕು ಪರಮವೀರಚಕ್ರದಲ್ಲಿ ತನಗೂ ಒಂದನ್ನು ಗಿಟ್ಟಿಸಿಕೊಂಡ .' ಎಂದು ಹೇಳಿ ಕೆಲಕ್ಷಣ ಮೌನವಾದ ಲೋಕೇಶ.

'ಇಲ್ಲಿ ನೆರೆದಿರುವವರಲ್ಲಿ ಯಾರಿಗಾದರೂ ಅಂತಹ ಆಸೆಯಿದೆಯೆ? ದೇಶಕ್ಕಾಕಿ ಸರ್ವವನ್ನು ಅರ್ಪಿಸುವ 24 ವರ್ಷದ ಮನೋಜ್ ಕುಮಾರ್ ಪಾಂಡೆಯಂತಹ ವ್ಯಕ್ತಿಗಳು ಇಲ್ಲಿ ಯಾರಾದರೂ ಇರುವರೇ?' ಎಂದು ಕೇಳಿದ. ಅಂದುಕೊಂಡಂತೆ ಯಾವೊಂದು ಕೈಗಳು ಮೇಲೇಳಲಿಲ್ಲ. ಲೋಕೇಶ ಸ್ಟೇಜಿನೆಡೆಗೆ ತಿರುಗಿದ.

ಒಮ್ಮೆ ತಲೆಬಾಗಿ ನಗುವಂತೆ ಮಾಡಿ,

'ಸ್ಟೇಜಿನ ಮೇಲೆ ಆಸೀನರಾಗಿರುವ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮಹಾ ನೇತಾರರೇ ಹಾಗು ತಮ್ಮೆಲ್ಲವನ್ನು ಬಿಟ್ಟು ಇಂತಹ ಘನಕಾರ್ಯಕ್ರಮಗಳಿಗೂ ಸಮಯ ವ್ಯಹಿಸುವ ಮಹಾಜನಗಳೇ' ಎಂದು ಹೇಳಿ ಅಧಿಕೃತವಾಗಿ ತನ್ನ ಭಾಷಣವನ್ನು ಆರಂಭಿಸಿದ!

'ಹೇಳಿ. ಯಾರಿಗಾಗಿ..ಯಾವ ಸ್ವಾರ್ಥಕ್ಕಾಗಿ.. ಅದ್ಯಾವ ಸಾಧನೆಗಾಗಿ.. ಇಂತಹ ರಾಶಿ ರಾಶಿ ಹುಚ್ಚು ಜೀವಗಳು ತಮ್ಮ ಬಲಿದಾನವನ್ನು ಕೊಡುತ್ತವೆ.ಇಂದು ವ್ಯಕ್ತಿಯೊಬ್ಬ ಸಾಯುತ್ತಿದ್ದಾನೆ ಎಂದರೆ ಹನಿ ನೀರನ್ನೂ ಕೊಡದ ಜನರಲ್ಲಿ ದೇಶಕ್ಕಾಗಿ ತನ್ನ ರಕ್ತ ಮಾಂಸಗಳೊಟ್ಟಿಗೆ ಆಸೆ ಆಕಾಂಕ್ಷೆ ಜೀವನ ಸಂಸಾರವನ್ನೆಲ್ಲ ದೂರಗೊಳಿಸಿ ಅವರು ಪಡೆಯುವುದಾದರೂ ಏನು? ಏತಕ್ಕಾಗಿ ಮನೋಜ್ ಅಂದು ತನ್ನ ರಕ್ತಮಾಂಸಗಳನ್ನು ಅರ್ಪಿಸಿ ತನ್ನ ಜೀವನವನ್ನು ತ್ಯಾಗ ಮಾಡಿದ? ರಿಸೆರ್ವಶನ್ಗಾಗಿಯೋ? ಬ್ರಷ್ಟಾಚಾರಕ್ಕಾಗಿಯೋ? ಸರ್ಕಾರ ಬೀಳಿಸಿ ಹೊಸ ಚುನಾವಣೆ ಎಂದು ಮತ್ತದೇ ಕೋಟಿ ಕೋಟಿ ಹಣವನ್ನು ವ್ಯಹಿಸುವುದಕ್ಕೋ? ಮೋಸ ವಂಚನೆಗಾಗಿಯೋ ಅಥವಾ ನಮ್ಮೆಲ್ಲರ ಪ್ರೀತಿಯ ಸಾಲಮನ್ನಾಕ್ಕಾಗಿಯೋ? ಅಂತಹ ಮಹಾನ್ ವ್ಯಕ್ತಿಗಳು ಗಳಿಸಿಕೊಟ್ಟಿರುವ ನಮ್ಮ ಈ ನೆಲಜಲಗಳನ್ನು ನಾವ್ಗಳು ಬಳಸಿಕೊಳ್ತಿರೋದು ಹೇಗೆ ನೋಡಿ.
ಅವ್ರಿಗೆ ರೆಸೆರ್ವಶನ್ ಬೇಕಂತೆ. ರೆಸೆರ್ವಶನ್ ಪಡೆಯುವ ಜನರಿಗೆ ನೀನು ಸರ್ಕಾರಕ್ಕೆ ಸಮಾಜಕ್ಕೆ ಏನ್ ಮಾಡಿದ್ದೀಯಪ್ಪ ಅಂದ್ರೆ, ಏನೂ ಯಾಕೆ ಮಾಡ್ಬೇಕು? ನಾವು ಹಿಂದೆ ಉಳಿದ್ದಿದೀವಿ ಅದಕ್ಕೆ ರೆಸೆರ್ವಶನ್ ಬೇಕು ಅಂತಾರೆ. ಗಟ್ಟಿಮುಟ್ಟಾಗಿದ್ದು ದಿನಕ್ಕೆ ನಾಲ್ಕೊತ್ತು ಊಟ ಭಾರಿಸುವ ಜನ ಕುದುರೆಯಂತೆ ಓಡುತ್ತಿರುವ ಪ್ರಪಂಚದಲ್ಲಿ ಹಿಂದೆ ಉಳಿದಿರುವರಂತೆ! What a Comedy..
ಇಲ್ಯಾರೋ ಇವ್ರಿಗೆ ಸಾಲ ಮನ್ನಾ ಆಗ್ಬೇಕಂತೆ. ಸ್ವಾಮಿ, ನಮ್ಮ ಹಿರೀಕರು ಅವರ ಹಿರೀಕರೂ ಸಹ ವ್ಯವಸಾಯ, ಕೃಷಿ ಮಾಡಿಕೊಂಡೇ ಬಂದವರು. ಅವಾಗಲು ಮಳೆ ಪ್ರವಾಹ ಬೆಳೆನಾಶ ಎಲ್ಲಾವು ಆಗ್ತಾ ಇದ್ವು. ಮೇಲಾಗಿ ಆಗೆಲ್ಲ ಈಗಿನಂತೆ ಇನ್ಶೂರೆನ್ಸು, ಬೆಂಬಲ ಬೆಲೆ, ಎಪಿಎಂಸಿ ಮತ್ತೊಂದು ಮಗದೊಂದು ಅಂತ ಹತ್ತಾರು ಸವಲತ್ತುಗಳಿರಲಿಲ್ಲ. ಅಷ್ಟೆಲ್ಲ ಪ್ರತಿಕೂಲ ವಾತಾವರಣವಿದ್ದರೂ ಅವ್ರು ಕೃಷಿಯನ್ನ ಮಾಡಲಿಲ್ಲವ? ನಮ್ಮ ಅಜ್ಜ ಅಜ್ಜಿಯರನ್ನು ಹೊಟ್ಟೆ ತುಂಬಾ ತಿನ್ನಿಸಿ ಬೆಳೆಸಲಿಲ್ವ? ಅವಾಗ ಅದ್ಯಾವ ಸರ್ಕಾರ ಸಾಲ ಕೊಡ್ತಾ ಇತ್ತು. ಅದ್ಯಾವ ಬ್ಯಾಂಕು ಸಾಲ ಮನ್ನಾ ಮಾಡ್ತಾ ಇತ್ತು? ಹೇಳಿ.
ಇನ್ನು ಇವ್ರಿಗೆ ಸರ್ಕಾರನೇ ಬೇಡ್ವಂತೆ. ಇದಕ್ಕೆ ಒಂದ್ ಸಣ್ಣ ಎಕ್ಸಾಮ್ಪಲ್ ಕೊಡ್ತೀನಿ, ತಪ್ಪ್ ತಿಳ್ಕೊ ಬೇಡಿ. ಮನೇಲಿ ಮಗುವೊಂದು ಹುಟ್ಟಿ ಬುದ್ದಿ ಬಂದಮೇಲೆ ತನ್ನ ಅಪ್ಪ ಕುಡುಕ, ಸಿಡುಕ, ದಡ್ಡ ಎಂದು ಅರಿತು ಅಪ್ಪನನ್ನೇ ಚೇಂಜ್ ಮಾಡು ಅಂದ್ರೆ ಆಗುತ್ತಾ? ಇಲ್ಲ ತಾನೇ. ಹೇಗಾದ್ರು ಮಾಡಿ ಅದು ಅವನನ್ನ ತಿದ್ದೋಕ್ಕೆ ನೋಡುತ್ತೆ. ಸರಿ ಮಾಡೋಕ್ಕೆ ಪ್ರಯತ್ನಿಸುತ್ತೆ. ನಮ್ಮ ನಿಮ್ಮೆಲ್ಲರ ಈ ಸರ್ಕಾರನೂ ಮನೆಯ ತಂದೆಯ ಸಮಾನ. ಸರಿ ಇಲ್ಲ ಅಂತ ಅಪ್ಪನನ್ನೇ ಹೊರಗಟ್ಟುವುದು ಎಷ್ಟು ಸರಿ ಹೇಳಿ. ಪ್ರೆಶ್ನೆ ಮಾಡಿ. ಅರ್ಥಪೂರ್ಣವಾಗಿ ಪ್ರತಿಭಟನೆ ಮಾಡಿ. ತಪ್ಪಿದ್ರೆ ಸರಿ ಮಾಡಿಸಿ. ಯಾರಿಗ್ ಗೊತ್ತು ಹೊಸದಾಗಿ ಬರೋ ಅಪ್ಪ ಅದ್ಯಾವ್ತರದ ಕಿರಾತಕ ಆಗಿರ್ತಾನೆ ಅಂತ?’ ಎಂದ ಲೋಕೇಶ.

ಜನರ ಗುಂಪಿನಿಂದ ಒಮ್ಮೆಲೇ ಚಟಪಟ ಸದ್ದಿನ ಚಪ್ಪಾಳೆ ಹಾಗು ಒಂದೆರಡು ಜೋರಾದ ಸಿಳ್ಳೆಗಳೂ ಮೂಡಿದವು. ಹೆದರಿ ಮುದುಡಿ ನಿಂತಿದ್ದ ಆದಿಯೂ ಕೂಡ ಈಗ ಮುಂಬಂದು ಚಪ್ಪಾಳೆಯನ್ನು ಭಾರಿಸತೊಡಗಿದ. ತನ್ನ ಮುಖಕ್ಕೆ ಛಟಾರನೆ ಬಡಿದವನಂತೆ ಮಾತನಾಡಿದ ಲೊಕೇಶನನ್ನು ಗುರಾಯಿಸಿದ ಹುಲಿಯ ನಾಮಾಂಕಿತದ ರಾಜಕಾರಣಿ ಕೂಡಲೇ ಮೇಲೆದ್ದು,

'ಜನರನ್ನು ಹಿಂಸಿಸೋ ಸರ್ಕಾರ ಇದ್ರೆಷ್ಟು ಹೊದ್ರೆಷ್ಟು.. ಅಪ್ಪ, ಮನೆ ಅಂತ ಹೀಗೇನೆ ಇದ್ರೆ ನಮ್ಮನ್ನ ಕೊಳ್ಳೆ ಒಡೆಯೋದಂತೂ ಸುಳ್ಳಲ್ಲ.. ಒಮ್ಮೆ ನಮ್ಗೆ ಅವಕಾಶ ಕೊಟ್ಟು ನೋಡಿ.. ಸರ್ಕಾರ ಹೇಗೆ ನೆಡಸ್ತೀವಿ ನೋಡಿ' ಎಂದು ಅಬ್ಬರಿಸಿದ.

ಓಟಕ್ಕೆ ಗ್ರೌಂಡು ಸಿಗಲಿಲ್ಲವೆಂಬ ಸಿಟ್ಟು ಇನ್ನೇನು ತಣ್ಣಗಾಯಿತು ಎಂದು ಸ್ಟೇಜಿನಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಅಚಾನಕ್ಕಾಗಿ ಮೂಡಿದ ರಾಜಕಾರಣಿಯ ಮಾತನ್ನು ಕೇಳಿ ಲೋಕೇಶ ಪುನ್ಹ ವಾಪಸ್ಸು ಬಂದ. ಅವನನ್ನು ಉದ್ದೇಶಿಸಿ 'ಸಾರ್ ಇನ್ನೊಂದೇ ನಿಮಿಷ.. ಕೂತ್ಕೊಳಿ' ಎಂದ. ಇವನ್ಯಾರು, ಯಾವ ಪಕ್ಷದವನಿರಬಹುದು, ನನ್ನ್ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರೆಶ್ನೆಗಳು ರಾಜಕಾರಣಿಯ ಮನದೊಳಗೆ ಒಮ್ಮೆಲೇ ಮೂಡಿದವು. ಆತನ ಮಾತನ್ನು ಪಾಲಿಸುವ ಬಂಟನಂತೆ ತುಟಿಕ್ ಪಿಟಿಕ್ ಎನ್ನದೆ ಕುರ್ಚಿಯ ಮೇಲೆ ಸುಮ್ಮನೆ ಕೂತ. ಯಾಕೆಂದು ಆತನಿಗೂ ತಿಳಿಯಲಿಲ್ಲ.

ಲೋಕೇಶ ಕೂಡಲೇ ಜನರನ್ನು ಉದ್ದೇಶಿಸಿ 'ಇಲ್ಲಿ ಇರೋ ಜನರಲ್ಲಿ ಪರ್ಸ್ ಇರೋದು ಯಾರಾದರೊಬ್ಬರು ಮೇಲೆ ಬರ್ಬೇಕು' ಎನ್ನುತ್ತಾನೆ. ಒಂದರೆ ನಿಮಿಷ ಹೋದನಂತರ ಹದಿನೆಂಟು ಹತ್ತೊಂಬತ್ತರ ಚಿಗುರು ಮೀಸೆಯ ಹುಡುಗನೊಬ್ಬ ಹೆದರುತ್ತಲೇ ಮೇಲಕ್ಕೆ ಬಂದನು. ಬಹುಷಃ ಧೈರ್ಯ ಮಾಡಿ ಸ್ಟೇಜಿನ ಮೇಲೆ ಬಂದ ಮಾತ್ರಕ್ಕೇ ತನಗೆ ಏನಾದರು ಒಂದು ಇನಾಮನ್ನು ಕೊಡುವರೇನೋ ಎಂದುಕೊಂಡು ಆತ ಹೆಜ್ಜೆಯಿಡುತ್ತಿದ್ದ. ಲೋಕೇಶ ಆತನನ್ನು ಕರೆದು ಹೆಸರು ಕೇಳಿ ನಂತರ, 'ನನ್ಗೆ ಒಂದು ನೂರುಪಾಯಿ ನಿನ್ ಪರ್ಸಿನಿಂದ ಕೊಡು' ಎಂದು ಕೇಳಿದ. ಮೊದಲಿಗೆ ಗಾಬರಿಗೊಂಡ ಹುಡುಗ ಬಹುಷಃ ಈತ ಇದನ್ನು ಐನೂರು ರೂಪಾಯಿ ಮಾಡಿ ನನಗೆ ಹಿಂದುರಿಗಿಸಬಹುದು, ಇಲ್ಲದಿದ್ದರೂ ಇಷ್ಟು ಜನರ ಸಮ್ಮುಖದಲ್ಲಿ ಈತನೇನು ಕದ್ದು ಓಡುವುದಿಲ್ಲವೆಂಬ ಧೈರ್ಯದಲ್ಲಿ ಇದ್ದ ನೂರರ ಒಂದೇ ನೋಟನ್ನು ತನ್ನ ಪರ್ಸಿನಿಂದ ತೆಗೆದು ಲೊಕೇಶನ ಕೈಲಿತ್ತ. ಲೋಕೇಶ ನೋಟನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಅದನ್ನು ಮಡಚಿ ತನ್ನ ಜೇಬಿನಲ್ಲಿ ಇರಿಸಿಕೊಂಡ ಹಾಗು 'ಥ್ಯಾಂಕ್ಸ್' ಎಂದೇಳಿ ಆತನನ್ನು ಅಲ್ಲಿಂದ ತೆರಳುವಂತೆ ಹೇಳಿದ. ಮೊದಮೊದಲು ಲೋಕೇಶ ತಮಾಷೆ ಮಾಡುತ್ತಿರುವನೆಂದು ಊಹಿಸಿ ನಗಾಡಿದ ಆ ಹುಡುಗ ಯಾವಾಗ ಆತ ಹಣವನ್ನು ಕೊಡಲಿಲ್ಲವೋ ಆಗ ತುಸು ಕೋಪಿಷ್ಠನಾದ. 'ನನ್ನ್ ದುಡ್ಡ್ ಅದು .. ಯಾಕ್ರೀ ಕೊಡಲ್ಲ' ಎಂದು ದಬಾಯಿಸತೊಡಗಿದ. ಲೋಕೇಶ ಸುಮ್ಮನಿದ್ದ. ಯಾರೂ ತನ್ನ ರಕ್ಷಣೆಗೆ ಬಾರದಿದ್ದನ್ನು ಕಂಡು ಸಿಡುಕಿದ ಆ ಪೋರ ಕೂಡಲೇ ಲೊಕೇಶನ ಕೊರಳುಪಟ್ಟಿಯನ್ನು ಹಿಡಿದು 'ಕೊಡ್ತಿಯೋ ಇಲ್ವೋ..' ಎಂದು ಅರಚತೊಡಗಿದ. ಕೂಡಲೇ ನಗತೊಡಗಿದ ಲೋಕೇಶ ಆತನನ್ನು ಸಂತೈಸಿ ತನ್ನ ಜೇಬಿನಲ್ಲಿದ್ದ ನೂರರ ನೋಟನ್ನು ಆತನಿಗೆ ಕೊಟ್ಟು ಕಳುಹಿಸಿದ ಹಾಗು ಸ್ಟೇಜಿನ ಮೇಲಿದ್ದ ರಾಜಕಾರಣಿಗಳನ್ನು ನೋಡುತ್ತಾ 'ಇಷ್ಟೇ ಅಲ್ವ ಸಾರ್ .. ಸರ್ಕಾರ ನೆಡೆಸೊದು ಅಂದ್ರೆ' ಎಂದು ಸುಮ್ಮನಾದ.

'ನಮ್ಮ ದುಡ್ಡನ್ನು ನಮ್ಮಿಂದಲೇ ಪಡೆದು ವಾಪಾಸ್ ಕೊಡದೆ ಸತಾಯಿಸುವುವ ಈ ಪ್ರಕ್ರಿಯೆಯನ್ನೇ ಡೆಮಾಕ್ರಸಿ ಎನ್ನಬಹುದೇ?’ ಎಂದೇಳಿ ಜನರೆಡೆಗೆ ತಿರುಗಿ ‘ನಾವುಗಳೂ ಏನ್ ಕಡಿಮೆ ಇಲ್ಲ ಬಿಡಿ.. ಆ ಹುಡುಗ ಕೊರಳುಪಟ್ಟಿ ಹಿಡಿದು ಕೇಳಿದಂತೆ ನಾವುಗಳೂ ಸರ್ಕಾರಗಳನ್ನು ಕೇಳುವುದು ಯಾವಾಗ? ನಮ್ಮ ಅಧಿಕಾರವನ್ನು ಚಲಾಯಿಸುವುದು ಯಾವಾಗ? ನಾವುಗಳು ಎಲ್ಲಿಯವರೆಗೂ ಹೀಗೆಯೇ ಇರುತ್ತೇವೆಯೋ ಅಲ್ಲಿಯವರೆಗೂ ಇಂತಹ ಸರ್ಕಾರ ಉರುಳಿಸುವ ಕಾಲಹರಣ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ.. ಸರ್ಕಾರ ನೆಡೆಯೋದು ಜನರಿಂದಲೇ ಹೊರತು ರಾಜಕಾರಣಿಗಳಿಂದಲ್ಲ ಎಂಬ ಕಡುಸತ್ಯವನ್ನು ಹೊರಗೆಡವಿ ನಾವುಗಳು ಎಂದಿಗೆ ಮುನ್ನಡೆಯುವುದಿಲ್ಲವೋ ಅಲ್ಲಿಯವರೆಗೂ ಏನೇನೂ ಸಾಧ್ಯವಿಲ್ಲ. ಒಮ್ಮೆ ಈ ಸತ್ಯವನ್ನು ಅರಿತರೆ ನಮಗೆ ಯಾವ ಸರ್ಕಾರವಾದರೇನು..ಅದ್ಯಾವ ಮಂತ್ರಿಯಾದ್ರೇನು, ಅಲ್ವೇ.. So, ಆಯ್ಕೆನೂ ನಮ್ಮದೇ, ಅನುಭವಿಸುವವರೂ ನಾವುಗಳೇ' ಎಂದು ತನ್ನ ಎರಡನೇ ರೌಂಡಿನ ಮಿನಿ ಭಾಷಣವನ್ನು ಮುಗಿಸಿ ಕೆಳಗಿಳಿದ. ನೆರೆದಿದ್ದ ಜನರ ಚಪ್ಪಾಳೆಯ ಸದ್ದು ಮುಗಿಲು ಮೂಡಿತು. ಕಟ್ಟಾ ಕಾರ್ಯಕರ್ತರೂ ಸಹ ಪಕ್ಷದ ವಿರುದ್ಧ ಸುಪ್ತವಾಗಿ ಅಡಗಿದ್ದ ತಮ್ಮ ಸಿಟ್ಟನ್ನು ಹೊರಹಾಕುವಂತೆ ಇನ್ನೂ ಜೋರಾಗಿಯೇ ಚಪ್ಪಾಳೆಯನ್ನು ತಟ್ಟತೊಡಗಿದರು. ಅಷ್ಟರಲ್ಲಾಗಲೇ ರಾಜಕಾರಣಿಗಳ ಕೆಂಗಣ್ಣುಗಳು ಲೊಕೇಶನನ್ನು ಗುರಾಯಿಸ ಹತ್ತಿದ್ದವು. ಹುಲಿಯ ಹೆಸರಿನ ರಾಜಕಾರಣಿ ಮೈಕಿನ ಬಳಿಗೆ ಬರಲು ಅಂಜತೊಡಗಿದ. ದೇವರ ಅನುಗ್ರಹವೆಂಬಂತೆ ನಿರೂಪಕಿಯೊಬ್ಬರು ಬಂದು ವಂದನಾ ಭಾಷಣವನ್ನು ಪ್ರಾರಂಭಿಸದರು.

ನೆರೆದಿದ್ದ ಜನರು ಬಂದು ಲೊಕೇಶನ ಕೈಕುಲುಕಿ ಅಭಿನಂದಿಸತೊಡಗಿದರು. ಕೊಡಲೇ ಬಲವಾದ ಕೈಯೊಂದು ಲೊಕೇಶನ ಭುಜದ ಮೇಲೆ ಬಿಗಿಯಾಗಿ ಬಂದೆರಗಿತು. ಹಿಡಿತ ಗಟ್ಟಿಯಾದಂತೆ ಲೊಕೇಶನ ಭುಜದ ಸ್ನಾಯುಗಳು ನೋಯತೊಡಗಿ ಆತ ಕೊಸರಾಡತೊಡಗಿದ. ಬಹುಷಃ ಆ ರಾಜಕಾರಣಿ ಕೋಪಗೊಂಡು ತನನ್ನು ಥಳಿಸಲು ಬಂದಿದ್ದಾನೆ ಎಂದಾದರೆ ಆದದ್ದು ಆಗಲಿ ಒಂದು ಕೈ ನೋಡೇ ಬಿಡುವ ಎಂದು ಹಿಂದಕ್ಕೆ ತಿರುಗಿ ನೋಡುತ್ತಾನೆ ತನ್ನ ಜಮೀನಿನ ಒಡೆಯ ಸಾಲ್ದಾನ ಜೋಸೆಫ್ ನಗುತ್ತಾ ಅಲ್ಲಿ ನಿಂತಿದ್ದಾರೆ. ಗಣ್ಯವ್ಯಕ್ತಿಯೊಬ್ಬರು ತನ್ನ ಭುಜವನ್ನು ಹೀಗೆ ಅಧುಮುತ್ತಿರುವುದು ಸಿಟ್ಟಿನಿಂದಲ್ಲ ಪ್ರಶಂಸೆಯಿಂದ ಎಂದರಿತು ಲೊಕೇಶನು ಬಾಲಸಹಜ ನಗೆಯನ್ನು ಬೀರುತ್ತಾನೆ.

'ಲೋಕೇಶ್ , What a speech man .. I appreciate it' ಎಂದು, 'ನೋಡಪ್ಪ ನೀನ್ ಮುಖಕ್ಕೆ ಹೊಡೆದ ಹಾಗೆ ಮಾತಾಡಿ ನನ್ನ ಖಾಸಾ ದೋಸ್ತ್ನ ಮುಖ ಸೆಪ್ಪೆಯಾಗುವಂತೆ ಮಾಡಿದ್ದಿ. ನೋಡ್ ಅಲ್ಲಿ ಹೇಗೆ ನಿಂತಿದ್ದಾನೆ' ಎಂದು ಹುಲಿಯ ಹೆಸರಿನ ರಾಜಕಾರಣಿಯನ್ನು ಅವರು ತೋರಿಸುತ್ತಾರೆ. ಆತ ಜಿಲ್ಲೆಯ ಇತರೆ ಹಿರಿಯ ರಾಜಕಾರಣಿಗಳು ಹೇಳುತ್ತಿದ್ದ ಬುದ್ಧಿಮಾತನ್ನು ಕೇಳುವಂತೆ ಕೈಗಟ್ಟಿಕೊಂಡು ತಲೆತಗ್ಗಿಸಿ ನಿಂತಿದ್ದಾನೆ. ಅಂದುಕೊಂಡ ಕಾರ್ಯಕ್ರಮ ಅಂದುಕೊಂಡಂತೆಯೇ ನೆಡೆಯದಿದ್ದನ್ನು ಕಂಡು ಎಲ್ಲರ ಮುಖದಲ್ಲೂ ಸೂತಕದ ಛಾಯೆಯೊಂದು ಮನೆಮಾಡಿದೆ. ಸಾಲ್ದಾನ ಜೋಸೆಫ್ ಲೋಕೇಶನಿಗೆ ಈ ಭಾಷಣ ಕಲೆಯನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಲ್ಲೆಲ್ಲ ಇದು ಸಹಾಯಕ್ಕೆ ಬರುತ್ತದೆ ಎಂದು ವಿವರಿಸತ್ತಾ ಕೊನೆಗೆ 'ನಿನ್ನ ಶುಂಠಿಗದ್ದೆಯನ್ನು ನೋಡಿ ತುಂಬಾ ದಿನ ಆಯ್ತು ಮಾರಾಯ, ಬಾ ಹೋಗಿಬರುವ' ಎಂದು ತಮ್ಮ ಜೀಪಿನಲ್ಲಿ ಲೊಕೇಶನನ್ನು ಕೂರಿಸಿಕೊಂಡು ಅಲ್ಲಿಂದ ಹೊರಟರು.

ಮನೋಜ್ ಕುಮಾರ್ ಪಾಂಡೆಯ ಬಗ್ಗೆ ಖುಷಿಗೆ ಫೋನಿನಲ್ಲಿ ವಿವರಿಸುತ್ತಾ ಆದಿ ಓಡುತ್ತಲೇ ರೂಮನ್ನು ಸೇರಿದ.

'ಇಲ್ಲ ಸಾರ್ , ಯಾಕೋ ಇವುಗಳನ್ನ ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ' ಕಂದುಬಣ್ಣಕ್ಕೆ ತಿರುಗಿದ್ದ ಶುಂಠಿಗದ್ದೆಯನ್ನು ನೋಡಿ ಯಾಕಿನ್ನು ಕಟಾವು ಮಾಡಿಲ್ಲವೆಂದು ಕೇಳಿದ ಸಾಲ್ದಾನಾ ಜೋಸೆಫ್ರಿಗೆ ಲೋಕೇಶ ಉತ್ತರಿಸಿದ.

'ವಾಟ್ ಡು ಯು ಮೀನ್ ಬೈ ಮನಸ್ಸೇ ಬರ್ತಾ ಇಲ್ಲ?! ಇವಾಗ್ ಕಿತ್ರೆ ಒಳ್ಳೆ ಮಾರ್ಕೆಟ್ ರೇಟ್ ಇದೆ ..ಶುಂಠಿ ಇಷ್ಟೇ ಬರೋದು .. ಜಾಸ್ತಿ ಗ್ರೀಡಿನೆಸ್ ಒಳ್ಳೇದಲ್ಲ ಯಂಗ್ ಮ್ಯಾನ್'

'ಹಾಗಲ್ಲ ಸಾರ್ ..' ಎಂದೇಳಿದ ಲೋಕೇಶ ನಂತರ ಏನೋ ಹೇಳಲೊಗಿ ಸುಮ್ಮನಾದ. ಅವನ ದ್ವಂದ್ವವನ್ನು ಅರಿತ ಸಾಲ್ದಾನಾ ಜೋಸೆಪ್,

'ಪರವಾಗಿಲ್ಲ ಹೇಳಪ್ಪ ..' ಎಂದು ಭುಜವನ್ನು ತಟ್ಟಿದರು.

'ಸಾರ್ ಅದು .. ನಾನ್ ಹೇಳ್ತಿನಿ, ಆದ್ರೆ ನೀವು ಬೈಬಾರ್ದು..'

'ಸರಿ ಬೈಯಲ್ಲ .. ಹೇಳು'

'ಸಾರ್ ಏನೋ ಗೊತ್ತಿಲ್ಲ. ಬಹುಶಃ ನಾನೇ ನೆಟ್ಟು ಬೆಳೆಸಿರೋದ್ರಿಂದ ಅನ್ಸುತ್ತೆ ನನಗೆ ಅವುಗಳನ್ನು ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ .. ನನ್ನ ಮಕ್ಕಳನ್ನು ನಾನೇ ಕೈಯಾರೆ ಸಾಯಿಸಿಬಿಡುತ್ತೇನೋ ಎಂಬ ಭಯವೊಂದು ನನ್ನ ಕಾಡುತ್ತೆ ಸಾರ್.. I don’t know but I can’t !!'

ಸ್ವಲ್ಪ ಹೊತ್ತು ಸುಮ್ಮನಾದ ಅವರು ಲೊಕೇಶನನ್ನು ನೋಡುತ್ತಾ ಪ್ರಶಂಸೆಯ ನಗೆಯನ್ನು ಬೀರತೊಡಗಿದರು. ಕೆಲಸಮಯದ ನಂತರ ಮೌನವಾಗಿ,

'ನೀನೊಬ್ಬ ಪರಿಪೂರ್ಣ ಕೃಷಿಕ ಆಗ್ತಾ ಇದ್ದೀಯ ಲೋಕೇಶ್.. ಯಾವಾಗ ಕೃಷಿಕನೊಬ್ಬನಿಗೆ ತನ್ನ ಹಾಗು ಪೈರಿನ ಸಂಬಂಧ ಕೇವಲ ಹಣ ಹಾಗು ಲಾಭದ ಸಂಬಂಧವಲ್ಲವೆಂಬುದು ಅರಿವಾಗುತ್ತದೆಯೋ ಆಗಲೇ ಆತ ಒಬ್ಬ ಕಂಪ್ಲೀಟ್ ಫಾರ್ಮರ್ ಅಂತಾ ಅನ್ನಿಸಿಕೊಳ್ಳೋದು. ಪ್ರಕೃತಿ ಇಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕೊಟ್ಟಿದ್ದಾಳೆ. ಪ್ರಾಣಿಗಳಿಗೆ, ಸಸ್ಯಗಳಿಗೆ ಅದು ಗೊತ್ತು ಆದರೆ ಮನುಷ್ಯರಿಗಲ್ಲ. ಹಸಿವನ್ನು ನೀಗಿಸಲು ಸಸ್ಯಗಳ ಮೂಲಕ ಹಣ್ಣು ತರಕಾರಿಗಳನ್ನು ಕೊಟ್ಟರೂ ಮಾನವ ಲಗ್ಗೆ ಹಿಟ್ಟದ್ದು ಮಾತ್ರ ಆ ಸಸ್ಯಗಳ ಕಾಂಡ ಬೇರುಗಳಿಗೇ. ಜಗತ್ತಿನಲ್ಲಿ ಎಲ್ಲರು ಒಟ್ಟಿಗೆ ಬಾಳಿ ಎಂದು ಇತರ ಜೀವಸಂಕುಲಗಳನ್ನು ಸೃಷ್ಟಿಸಿದರೆ ಬುದ್ದಿಯಿರುವ ಮಾನವ ಅವುಗಳೊಟ್ಟಿಗೆ ಬಾಳುವುದ ಬಿಟ್ಟು ಹಸಿವು ಹಾಗಿರಲಿ ತೃಣಮಾತ್ರದ ಮೋಜಿಗೆ ಅವುಗಳ ಚರ್ಮವನ್ನು ಸುಲಿಯತೊಡದಿದ. ತಾನೇ ಸೃಷ್ಟಿಸಿದ ನೆಲವೇನೋ ಎಂಬಂತೆ ಕಾಡು ಕಡಿದು ಬೇಲಿ ಜಡಿದು ಇದು ತನ್ನದು ಎಂದು ಬೀಗತೊಡಗಿದ. ಇಲ್ಲಿ ಇರುವುದೆಲ್ಲ ಸ್ವಾರ್ಥಕ್ಕೆ ಲೋಕೇಶ್.. ಫಸ್ಟ್ ಟೈಮ್ ಇನ್ ಮೈ ಲೈಫ್ ಐಮ್ ಸೀಯಿಂಗ್ ಆ ಪರ್ಸನ್ ಲೈಕ್ ಯು .. ಡೋಂಟ್ ವರಿ .. ನಿಂಗೆ ಕಟಾವು ಮಾಡೋಕ್ಕೆ ಇಷ್ಟ ಇಲ್ಲ ಅಂದ್ರೆ ಬೇಡ .. ಮಾಡ್ಬೇಡ .. ಇನ್ನು ಸ್ವಲ್ಪ ತಿಂಗಳು ಹಾಗೆ ಬಿಟ್ರೆ ಕೊನೆಗೆ ಅದು ಬೀಜದ ಶುಂಠಿಯಾಗಿಯಾದರೂ ಮಾರ್ಪಾಡಾಗುತ್ತೆ.. ಇನ್ಫ್ಯಾಕ್ಟ್ ಈಗ ಬೀಜದ ಶುಂಠಿಗೇನೆ ಮಾರ್ಕೆಟ್ನಲ್ಲಿ ಒಳ್ಳೆ ಧಾರಣೆ ಇರುವುದು. See, ಪರಿಸರ ನಾವು ಏನ್ ಮಾಡ್ದೆ ಇದ್ರೂ ಪ್ರತಿಫಲ ಅನ್ನೋದನ್ನ ಕೊಟ್ಟೇ ಕೊಡುತ್ತೆ' ಎಂದು ನಗುತ್ತಾರೆ.

ಅವರ ಹಿತವಚನಗಳು ಲೋಕೇಶನ ಆತ್ಮವಿಶ್ವಾಸವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ತನ್ನಂತೆಯೇ ಯೋಚಿಸುವ ವ್ಯಕ್ತಿಯೊಬ್ಬರ ಒಳಪರಿಚಯ ಆತನಿಗೆ ಸಂತೋಷವನ್ನು ಉಂಟುಮಾಡುತ್ತದೆ.

ಗದ್ದೆಯ ಮತ್ತೊಂದು ಬದುವಿನಲಿದ್ದ ಅಜ್ಜಿಯ ಗುಡಿಸಲಿಗೆ ಹೋಗಿ ಹೊಟ್ಟೆತುಂಬ ಅಂಬಲಿಯನ್ನು ಕುಡಿದು ಅವರು ವಾಪಸ್ಸಾಗುತ್ತಾರೆ.

ಸಂಜೆ ಮತ್ತೊಂದು ಸುತ್ತು ಗದ್ದೆಗೆ ಬರುತ್ತಾನೆ ಲೋಕೇಶ. ಈ ಭಾರಿ ಆತನೊಟ್ಟಿಗಿದ್ದದ್ದು ಶಶಿ. ಗದ್ದೆಯ ಬದುವಿನ ಮೇಲೆ ಜೀವನದ ಬಗೆಗಿನ ನೂರಾರು ಮಾತುಗಳನ್ನಾಡಿ ಪಡುವಣದಲ್ಲಿ ಸೂರ್ಯ ಕಣ್ಮರೆಯಾಗುವವವರೆಗೂ ಇಬ್ಬರು ಅಲ್ಲಿ ಕೂತಿದ್ದರು. ತನ್ನ ಗದ್ದೆಯ ಪಕ್ಕಕ್ಕೆ ಯಾರೋ ಒಬ್ಬರು ಸಣ್ಣದಾಗಿ ಮಾಡಿದ್ದ ಭತ್ತದ ಗದ್ದೆಯ ತಿಳಿ ಹಸಿರ ಬಣ್ಣ ಲೊಕೇಶನನ್ನು ಆಕರ್ಷಿಸಿತು. ಲೋಕೇಶ ಆ ಗದ್ದೆಯನ್ನೇ, ಅವುಗಳಲ್ಲಿದ್ದ ಭತ್ತದ ತೆನೆಗಳನ್ನೇ ದೃಷ್ಟಿಯಿಟ್ಟು ನೋಡುತ್ತಾನೆ. ಆ ಒಂದೊಂದು ತೆನೆಗಳಲ್ಲೂ ಆತನಿಗೆ ಒಂದು ಮುಖಗಳು ಗೋಚರಿಸುತ್ತವೆ.

ಅಲ್ಲೊಂದು ಅಂಗಿಯರಿದಿರುವ ಅಳುವ ಮಗುವಿದೆ, ಸಣಕಲು ದೇಹದ ನೆಲದ ಮೇಲೆ ಬಿದ್ದು ನರಳುತ್ತಿರುವ ಒಬ್ಬ ಹಿರಿಯ ವೃದ್ಧನಿದ್ದಾನೆ, ಯುದ್ಧದ ಕಾರ್ಮೋಡ ಕವಿದಿರುವ ಪ್ರದೇಶದಲ್ಲಿ ಚಾವಣಿ ಕುಸಿದಿರುವ ಮನೆಯ ಮೂಲೆಯಲ್ಲಿ ಅಪ್ಪನೊಬ್ಬ ತನ್ನ ಸಂಸಾರವನ್ನು ತಬ್ಬಿಕೊಂಡು ನಿಂತಿದ್ದಾನೆ ಹಾಗು ನಾಯಿಮರಿಯೊಂದು ಹಸಿತದ ಹೊಡೆತಕ್ಕೆ ದಿಕ್ಕೆಟ್ಟು ಅತ್ತಿಂದ್ದಿತ್ತ ಒಡಾಡುತ್ತಿದೆ.

'ನೋಡು ಶಶಿ .. ಆ ಭತ್ತದ ಗದ್ದೆ ಅದೆಷ್ಟು ಜನರ ಹಸಿವನ್ನು ನಿವಾರಿಸುತ್ತದೆ ಅಂತ. ಇಲ್ಲಿ ಹಸಿರಾಗಿ ಮುಂದೆ ಯಾರದೋ ಜೀವದಲ್ಲಿ ಜೀವವಾಗುವ ಅದು ಕಳೆದ ಜನ್ಮದಲ್ಲಿ ಯಾವುದೊ ಮಹಾನ್ ವ್ಯಕಿಯಾಗಿ ಹುಟ್ಟಿರಬೇಕು ಅದಕ್ಕೆ ಈಗ ಅದು ಹಸಿವ ನೀಗಿಸುವ ಪುಣ್ಯ ಗದ್ದೆಯಾಗಿದೆ ' ಎಂದು ಸುಮ್ಮನಾಗಿ .. 'ನಾನು ಗದ್ದೆಯನ್ನು ಕಟ್ಟಬೇಕು .. ಆ ಮೂಲಕ ಅರ್ಥಪೂರ್ಣ ಜೀವಗಳನ್ನು ಅಲ್ಲಿ ಬೆಳೆಸಬೇಕು..' ಎಂಬ ತನ್ನ ಮುಂದಿನ ಗುರಿಯ ಮಾತನಾಡುತ್ತಾನೆ.

ಶಶಿಯ ಮಂದಹಾಸದ ಮೌನ ಲೊಕೇಶನ ಮಾತುಗಳಿಗೆ ಪೂರಕವಾಗಿರುತ್ತದೆ.

Continues ...

Friday, July 17, 2020

ಪಯಣ - 12

ಅದು ಹತ್ತು ಹನ್ನೆರೆಡರ ಎಳೆಯ ವಯಸ್ಸಾದರೂ ಪ್ರೀತಿ ಪ್ರೇಮವೆಂಬ ಅಸಹಜ ಭಾವವೊಂದು ಆ ಮುಗ್ದ ಮನಸ್ಸುಗಳಲ್ಲಿ ಮನಸ್ಸುಗಳಲ್ಲಿ ಹಾಸುಹೊಕ್ಕುವ ಸಮಯವದು.

'ಲೋ .. ರಾಕಿ ಕಟ್ಟಿದ್ದೀನಿ .. ದುಡ್ಡ್ ಕೊಡೊ..' ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಅನವಶ್ಯಕವಾಗಿ ಆದಿಯ ವೈರಿಯಾಗಿದ್ದ ಹುಡುಗನ ಕೊರಳು ಪಟ್ಟಿಯನ್ನಿಡಿದು ಕೇಳತೊಡಗಿದಳು ಖುಷಿ. ಇಡೀ ಕ್ಲಾಸಿನಲ್ಲೇ ತನ್ನೊಬ್ಬನಿಗೆ ಮಾತ್ರ ರಾಕಿ ಕಟ್ಟಿಸಿಕೊಳ್ಳುವ ಅಧಿಕಾರವಿದೆಯೇನೋ ಎಂಬಂತೆ ಆತ ಬೀಗುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ತರಗತಿಯ ಇತರ ಹುಡುಗಿಯರೂ ಆತನನ್ನು ಸುತ್ತುವರೆದರು ಹಾಗು ತಮ್ಮ ಜೇಬಿನಲ್ಲಿದ್ದ ಬಣ್ಣ ಬಣ್ಣದ ರಾಖಿಯನ್ನು ಹೊರತೆಗೆದು ಅವನ ಕೈ ತುಂಬೆಲ್ಲ ಕಟ್ಟತೊಡಗಿದರು.

ಅದು ಚಿತ್ತಾಕರ್ಷಕ ರಾಖಿಯ ಮೋಡಿಯೋ ಅಥವಾ ತನ್ನನು ಖುಷಿ ‘ಇಗ್ನೋರ್’ ಮಾಡಿದಳೊ ಎಂಬ ಬಾಲಸಹಜ ಕೋಪವೋ ಅಥವಾ ತನ್ನ ಮುಂದೆ ಹುಡಗಿಯರ ಮುದ್ದು ಕೃಷ್ಣನಾದ ತನಗಿಂದಲೂ ಹೆಚ್ಚು ಅಂಕಗಳನ್ನು ಪಡೆಯುವ ಹುಡುಗನ ಮೇಲೆ ಮೂಡಿದ ಅಸೂಯೆಯೋ ಏನೋ ಒಟ್ಟಿನಲ್ಲಿ ಚೀರಾಡುತ್ತಿದ ಗುಂಪಿನಿಂದ ದೂರಬಂದು ಶಾಲೆಯ ಕಟ್ಟೆಯ ಮೇಲೆ ಕೂತ ಆದಿ.

ಅದೆಷ್ಟೋ ಹೊತ್ತಿನ ನಂತರ ಕ್ಲಾಸಿನಿಂದ ಹೊರಬಂದ ಖುಷಿ ಆದಿಯನ್ನುದ್ದೇಶಿಸಿ,

'ಇಲ್ಯಾಕೋ ಕೂತಿದ್ದೀಯ' ಎಂದು ಕೇಳಿದಳು.

'ಹೋಗೆ, ನನ್ನ್ ಹತ್ರ ಮಾತಾಡ್ಬೇಡ! ಇನ್ಮೇಲೆ ನಾನ್ ನಿನ್ನೊಟ್ಟಿಗೆ ಕಲ್ಲಾಟ ಆಡಲ್ಲ .. ನಮ್ಮ್ ಮನೆ ಹತ್ರ ಈಗ ಹೊಸ ಫ್ರೆಂಡ್ ಬಂದಿದ್ದಾಳೆ, ನಾನ್ ಅವಳೊಟ್ಟಿಗೇ ಇನ್ಮುಂದೆ ಕಣ್ಣಾ ಮುಚ್ಚಾಲೆ ಆಡ್ತೀನಿ..' ಆದಿಯ ಮುಖ ರಸ್ತೆಬದಿಯ ಆಲೂಬೋಂಡದಂತೆ ಊದಿಕೊಂಡಿತ್ತು.

'ಏನಾಯಿತೋ ಆದಿ.. ಯಾರಾದ್ರು ಬೈದ್ರಾ' ತನ್ನ ಸಹಜ ಕಳವಳದ ಧ್ವನಿಯಲ್ಲಿ ಆಕೆ ಕೇಳಿದಳು.

'ನೀನ್ ಅವ್ನಿಗೆ ಮಾತ್ರ ರಾಖಿ ಕಟ್ದೆ.. ನಂಗಿಲ್ವ?'

ಆದಿಯ ಪ್ರೆಶ್ನೆಗೆ ನಗತೊಡಗಿದ ಖುಷಿ 'ನಾನ್ ನಿಂಗೆ ರಾಕಿ ಕಟ್ಟಲ್ಲ ಕಣೋ..' ಎಂದಳು.

ಆದಿಯ ಕೋಪ ಇನ್ನೂ ವಿಪರೀತವಾಯಿತು. ತನ್ನೊಟ್ಟಿಗೆ ಕಲ್ಲಾಟವನ್ನು ಆಡಲು ತಂದಿದ್ದ ಕಲ್ಲುಗಳನ್ನು ದೂರಕ್ಕೆ ಎಸೆದು ಆದಿ ತರಗತಿಯ ಒಳಗೆ ಓಡಿದ.

'ಆದಿ ನಿಲ್ಲೋ .. ನಾನು ಬರ್ತೀನೋ ಕಣ್ಣಾ ಮುಚ್ಚಾಲೆ ಆಡೋದಿಕ್ಕೆ.. ನಿಲ್ಲೋ..'

ದಶಕದ ಹಿಂದಿನ ಹಿಂದಿ ಹಾಡುಗಳನ್ನು ಹಾಕಿ ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಅಂಗಾತ ಮಲಗಿದ್ದ ಆದಿ, ಆ ಹಾಡುಗಳು ಚಿತ್ರೀಕರಣಗೊಳುತ್ತಿದ್ದ ಕಾಲದ ತನ್ನ ಹಾಗು ಖುಷಿಯ ನೆನಪುಗಳನ್ನು ಕೆದಕತೊಡಗಿದ. ಆಕೆ ತನ್ನ ಬಿಟ್ಟು ಯಾರೊಟ್ಟಿಗೂ ಮಾತಾಡಬಾರದು, ಸೇರಬಾರದು, ಆಟವಾಡಬಾರದೆಂಬ ಹಠ ಈತನದ್ದಾರೆ ಇಡೀ ಶಾಲೆಗೆ ಶಾಲೆಯೇ ಖುಷಿಯನ್ನು ಸುತ್ತುವರೆಯುತ್ತಿತ್ತು. ದೂರದಿಂದಲೇ ಆಕೆಯ ನೀಳಜಡೆಯನ್ನು ದಿಟ್ಟಿಸುತ್ತಾ ಆಕೆ ಗುಂಪಿನಿಂದ ಹೊರಬರುವುದನ್ನೇ ಆತ ಕಾಯುತ್ತಿದ್ದ ಹಾಗು ಅಕೆಗೆಂದೇ ಹತ್ತಾರು ಕಲ್ಲುಗಳನ್ನು ತನ್ನ ಚಡ್ಡಿಯ ಜೇಬಿನಲ್ಲಿ ಇರಿಸಿಕೊಂಡಿರುತ್ತಿದ್ದ. ಆ ಎಳೆಯ ವಯಸ್ಸಿನಲ್ಲೇ ಕ್ಲಾಸಿನ ಇತರ ಹುಡುಗರು ಆದಿ ಖುಷಿಯೊಟ್ಟಿಗೆ ಇರಬಯಸುತ್ತಿದ್ದದ್ದನು ಕಂಡು ಕತ್ತಿ ಮಸೆಯುತ್ತಿದ್ದರು ಹಾಗು ಸುಖಾಸುಮ್ಮನೆ ಆದಿಯೊಟ್ಟಿಗೆ ಕಾದಾಡುತ್ತಿದ್ದರು! ರಾತ್ರಿಯ ವೇಳೆ ಕೆಲವೊಮ್ಮೆ ಮನೆಯವರೆಲ್ಲ ಹೊರಗೆ ಬಂದು ಮೆಟ್ಟಿಲುಗಳ ಮೇಲೆ ಕೂತರೆ ಈತ ತಮ್ಮ ಮನೆಯ ಕಾಂಪೌಂಡಿನ ಮೇಲೆ ಕೂತು ತಿಂಗಳ ಬೆಳಕಿನ ಆ ತಂಪು ರಾತ್ರಿಯಲ್ಲಿ ಒಂದೆರಡು ಕಿಲೋಮೀಟರ್ ಗಳು ದೂರವಿದ್ದ ನಗರದ ಮಧ್ಯಭಾಗದ ತೆಂಗಿನ ಮರಗಳ ಸಾಲನ್ನೇ ಧಿಟ್ಟಿಸುತ್ತಿದ್ದ. ಖುಷಿಯ ಮನೆಯೂ ಅಲ್ಲಿಯೇ ಇದ್ದರಿಂದ ಬಹುಷಃ ಅವಳೂ ಹೀಗೆ ಹೊರಬಂದು ನನನ್ನು ನೋಡುತ್ತಿರಬಹುದೆಂಬ ಅಮಾಯಕ ಕಲ್ಪನೆಯಿಂದ! ಅದೇನಕ್ಕೋ ತಿಳಿಯದು ಆ ಒಂದು ಶುಕ್ರವಾರದಂದು ಆದಿ ಆಕೆಯಿಂದ ಎರಡು ರೂಪಾಯಿ ಪಡೆದು ಮುಂದಿನ ವಾರದ ಸೋಮವಾರದಂದು ತಂದು ಹಿಂದಿರುಗಿಸಿದ್ದ. ಅಂತೆಯೇ ಶಾಲೆಯಲ್ಲಿ ನೆಡೆಸುತ್ತಿದ್ದ ಸಂಗೀತ ಕ್ಲಾಸಿಗೆ ಸೇರಿ ಅಲ್ಲಿನ ಶಿಕ್ಷಕಿ ಖುಷಿಯ ಧ್ವನಿ ಇಡಿದಿಡಿದು ಬಿಡುತ್ತಿದೆ ಎಂದು, ನಂತರದ ದಿನಗಳಿಂದ ಆಕೆ ಕ್ಲಾಸಿಗೆ ಬಾರದೆ ಹೋದಾಗ ಈತನೂ ಆ ಕ್ಲಾಸಿಗೆ ಗುಡ್ ಬೈ ಹೇಳಿದ್ದ. ಅರೆಬರೆ ನಾಟ್ಯದ ಸ್ಟೆಪ್ಪುಗಳನ್ನೇ ಕಲಿತು ಶಾಲೆಯ ಯೂನಿಯನ್ ಡೇ ಗೆ ಚಿತ್ರ ವಿಚಿತ್ರವಾಗಿ ಕುಣಿದು ಕುಪ್ಪಳಿಸಿದ ಆ ದಿನಗಳು ಅದೆಂತೆಂಹ ಜಂಜಾಟದ ದಿನಗಳಲ್ಲೂ ಆದಿಯ ಮನಸ್ಸಿಗೆ ಒಂದು ಮಂದಹಾಸವನ್ನು ನೀಡುತ್ತಿದ್ದವು. ಮುಖದ ಮೇಲೊಂದು ಸಂತೋಷದ ಕಳೆಯನ್ನು ಹೊತ್ತಿಸುತ್ತಿದ್ದವು.

ಸೀಲಿಂಗ್ ಫ್ಯಾನು ಗರಗರನೆ ತಿರುಗುತ್ತಲಿತ್ತು. 'ನಾ ತುಮ್ ಜಾನೋ ನ ಹಮ್..' ಎಂದು ಲಕ್ಕಿ ಅಲಿ ಪದಗಳಿಗೆ ಜೀವ ತುಂಬಿ ಹಾಡುತ್ತಿದ್ದ. ಕೂಡಲೇ ಆದಿಯ ಫೋನು ಟನ್ ಟನ್.. ಎಂಬ ಸದ್ದಿನೊಂದಿಗೆ ಬೆಳಗತೊಡಗಿತು. ರಾತ್ರಿ ಹನ್ನೊಂದರ ನಂತರ ತನ್ನ ಫೋನು ಸದ್ದು ಮಾಡಿತೆಂದರೆ ಸಾಕು ಆದಿಯ ಹೃದಯ ಅಮಾನುಷವಾಗಿ ಬಡಿಯತೊಡಗುತ್ತದೆ. ಟನ್ಗುಟ್ಟ ಆ ಎರೆಡು ಮೆಸೇಜುಗಳು ಖುಷಿಯ ಮೆಸ್ಸೇಜುಗಳೇ ಎಂದು ಹೃದಯ ಹೇಳುತ್ತಿರಲು, ಅವು ಆಕೆಯ ಮೆಸೇಜುಗಳೇ ಆಗಿರಲಿ ಎಂದು ಮನಸ್ಸೂ ಸಹ ಬೇಡಿಕೊಳ್ಳುತ್ತಿತ್ತು. ವಾರಗಳ ನಂತರ ಮೊದಲ ಬಾರಿಗೆ ಬಂದಿರಬಹುದಾದ ಆಕೆಯ ಮೆಸೇಜುಗಳು ಆದಿಯ ದುಗುಡವನ್ನು ದೂರ ಮಾಡಿದ್ದವು. ಆದಿ ಸುಮ್ಮನಾದ. ಅದೆಷ್ಟು ಹೊತ್ತಿನವರೆಗೆ ತನ್ನನ್ನು ತಾನು ತಡೆದುಕೊಳ್ಳಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದುಕೊಳ್ಳುವ ಮೊದಲೇ ಆತನ ಕೈಗಳು ಮೊಬೈಲನ್ನು ಅನ್ ಲಾಕ್ ಮಾಡಿದ್ದವು!

'Hi.. How are you..' ಎಂದು ಕಳಿಸಿದ್ದ ಆಕೆಯ ಮೆಸ್ಸೇಜುಗಳನ್ನು ನೋಡಿಯೇ ಆದಿಯ ಕಣ್ಣಂಚುಗಳು ಒದ್ದೆಯಾಗತೊಡಗಿದವು. ಕಳೆಗಟ್ಟಿದ್ದ ಫೋನಿಗೆ ಏನೋ ಒಂದು ಹೊಸತನವನ್ನು ಆ ಪದಗಳು ತಂದಿದ್ದವು. ಆದಿಯ ಮುಖದ ಮೇಲಿದ್ದ ದುಃಖದ ಸಿಕ್ಕುಗಳು ಮರೆಯಾಗಿದ್ದವು ಹಾಗು ಆಕೆಯ ಮೇಸಜಿಗೆ ಪ್ರತ್ಯುತ್ತರವಾದ ಮೆಸೇಜನ್ನು ಕಳುಹಿಸುವುದ ಬಿಟ್ಟು ಆತ ಆ ನಡುರಾತ್ರಿಯಲ್ಲಿಯೇ ಆಕೆಗೆ ಫೋನಾಯಿಸಿದ!


****

ಬೆಳ್ಳಂಬೆಳೆಗೆ ಎಲ್ಲರಿಗಿಂತ ಮೊದಲೇ ಎದ್ದು ರೆಡಿಯಾದ ಆದಿ ಲೊಕೇಶನನ್ನು ತನ್ನ ಕಾಲಿನಿಂದ ತಿವಿಯತೊಡಗಿದ. ನೆನ್ನೆ ರಾತ್ರಿಯವರೆಗೂ ಇಹಲೋಕದ ಕಲ್ಪನೆಯನ್ನೇ ಮರೆತು ಜೈಲುವಾಸಿಯಾಗಿದ್ದಂತಹ ಈತನಿಗೆ ಏನಾಗಿರಬಹುದೆಂದು ಆ ನಿದ್ದೆಗಣ್ಣಿನಲ್ಲೂ ನಾನು ಯೋಚಿಸತೊಡಗಿದೆ.

'ತತ್ ತೇರಿ .. ಏನಾ ಲೈ ನಿಂದು..!!' ಲೋಕೇಶ ಒಮ್ಮೆಲೇ ಅರಚಿದ.

'ಗುರು ಬನ್ನಿ ಜಾಗಿಂಗ್ಗೆ .. ಅದೇನೋ ಅವತ್ತು ಸೂಪರ್ ಆಗ್ ಓಡ್ತಿಯ .. ಅದು .. ಇದು ಅಂತಿದ್ರಿ..' ಮೂದಲಿಸುವ ಧ್ವನಿಯಲ್ಲಿ ಆದಿ ಹೇಳಿದ.

ಆತನ ಮಾತನ್ನು ಕೇಳಿ ಸುಮ್ಮನಾದ ಲೋಕಿ ನಿಧಾನವಾಗಿ ಮೇಲಿದ್ದು ಕಣ್ಣುಮುಚ್ಚಿಕೊಂಡೇ ಆಕಳಿಸುತ್ತಾ, ' ದೇವ್ರು ನಿಂಗೆ ಒಳ್ಳೆ ಬುದ್ದಿ ಕೊಟ್ಟಿದ್ದಾನೆ.. ಒಳ್ಳೇದಾಗ್ಲಿ.. ತಾವ್ ಈಗ ಹೋಗಿ ಜಾಗಿಂಗ್ ಮಾಡ್ತಾ ಇರಿ.. ನಾನ್ ಇನ್ ಅರ್ಧ ಗಂಟೇಲಿ ಬರ್ತೀನಿ' ಎಂದು ಆತನನ್ನು ಕಳುಹಿಸಿದ. ಆದಿ ಇನ್ನೂ ಬಾಗಿಲನ್ನು ದಾಟುವ ಮೊದಲೇ,

'ನೋಡೋ ಬಡ್ಡಿ ಮಗ್ನೆ .. ಹುಡ್ಗಿ ಅಂತ ಒಂದ್ ಇದ್ರೆ ಲೈಫಲ್ಲಿ ಏನೇನೆಲ್ಲಾ ಚೇಂಜ್ ಆಗುತ್ತೆ .. ನೀನು ಇದ್ದೀಯ .. ಆ ಟೀಚರ್ ಅಂಟಿನ ಇಟ್ಕೊಂಡು..' ಎನುತ ಮಕಾಡೆ ಬಿದ್ದು ನಿದ್ರಿಸತೊಡಗಿದ.

'ಲೋಫರ್ ನನ್ ಮಗ್ನೆ .. ರಾಧಾ ಅಂತ ಅವ್ರ್ ಹೆಸ್ರು' ಎಂದು ಆತನ ಅಂಡಿನ ಮೇಲೊಂದು ಜೋರಾಗಿ ಜಾಡಿಸಿ ಒದ್ದ ನಾನು 'ನಮ್ಮೊಳಗಿನ ಸುಖಕ್ಕೆ ಪರಜನರ ಕೊಡುಗೆ ಇಷ್ಟ್ಯಾಕೆ?' ಎಂದು ಯೋಚಿಸುತ್ತಲೇ ಬೆಳಗಿನ ಮತ್ತೊಂದು ಸುತ್ತಿನ ಗತ್ತಿನ ನಿದ್ದೆಗೆ ಜಾರಿದೆ.

ಲೋಕೇಶ ಫೀಲ್ಡ್ ನ್ನು ತಲುಪುವ ಮೊದಲೇ ಆದಿ ಮೂರ್ನಾಲ್ಕು ಸುತ್ತನ್ನು ಓಡಿ ಅರ್ವತ್ತರ ಆ ವ್ಯಕ್ತಿಯೊಟ್ಟಿಗೆ ಸಂಭಾಷಿಸುತ್ತಿದ್ದ. ಆದಿ ಹೋದವನೇ ಅವರಿಗೆ ವಂದಿಸಿ ಆದಿಯನ್ನು ಪಕ್ಕಕ್ಕೆ ಕರೆತಂದು,

'ಏನಪ್ಪಾ ಬೋಧನೆ ಮಾಡ್ತಾ ಇದ್ದ ಆ ಬುಡ್ಡ' ಎಂದು ಕೇಳಿದ.

'ಏನು ಇಲ್ಲ .. ನೀನ್ ಸೂಪರ್ ಆಗಿ ಓಡ್ತಿಯ.. ಬ್ರಿಲಿಯಂಟ್ .. ಫೆಂಟಾಸ್ಟಿಕ್..ಅಂತ ಹೇಳ್ತಾ ಇದ್ರಪ್ಪ.’

'ಬ್ರಿಲಿಯಂಟ್, ಫೆಂಟಾಸ್ಟಿಕ್… ಸೀರಿಯಸ್ಲೀ!?' ಅಣುಕಿಸುವವನಂತೆ ಲೋಕಿ ಆದಿಯನ್ನು ಕೇಳಿದ.

'ಇರ್ಬಹುದು ಗುರು .. ಯಾಕೆ ತಮ್ಗೆ ಜಲಸಿನ?'

'ತಂದೆ.. ಕೋಣ ಒಡ್ದನ್ಗೆ ಓಡಿದ್ರೆ ಅದನ್ನ ಯಾರೂ ರನ್ನಿಂಗ್ ಅನ್ನಲ್ಲ.. ಗೊತ್ತಿರ್ಲಿ .. ಅಲ್ಲೂ ಸ್ವಲ್ಪ ನ್ಯಾಕು, ಟೆಕ್ನಿಕು ಅನ್ನೊದು ಇರುತ್ತೆ.. ಆ ಬುಡ್ಡ ಅಂಕಲ್ ಇಡೀ ಲೈಫಲ್ಲಿ 5 km/hr ಗಿಂತ ಹೆಚ್ಚು ಓಡಿರೋದೇ ಇಲ್ಲ ಅಂತದ್ರಲ್ಲಿ ನೀನ್ ಒಳ್ಳೆ ಅವ್ನ್ ಮಾತ್ ಕೇಳ್ತಾ ಇದ್ದೀಯಲ್ಲ .. ಫ್ಯಾಕ್ಟ್ ಹೇಳ್ತಿನಿ ಕೇಳು.. ಫಸ್ಟ್ ಆಫ್ ಆಲ್ ನಿನ್ ರನ್ನಿಂಗ್ ರನ್ನಿಂಗೇ ಅಲ್ಲ, ಓಕೇ?.. You have to go a long way ahead .. Morever, 400 ಮೀಟರ್ ರನ್ನಿಂಗ್ ಅಲ್ಲಿ ಡಿಸ್ಟ್ರಿಕ್ ಲೆವೆಲ್ ರೆಕಾರ್ಡ್ 44 ಸೆಕೆಂಡ್ಸ್.. So, ಸದ್ಯಕ್ಕೆ ನಿನ್ ಟಾರ್ಗೆಟ್ ಅದನ್ನ ಬೀಟ್ ಮಾಡೋದು.. ಮೊನ್ನೆ ನೀನು ಓಡ್ತಾ ಇದ್ದಾಗ, according to my calculation it was approximately 54 Seconds.. You still got to to improve 10 Seconds.. mind it!'

ಲೊಕೇಶನ ಮಾತನ್ನು ಕೇಳಿ ಕೊಂಚ ಮುನಿಸಿಕೊಂಡವನಂತಾದ ಆದಿ ಬೇರೆ ದಾರಿ ಕಾಣೆದೆ ತಲೆಯನ್ನು ಅಲ್ಲಾಡಿಸಿದ ಹಾಗು ಇಂದೇ ಎಲ್ಲ ರೆಕಾರ್ಡ್ಗಳನ್ನು ಮುರಿಯುವವನಂತೆ ಪುನ್ಹ ನಾಲ್ಕು ಸುತ್ತನ್ನು ಜೀವ ಬಿಟ್ಟು ಓಡಿದ.

ಈ ಬಾರಿ ಲೋಕೇಶನ ಟೈಮರ್ನ ಸಮಯ 52.5 ಸೆಕೆಂಡ್ಗಳೆಂದು ತೋರಿಸುತ್ತಿತ್ತು.


****


ಕಾರಿಡಾರಿನ ಆ ಕಡೆಯಿಂದ ರಾಧಾ ಬರುತಿರಲು.. ನನ್ನ ಸುತ್ತಲಿನ ಪ್ರಪಂಚ ಒಮ್ಮೆಲೇ ಸ್ತಬ್ದವಾದಂತಾಗಲು...ನಾಗರಹಾವು ಚಿತ್ರದ ‘ಬಾರೆ ಬಾರೆ..’ ಹಾಡಿನ ಸ್ಲೋ ಮೋಶನ್ ಫ್ರೆಮ್ಗಳು ನನ್ನ ಕಣ್ಣ ಮುಂದೆ ಒಂದೊಂದಾಗಿಯೇ ಬರತೊಡಗಿದವು.

ಜೇನಿನ ನೆಡೆಯಂತೆ ರಾಧಾ ನನ್ನ ಹತ್ತಿರಕ್ಕೆ ಬಂದರು.

'What the fuck you guys think about youself, uh?' ಎಲ್ಲಿಲ್ಲದ ಆವೇಶದಲ್ಲಿ ಆಕೆ ಸಿಡಿಲಬ್ಬರಿಸಿದಂತೆ ಕೂಗತೊಡಗಿದವು. ತಣ್ಣನೆಯ ಗಾಳಿ ಅವರ ಮುಂಗುದಲೆರಡನ್ನು ತೋಯ್ಸಿ ಅವರ ಕೋಪಭಾವದ ಅಂದವನ್ನು ದುಪ್ಪಟ್ಟಾಗಿಸಿತ್ತು. 'ಕಮ್ ಟು ಟೆರೇಸ್..' ಎಂದು ನನ್ನನ್ನು ಇಲ್ಲಿ ಕಾಯಲೇಳಿ ಅದಾಗಲೇ ಅರ್ಧ ತಾಸೇ ಸಂದಿದ್ದವು.

'ಸಮಾಧಾನ.. ಕೂಲ್.. ಏನಾಯಿತು ಅಂತ ನಿಧಾನಕ್ಕೆ ಹೇಳಿ' ನಾನೆಂದೆ.

'ಎಲ್ಲಿ ಆ ನಿನ್ ರೂಮೇಟ್ ಲೋಕೇಶ ..ಈಡಿಯಟ್.. '

'ಹಲೋ .. Mind your language.. He is not just my roomate .. he is like my brother..'

'So, ಬ್ರದರ್ ಆದ್ ಮಾತ್ರಕ್ಕೆ ಸಿಕ್ ಸಿಕ್ದವರ್ನ ಸೋಶಿಯಲ್ ಮೀಡಿಯಾದಲ್ಲಿ ಮಾನ ಹಾರಾಜ್ ಹಾಕ್ ಬಹುದಾ ಅವ್ನು?'

'ಸೋಶಿಯಲ್ ಮೀಡಿಯಾನ?!'

'ಹೌದು ಸಾರ್ .. To be precise it’s called Orkut’

'ಏನ್ ಮಾಡ್ದ ಅಂತ ಸರಿಯಾಗಿ ಹೇಳಿ ರಾಧಾ .. don't drag it unnecessarily' ನಾನು ಬೇಕಂತಲೇ ಗೊತ್ತಿರದವಂತೆ ನಟಿಸಿದೆ.

'Nothing unnecessary here..ಏನ್ ದೊಡ್ಡ್ ಸೋಶಿಯಲ್ ರಿಫಾರ್ಮೆರ ಅವ್ನು ..’ ಎಂದು ಕೆಲಕ್ಷಣ ನನ್ನನು ತೀಕ್ಷ್ಣವಾಗಿ ನೋಡಿ 'ಮಾಲಲ್ಲಿ ತಿಂದು ಬಾಡಿ ಅಲ್ದೆ ಬುದ್ಧಿನೂ ಕೊಬ್ಬಿದೆ, New Generation Hypocrisy ಅಂತ ಏನೇನೋ ಬಾಯಿಗೆ ಬಂದಾಗೇ ಬರ್ದು ಜನರ ಫೋಟೋ ಟ್ಯಾಗ್ ಮಾಡಿ ಮಾನ ಹರಾಜ್ ಮಾಡ್ತಾನಲ್ಲ ಅವ್ನ್ ಏನು ಬಾರಿ ಸಾಚಾನಾ.. ಅಲ್ಲ ಅವ ಯಾವಾಗ ಕಾಲೇಜಲ್ಲಿ ಕೂತಿರೋದನ್ನ ನೋಡಿದ್ದೀವಿ ಹೇಳು..ಯಾವಾಗ್ ನೋಡಿದ್ರು ಗದ್ದೆ ಶುಠಿ ಅಂತ .. Is he even called as a student first of all ..ಫುಡ್ ಬಗ್ಗೆ ಬರೀತಾನೆ ಲೋಫರ್..'

'ರೀ.. ಅವ್ನ್ ಏನ್ ಮಾಡ್ಬಾರ್ದನ್ನು ಮಾಡ್ತಾ ಇಲ್ಲ .. ಕೃಷಿ ಮಾಡೋದೂ ಒಂದ್ ಕಲೆ.. ಅಪ್ಪನ್ ದುಡ್ಡ್ ಇದೆ ಅಂತ ಮೇಲಿಂದ ಕೆಳಕ್ಕೂ ಅದ್ರಲ್ಲೇ ಸ್ನಾನ ಮಾಡೋರ್ ಮದ್ಯೆ he is earning his own.. ಅವ ಮನ್ಸ್ ಮಾಡಿದ್ರೆ ಕ್ಲಾಸಲ್ಲಿ ಕೂತು ಓದದೇನೆ ಕಾಲೇಜಿಗೆ ಟಾಪ್ ಬರಬಲ್ಲ.. Don’t underestimate him.. ಮಕ್ಕಳಿಗಿಂತ ಕಡೆಯಾಗಿ ತಿಂದು ಪ್ರಾಣಿಗಳ ತರ ಗಬ್ಬೆಬ್ಬಿಸಿ ಒಬ್ಬ ಕ್ಲೀನರ್ ಬಾಯನ್ನು ಕ್ಲೀನಿಂಗ್ ಮಷೀನ್ ತರ ನೋಡೋ ಜನಗಳಿಗೆ ಆತರ ಮಾಡಿದ್ರೆ ತಪ್ಪೇನಿದೆ..' ತೀಕ್ಷ್ಣವಾಗಿಯೇ ನಾನು ಪ್ರತಿಕ್ರಿಯಿಸಿದೆ.

'ಇಡೀ ಕ್ಲಾಸ್ ರೂಮಲ್ಲಿ ಟೀಚರ್ಸ್ನ ಟೀಸ್ ಮಾಡ್ತಿರ್ಬೇಕಾದ್ರೆ ಎಲ್ಲಿ ಹೋಗಿತ್ತು ಇವ್ನ ಈ ಫಿಲೋಸಫರ್ ಟೀಚಿಂಗ್ಸು? ಇವ್ನ್ ತಪ್ಪ್ ಮಾಡಿದ್ರೆ ಎಲ್ಲ ಓಕೆ. ಬೇರೆಯವರ್ ಮಾಡಿದ್ರೆ ಮಾತ್ರ ಸಮಾಜ ಸೇವಕ ಆಗ್ತಾನ? Listen, ಇಂಟರ್ನೆಟ್ ಇದೆ ಅಂತ ಸಿಕ್ ಸಿಕ್ದವ್ರ ಮಾನ ಹಾರಾಜ್ ಹಾಕಿದ್ರೆ ಹುಷಾರ್.. ನಿನ್ ಬ್ರದರ್ಗೆ ಹೇಳು.. ಡಿಫೆಮೇಷನ್ ಕೇಸ್ ಹಾಕಿದ್ರೆ ಮುಂದೆ ಏನ್ ಆಗುತ್ತೆ ಅಂತಾನೂ ಗೊತ್ತಿರ್ಲಿ'

ಕೊಬ್ಬಿ ಕೂತಿರುವ ಆ ದೇಹಗಳಿಗೆ ಫೇಮ್ ಎಂಬ ಪದದ ಕಲ್ಪನೆಯೇ ಇದ್ದಂತೆ ನನಗೆ ಕಾಣಲಿಲ್ಲ. ನಗುವನ್ನು ನಾನು ತಡೆದುಕೊಂಡೆ.

'ಏನ್ರಿ ಒಳ್ಳೆ ಕೊಲೆ ಮಾಡಿರೋ ರೀತಿ ಹೇಳ್ತಾ ಇದ್ದೀರಾ..'

'ಯಸ್ ಅದು ಒಂದ್ ರೀತಿಲಿ ಕೊಲೆನೆ.. ಕ್ಯಾರೆಕ್ಟರ್ ಮರ್ಡರಿಂಗ್ ಇನ್ ಸೋಶಿಯಲ್ ಮೀಡಿಯಾ!'

'ರೀ..ಹೋಗ್ಲಿ ಬಿಡ್ರಿ ...ಯಾರ್ದೋ ಬಗ್ಗೆ ಯಾರ್ ಏನೋ ಬರ್ದ್ರು ಅಂತ ನೀವ್ಯಾಕೆ ಅಷ್ಟ್ ಫ್ರಸ್ಟ್ಟ್ರೇಟ್ ಆಗ್ತೀರಾ ..'

'ಯಾರ್ ಬಗ್ಗೆ ಆದ್ರೂ ಅಷ್ಟೇ .. Being a citizen of the country it’s my responsibility! Moreover ನಿನ್ ಬ್ರದರ್ ಟ್ಯಾಗ್ ಮಾಡಿದ್ದು ಬೇರೆ ಯಾರನ್ನು ಅಲ್ಲ ನನ್ನ ಅಣ್ಣ ಮತ್ತು ಅತ್ಗೆನ, ನೆನ್ಪ್ ಇರ್ಲಿ!'

ಅವರ ಕೊನೆಯ ಮಾತನ್ನು ಕೇಳಿ ನನ್ನ ಗಂಟಲು ಮರುಭೂಮಿಯ ಬರ ನೆಲದಂತಾಯಿತು. ಪದಗಳೇ ಮೂಡದ ನನ್ನಲ್ಲಿ.'ಒಹ್..' ಎಂದಷ್ಟೇ ಹೇಳಲು ಶಕ್ತನಾಗುವಷ್ಟು ಮಾತ್ರ ಶಕ್ತಿ ಉಳಿಯಿತು. ಭೇಟೆಗಾರ ಕುದ್ದು ತನ್ನ ಭೇಟೆಗೇ ಸಿಲುಕಿಗೊಂಡ ಪರಿಸ್ಥಿತಿ. ಲೊಕೇಶನ ಪರವಾಗಿ ವಾದಿಸಿದರಿಂದಲೋ ಅಥವ ಅಂದು ಆಕೆಗೆ ‘ದಿ ಕಿಸ್..’ ಕೊಡಲಿಲ್ಲವೆಂಬ ಕೋಪದಿಂದಲೋ ಅಥವ ಇತ್ತೀಚೆಗೆ ಬೇಕಂತಲೇ ನಾನು ಆಕೆಯನ್ನು ಅವಾಯ್ಡ್ ಮಾಡುತ್ತಿದ್ದೇನೆಂಬ ಸಂಶಯದಿಂದಲೋ ಏನೋ ಆಕೆ ಮತ್ತಷ್ಟು ಉದ್ವಿಗ್ನಗೊಂಡವಳಂತೆ ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ಹೊರಟಳು.

ಹಿತವಾಗಿ ಬೀಸುವ ಗಾಳಿಯನ್ನು ಬಡಿದು ಓಡಿಸುವಂತೆ ಆಡುತ್ತಿದ್ದ ಆಕೆಯ ಕೋಪಿಷ್ಠ ಕೂದಲನ್ನೇ ನಾನು ತದೇಕಚಿತ್ತದಿಂದ ನೋಡುತ್ತಾ ನಿಂತೆ.



****





'ಒಹ್ ಶಿಟ್ .. ಏನೋ ಇದು..?!' ಕೈಗಳೆರಡನ್ನು ತನ್ನ ಹಿಂತಲೆಗೆ ಹೊತ್ತುಕೊಟ್ಟು ಬೆಳ್ಳಂಬೆಳೆಗೆ ಡಿಸ್ಟ್ರಿಕ್ಟ್ ಫೀಲ್ಡನ ಸ್ಟೇಜ್ನ ಮೇಲೆ ನೆಡೆಯುತ್ತಿದ್ದ ಯಾವುದೊ ಸಾರ್ವಜನಿಕ ಸಮಾರಂಭವನ್ನು ಆತಂಕದಿಂದ ನೋಡುತ್ತಾ ಹೇಳಿದ ಲೋಕೇಶ. ಅಲ್ಲಿಗೆ ಬರುವವರೆಗೂ ಲವಲವಿಕೆಯಿಂದಿದ್ದ ಆತ, ರನ್ನಿಂಗ್ ಟ್ರ್ಯಾಕನ್ನೂ ದಾಟಿ ನೆರೆದಿದ್ದ ಜನಸಮೂಹವನ್ನು ಕಂಡು ಹತಾಶನಾದ. ಆತನ ಹಿಂದೆಯೇ ಬಂದ ಓಟಗಾರ ಆದಿ ತನ್ನ ಓಟಕ್ಕೆ ಸಾಸಿವೆಕಾಳಿನಷ್ಟೂ ಸಂಬಂಧವಿರದ ಮಾರ್ಕ್ ಟೈಸನ್ನ ಬಾಕ್ಸಿಂಗ್ ಪಂಚ್ಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಾ, ಪ್ರತಿ ಅರೆಕ್ಷಣಕ್ಕೂ 'ಡುಫ್ .. ಡುಫ್' ಎಂಬ ಸದ್ದಿನೊಟ್ಟಿಗೆ ಜಿಗಿದು ಜಂಪ್ ಮಾಡುತ್ತ ನಿಂತಿದ್ದ. ಅದು ಖುಷಿಯ ಖುಷಿಯೋ ಅಥವಾ ಓಟದ ಖುಷಿಯೋ ತಿಳಿಯದು. ಲೋಕೇಶ ತನ್ನ ತಲೆಯ ಮೇಲೆ ಕೈಹೊತ್ತು ನಿಂತಿದ್ದನ್ನೂ ಸಹ ಆತ ಲೆಕ್ಕಿಸಲಿಲ್ಲ. 'ಯಾ .. ಹೂ .. ಡುಫ್..' ಎಂದು ಸದ್ದು ಮಾಡುತ್ತಾ ಕೊನೆಗೆ ಬ್ರುಸ್ಲಿ ಮಹಾಶಯನನ್ನೂ ನಡುವಿನಲ್ಲಿ ತಂದು ಕುಣಿಯುತ್ತಿದ್ದ. ಅದೆಷ್ಟೋ ನಿಮಿಷಗಳವರೆಗೂ ಲೋಕೇಶ ಮುಂದುವರೆಯದನ್ನು ಕೊನೆಗೂ ಗ್ರಹಿಸಿದ ಆತ,

'Any problems buddy?!' ಎಂದು ತನ್ನ ಮುಷ್ಟಿಯನ್ನು ಮುಖದ ಮುಂದಿನ ನಿರ್ವಾತ ಪ್ರದೇಶದಲ್ಲಿ ಯಾವುದೊ ಕಾಲ್ಪನಿಕ ಬಿಂದುವಿನೆಡೆಗೆ ಗುರಿಮಾಡಿ ಒಂದೇ ಸಮನೆ ಬಡಿಯ ತೊಡಗಿದ.

'ಏನಲೇ ನಿಂದು .. ಥು.. ಮುಚ್ಕೊಂಡ್ ಒಂದ್ ಸೆಕೆಂಡ್ ನಿಂತು ಆಕಡೆ ನೋಡು' ಎನುತ ಸಾರ್ವಜನಿಕರನ್ನು ಉದ್ದೇಶಿಸಿ ಅರಚುತಿದ್ದ ರಾಜಕಾರಣಿಗಳ ಸ್ಟೇಜನ್ನು ತೋರಿಸಿದ ಲೋಕೇಶ. .

'ಅರ್ರೆ, ಏನೋ ಇದು .. ಬೆಳ್ ಬೆಳ್ಗೆ. ಇವ್ರಿಗೆ ಮಾಡೋಕ್ ಬೇರೆ ಏನ್ ಕೆಲ್ಸ ಇಲ್ವ..' ಕೊನೆಗೂ ಇಹಲೋಕಕ್ಕೆ ಬಂದವನಂತೆ ಆದಿ ನುಡಿದ.

'ಅವ್ರಿಗೆ ಕೆಲ್ಸ ಇಲ್ಲ ಆದ್ರೆ ಇವ್ರಿಗ್ ಏನಾಗಿದ್ಯಪ್ಪ ..’ ಎಂದು ಅಲ್ಲಿ ನೆರೆದಿದ್ದ ಜನಸಮೂಹನ್ನು ನೋಡಿ ‘ವಾಕಿಂಗೆ ತುಂಬಾ ಜನ ಬರ್ತಾರೆ ಅಂತಾನೆ ಇಲ್ಲೇ ಪ್ರೋಗ್ರಾಮ್ ಹಾಕೊಂಡಿರೋದು ಕರ್ಮದವ್ರು' ಎಂದ.

'ಹೋಗ್ಲಿ ಬಿಡ್ ಮಚಿ .. ಒಂದ್ ದಿನ ತಾನೇ .. ರನ್ನಿಂಗ್ ನಾಳೆ ಕಂಟಿನ್ಯೂ ಮಾಡಿದ್ರೆ ಆಯ್ತು..' ಎಂದು ಆದಿ ಹೊರಡಲು ಅಣಿಯಾದ.

'ಇಟ್ಸ್ ನಾಟ್ ಅಬೌಟ್ ದಟ್ ' ಎಂದು ಸುಮ್ಮನಾದ ಲೋಕೇಶ 'ಬಾ..' ಎಂದು ಆದಿಯೊಟ್ಟಿಗೊಡಗೂಡಿ ಸ್ಟೇಜಿನ ಬಳಿಗೆ ನೆಡೆದ.

ಒಲ್ಲದ ಮನಸ್ಸಿನಲ್ಲಿಯೇ ಆದಿ ಆತನನ್ನು ಹಿಂಬಾಲಿಸಿದ.

ಅಮೆರಿಕಾದವರು ಇನ್ನೇನು ಬಂದು ಅಣುಬಾಂಬನ್ನು ಸುರಿದುಬಿಡುವರೋ ಎಂದರಿತು ಮಾಡುವ ಎಮರ್ಜೆನ್ಸಿ ಮೀಟಿಂಗ್ನಂತೆ ಜಿಲ್ಲೆಯ ಹೆಚ್ಚು ಕಡಿಮೆ ಅಷ್ಟೂ ರಾಜಕೀಯ ತಲೆಗಳು ಆ ವಿಶಾಲ ಸ್ಟೇಜಿನ ಮೇಲೆ ರಾರಾಜಿಸಿದ್ದವು. ಇಡೀ ಸಿಟಿಯ ಶಾಂತ ಮುಂಜಾವಿನ ಪರಿಸರವನ್ನು ತನ್ನ ಕರ್ಕಶ ಶಬ್ದದಿಂದ ಹಾಳುಗೆಡವುವಂತೆ ಧ್ವನಿವರ್ಧಕವು ಶಕ್ತಿಮೀರಿ ಅರಚುತಿತ್ತು. ಸ್ಟೇಜಿನ ಕೆಳಗ್ಗೆ ನಿಂತಿದ್ದ ಪಕ್ಷದ ಕಟ್ಟಾ ಕಾರ್ಯಕರ್ತರು ಮೇಲೆ ನೆಡೆಯುತ್ತಿದ್ದ ಭಾಷಣವೊಂದನ್ನು ಆಲಿಸುವುದ ಬಿಟ್ಟು ಸಾಧ್ಯವಾದ ಬೇರೆಲ್ಲ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 'ರಂಗಣ್ಣ .. ನೆನ್ನೆ ಬಾಟ್ಲಿಗೆ 200, ಇವತ್ತ್ ಬೆಳಗ್ಗೆ ಬಿರಿಯಾನಿ ಊಟಕ್ಕೆ 250, ಬಸ್ ಚಾರ್ಜು 50 ಅಂತ ಒಟ್ಟ್ 500 ರೂಪಾಯಿ ಪೀಕಿದ್ರಲ್ಲ, ಎಲ್ಲಿ, ನೆಟ್ಟಗೆ 10 ಜನಾನು ಇಲ್ವಲ್ರಿ?' ಎಂಬ ಸಂಭಾಷಣೆಗಳೇ ಅಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದವು.

'ಪ್ರಿಯ ಜನರೇ .. ಇದು ನೆಡೆಯಲ್ಲ .. ಇಂತ ಗೊತ್ತು ಗುರಿ ಇಲ್ಲದ ಸರ್ಕಾರ ಯಾರಿಗೆ ತಾನೇ ಬೇಕು .. ನಾವೆಲ್ಲಾ ಒಗ್ಗಟ್ಟಾಗಿ ಇಂದು ಸರ್ಕಾರದ ವಿರುದ್ಧ ಸಮರ ಸಾರ್ಬೇಕು..ಇಲ್ಲ ಅಂದ್ರೆ ನಮ್ಗೆ ಉಳಿಗಾಲವಿಲ್ಲ..' ಎಂದು ಒಬ್ಬ ರಾಜಕಾರಣಿ ತನ್ನ ಗಂಟಲು ಹರಿಯುವಂತೆ ಚೀರತೊಡಗಿದ. ಆತ ಇತರೆ ರಾಜ್ಯಗಳ ಹೋಲಿಕೆಯನ್ನು ನೀಡುತ್ತಾ ಅಲ್ಲಿ ಅಷ್ಟು ಸಾಲ ಮನ್ನವಾಗಿದೆ, ಇಲ್ಲಿ ಇಷ್ಟಾಗಿದೆ ಎಂದು ಕೊನೆಗೆ ತಮ್ಮ ರಾಜ್ಯದ 'ಶೂನ್ಯ ಸಾಧನೆ'ಯನ್ನು ಹೀಯಾಳಿಸುತ್ತ ಆತ ತನ್ನ ಭಾಷಣವನ್ನು ಮುಂದುವರೆಯುತ್ತಾನೆ. ಸರ್ಕಾರ ಬಿದ್ದರೆ ಜಾತಿ ಕೋಟದ ಮೇಲೆ ಹೈ ಪ್ರೊಫೈಲ್ ಮಿನಿಸ್ಟರ್ಗಿರಿಯನ್ನು ತನ್ನದಾಗಿಸಿಕೊಳ್ಳುವ ಆತನ ಆಸೆಯ ಹೊಳಪು ಬಲ್ಲವರಿಗೆ ಮಾತ್ರ ತಿಳಿದಿತ್ತು.

'ನಿಮ್ಮ ಎದೆ ಮುಟ್ಕೊಂಡ್ ಹೇಳಿ .. ನಿಮ್ಗೆ ಇಂತ ಸರ್ಕಾರ ಬೇಕಾ.. ಬಡವರ ರಕ್ತ ಹೀರೊ ಇಂತ ನಾಯಕರು ಬೇಕಾ' ಶಾಲಾ ಮಕ್ಕಳಿಗೆ ನಿಮ್ಗೆ ಭಾನುವಾರ ತರಗತಿಗಳು ಬೇಕಾ ಎಂಬಂತೆ ಆತ ನೆರೆದಿದ್ದ ಅಷ್ಟೂ ತಲೆಗಳನ್ನು ಉದ್ದೇಶಿಸಿ ಆತ ಕೇಳಿದ.

'ಬೇಡ .. ಬೇಡ .. ಬೇಡ ಆನ್ರೋ..' ಕಾರ್ಯಕರ್ತರು ತಮ್ ತಮ್ಮ ಜನರ ಗುಂಪಿನೆಡೆಗೆ ಮೊಗಮಾಡಿ ಜೋರಾಗಿ ಪಿಸುಗುಡತೊಡಗಿದರು. ಆದರೆ ಅದು ರಾತ್ರಿಯ ಗುಂಡಿನ ಮತ್ತೊ ಅಥವ ಇನ್ನು ಸ್ವಲ್ಪ ಸಮಯದಲ್ಲಿ ಸವಿಯಬಹುದಾದ ಬಿರಿಯಾನಿಯ ಕನಸೋ ಅಥವಾ ಭಾಷಣ ಘೋಷಣೆಗಳೆಂದರೆ ಸಹಜವಾಗಿ ಮೂಡುವ ಹಿಂಜರಿಕೆಯ ಸ್ವಭಾವವೊ ಏನೊ ಗುಂಪಿನಿಂದ ಒಂದೆರೆಡು ಧ್ವನಿಗಳು ಬಿಟ್ಟರೆ ಬೇರ್ಯಾರು ತುಟಿಕ್ ಪಿಟಿಕ್ ಅನ್ನಲಿಲ್ಲ. ಮೇಲಾಗಿ ವಾಕಿಂಗೆ ಬರುವ ಭಾಗಶಃ ಸಿಟಿಯ ಪ್ರಜ್ಞಾವಂತ ನಾಗರಿಕರೂ ಸಹ ಅದಾಗಲೇ ಬಂದ ದಾರಿಗೆ ಸುಂಕವಿಲ್ಲವೆಂದು ಗೊಣಗಿಕೊಳ್ಳುತ್ತ ಅಲ್ಲಿಂದ ಜಾಗ ಕಿತ್ತಿದ್ದರಿಂದಲೂ ಮೂಡಬೇಕಿದ್ದ ಸಹಜ ಸದ್ದು ಅಲ್ಲಿ ಮೂಡಲಿಲ್ಲವೆನ್ನಬಹುದು.

'ನಿಮ್ಗೆ ಇಂತ ಸರ್ಕಾರ ಬೇಕ ಮಹಾಜನರೇ ?' ಎಂದು ಮತ್ತೊಮ್ಮೆ ಅರಚಿದ ರಾಜಕಾರಣಿ ತನ್ನ ಸಿಟ್ಟಿನ ಕಣ್ಣುಗಳಿಂದ ಕಾರ್ಯಕರ್ತರನ್ನು ನೋಡತೊಡಗಿದ.

'ಯಸ್ ಮೈ ಲೀಡರ್ .. ಸರ್ಕಾರ ಬೇಕು .. ಬೇಕೇ ಬೇಕು .. ಕೋಟಿ ಕೋಟಿ ಖರ್ಚ್ ಮಾಡಿ ಎಲೆಕ್ಟ್ ಮಾಡಿರೋದು ಮೂರ್ ದಿನಕ್ಕೆ ಗಂಟು ಮೂಟೆ ಕಟ್ಸಿ ಮೂಲೆಗೆ ಹಾಕೋಕಲ್ಲ!'

ಗುಂಪಿನ ಮಧ್ಯದಿಂದ ಮೂಡಿದ ಈ ಅಚಾನಕ್ ಉತ್ತರಕ್ಕೆ ಕಕ್ಕಾಬಿಕ್ಕಿಯಾದ ರಾಜಕಾರಣಿ ಸದ್ದು ಬಂದೆಡೆಯೇ ನೋಡತೊಡಗಿದ. ಸ್ಟೇಜಿನ ಮೇಲಿದ್ದ ಇತರರ ದೃಷ್ಟಿಯೂ ಅತ್ತ ಕಡೆಗೇ ತಿರುಗಿತು. ದಷ್ಟಪುಷ್ಟವಾದ ಕೈಯೊಂದು ಜನರ ಗುಂಪಿನ ಮದ್ಯೆ ಮೇಲೆದ್ದು ನಿಂತಿತ್ತು. ಕಾರ್ಯಕರ್ತರು ಇನ್ನೇನು ಧಿಕ್ಕಾಪಾಲಾಗಿ ಓಡುವುದೊಂದೇ ಬಾಕಿ. ಆದಿ ತನ್ನ ಪಕ್ಕಕ್ಕೆ ತಿರುಗಿ ರಾಜಕಾರಣಿಯ ಮುಖಕ್ಕೆ ಒಡೆದವನಂತೆ ಉತ್ತರಿಸಿದ ಲೋಕೇಶನನ್ನು ಕಂಡು ಚೇಳು ಕಡಿದವರಂತೆ ಚಂಗನೆ ನೆಗೆದು ಪಕ್ಕದ ಗುಂಪಿನಲ್ಲಿ ಮರೆಯಾದ ಹಾಗು 'ಲೋಕಿ .. ಬೇಡ .. ಸುಮ್ನಿರೋ ..' ಎಂದು ಅಲ್ಲಿಂದಲೇ ಪಿಸುಗುಡತೊಡಗಿದ.

'ಯಂಗ್ ಮ್ಯಾನ್ .. ನಿಮ್ಗೆ ಇವೆಲ್ಲ ಅರ್ಥ ಆಗಲ್ಲ ಅನ್ಸುತ್ತೆ...ನಾವ್ ಹೇಳ್ತಾ ಇರೋದು ಜನಗಳ ಒಳಿತಿಗೇ'

'ನಾನ್ ಹೇಳ್ತಾ ಇರೋದು ಜನಗಳ ಒಳಿತಿಗೇನೆ ಸಾರ್..' ರಪ್ಪನೆ ಲೊಕೇಶನೂ ಉತ್ತರಿಸಿದ.

'ಒಹ್ ಇಸ್ ಇಟ್ .. ಬನ್ನಿ ಹಾಗಾದ್ರೆ .. ಇಲ್ ಬಂದು ಮಾತಾಡಿ .. ಬಂದು ವಿವರಿಸಿ.. ದಿಸ್ ಸ್ಟೇಜ್ ಇಸ್ ಫಾರ್ ಯು' ಎಂದ ರಾಜಕಾರಣಿ ಬಹುಶಃ ಬೊಗಳುವ ನಾಯಿ ಕಚ್ಚುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಸ್ಟೇಜಿನ ಕೊಂಚ ಹಿಂದೆ ಸರಿದು ನಿಂತಂತೆ ನಟಿಸಿದ. ಪಕ್ಕದಲ್ಲಿ ಆಸೀನರಾಗಿದ್ದಂತಹ ಇತರೆ ರಾಜಕಾರಣಿಗಳು ಪ್ರೋಗ್ರಮಿನ ಪ್ರೊಟೋಕಾಲನ್ನು ಮುರಿದ ಆತನನ್ನು ದುರುಗುಟ್ಟು ನೋಡುತ್ತಾ ಮನದೊಳಗೆ ಗುಸು ಗುಸು ಬೈಯತೊಡಗಿದರು. ಯುವಜನರ ಹುಲಿಯೆಂಬ ನಾಮಾಂಕಿತದ ಆತ ಇತರೆ ರಾಜಕಾರಣಿಗಳಿಗೆ ತನ್ನ ಕಣ್ಣಿನಲ್ಲೇ ಏನೂ ಆಗಲಿಲ್ಲವೆಂಬ ಸಮಜಾಯಿಷಿಯನ್ನು ನೀಡಿ ಇನ್ನೇನು ಮೈಕಿನೆಡೆಗೆ ಪುನಃ ಬರಬೇಕು ಅನ್ನುವಷ್ಟರಲ್ಲಿಯೇ ಲೋಕೇಶ ಅಲ್ಲಿಗೆ ಬಂದು 'ಒಂದೂರಿನಲ್ಲಿ ಒಬ್ಬ ಯುವಕನಿದ್ದ..' ಎಂದು ಯಾರಿಗೆ ಯಾವುದೇ ಗೌರವಸೂಚಕಗಳಿಲ್ಲದೆಯೇ ತನ್ನ ಭಾಷಣವನ್ನು ಮುಂದುವರೆಸಿದ!

Continues..

Saturday, July 11, 2020

ಪಯಣ - 11

ರಾತ್ರಿ ತಡರಾತ್ರಿಯವರೆಗೂ ಮೊಬೈಲ್ ಚಾಟ್ ಹಿಸ್ಟರಿಯನ್ನು ಚಾಚೂತಪ್ಪದೆ ರಿವೈಸ್ ಮಾಡಿದ ಆದಿಗೆ ಬೆಳ್ಳಂಬೆಳಗೆ ಆತನ ಅಮ್ಮನ ಫೋನ್ ಕಾಲು ಬಡಿದೆಬ್ಬಿಸಿತು . ಕಟ್ ಮಾಡಿದಷ್ಟೂ ಪುನ್ಹ ರಿಂಗುಡುತಿದ್ದ ಫೋನನ್ನು ಕಡೆಗೂ ಕಿವಿಯ ಮೇಲಿಟ್ಟ ಆತ ಸಿಟ್ಟಿನಿಂದ 'ಏನ್ ಆಯ್ತ್ ಇವತ್ತು ಬೆಳ್ ಬೆಳ್ಗೆ?!' ಎನುತ ಅರಚಿದ. ಅತ್ತ ಕಡೆಯಿಂದ ಅಮ್ಮ ಅದೇನೋ ವಿಷಯದ ಬಗ್ಗೆ ಏರು ಧ್ವನಿಯಲ್ಲಿ ಹೇಳುತ್ತಾ ಹೋದಂತೆ ಅದಕ್ಕೆ ತಾಳವೇನೋ ಎಂಬಂತೆ ಅಪ್ಪನೂ ಜೋರಾಗಿ ಚೀರತೊಡಗಿದ. ಮೊಬೈಲ್ನಿಂದ ಬರುತ್ತಿದ್ದ ಅರಚಾಟದ ಸದ್ದು ಹೆಚ್ಚಾದಂತೆ ಆದಿ ಎದ್ದು ರೂಮಿನ ಹೊರಗೆ ಬಂದ. ಕೈ ಮೀರಿರುವ ಘಳಿಗೆಯಲ್ಲಿ ತಾನೂ ಬೆಂಕಿಯ ಕಿಡಿಯಾದರೆ ಏನು ಗತಿ ಎಂದುಕೊಂಡು ಎಂದಿನಂತೆಯೇ ಅವರಿಬ್ಬರನ್ನು ಸಂತೈಸಲು ಆತ ಪ್ರಯತ್ನಿಸತೊಡಗಿದ. ಸಿಟ್ಟಿನ ಅಲೆ ಮನದೊಳಗೆ ಏರಿಳಿಯುತ್ತಿರಲು, ಆದಿ ಶಾಂತಿದೂತನಂತೆ ಪೋಷಕರ ಸಿಲ್ಲಿ ವಿಷಯಗಳಿಗೆ ಶಾಂತ ಸ್ವರದಲ್ಲಿ ಸಾಂತ್ವನವನ್ನು ಹೇಳುತ್ತಿರಲು, ಆತನ ಸಹನೆಯ ಕಟ್ಟೆ ಹೊಡೆಯಿತು. ಆದರೆ ಆತ ಅವರೊಟ್ಟಿಗೆ ಚೀರಾಡದೆ ತನ್ನ ಫೋನನ್ನೇ ಬಾಲ್ಕನಿಯ ನೆಲದ ಮೇಲೆ ಜೋರಾಗಿ ಎಸೆದು ಆವೇಶದಿಂದ ಒಂದೇ ಸಮನೆ ಏದುಸಿರು ಬಿಡುತ್ತ ನಿಂತ. ದೇವರಿಗೆ ಒಡೆಯುವ ಕಾಯಿಯಂತೆ ಛಿದ್ರ ವಿಛಿದ್ರವಾಗಿ ಫೋನು ಮುರುಟಿ ಬಿದ್ದಿತು. ಸಿಟ್ಟಿನಿಂದ ಏದುಸಿರು ಬಿಡುತ್ತಿದ್ದ ಆದಿಗೆ ಛಿದ್ರಗೊಂಡ ಮೊಬೈಲನ್ನು ಧಿಟ್ಟಿಸುತ್ತ ಇಂತಹ ಪೋಷಕರಿಂದ ಖುಷಿ ದೂರವಿದ್ದರೇ ಒಳ್ಳೆಯೆದು ಎಂಬ ಯೋಚನೆ ಮೂಡಿತು. ಇವರ ಕಿತ್ತಾಟ, ಅಪ್ರಬುದ್ದತೆ, ಅರಚಾಟ ಎಲ್ಲವೂ ಎಂಥವರಿಗೂ ಸಹಿಸಲಾಗದ ವಿಷಯಗಳಾಗುತ್ತವೆ ಎಂದನಿಸಿತು.

ಲೋಕೇಶ ಎದ್ದು ಜಾಗಿಂಗ್ ಗೆ ರೆಡಿಯಾಗತೊಳಗಿದ. ತಲೆಯಲ್ಲಿ ಸಾವಿರ ಯೋಚನೆಗಳ ಆಗರವನ್ನು ಸೃಷ್ಟಿಸಿಕೊಂಡಿದ್ದ ಆದಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಒಡೆದ ತೆಂಗಿನಕಾಯಿಯ ಚೂರುಗಳಾಗಿದ್ದ ಫೋನಿನ ಭಾಗಗಳನ್ನು ಎತ್ತಿ ಒಂದೊಂದಾಗಿಯೇ ಜೋಡಿಸತೊಡಗಿದ. ಲೋಕೇಶ ಏನೋ ಹೇಳಿದ್ದನ್ನೂ ಅಷ್ಟಾಗಿ ಕೇಳಿಸಿಕೊಳ್ಳದೆ ತನ್ನ ವ್ಯರ್ಥ ಕೆಲಸದಲ್ಲಿಯೇ ಮಗ್ನನಾದ ಆತ. ಲೋಕೇಶ ತನ್ನ ಸ್ಪೋರ್ಟ್ಸ್ ಶೂ ಅನ್ನು ತೊಟ್ಟು ಜಾಗಿಂಗ್ಗೆ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಆದಿ ಲೋಕೇಶನಿಗೆ ನಿಲ್ಲುವಂತೆ ಹೇಳುತ್ತಾನೆ. ತೊಟ್ಟ ಚಡ್ಡಿಯಲ್ಲಿಯೇ ತೆಳುವಾದ ಟಿ ಶರ್ಟ್ ಹಾಗು ಶೂ ಅನ್ನು ತೊಟ್ಟು ತಾನೂ ಜಾಗಿಂಗ್ ಗೆ ಬರುವುದಾಗಿ ಹೇಳುತ್ತಾನೆ.

ಗಹಗಹನೇ ನಕ್ಕ ಲೊಕೇಶನನ್ನು ಆದಿಯ ತೀಕ್ಷ್ಣ ದೃಷ್ಟಿಗೆ ಮಾತು ಬಾರದಂತಾಗುತ್ತಾನೆ. ಆದಿಯ ಕಣ್ಣುಗಳು ಕೆಂಡದಂತೆ ಹೊಳೆಯುತ್ತಿದ್ದವು

'ಸರಿ ಬಾರಪ್ಪ .. ನಿನ್ ಇಷ್ಟ' ಎಂದು ಲೋಕೇಶ ಆತನನ್ನು ಡಿಸ್ಟ್ರಿಕ್ಟ್ ಫೀಲ್ಡ್ ಗೆ ಓಡಿಸಿಕೊಂಡೆ ಕರೆದೊಯ್ಯುತ್ತಾನೆ.

**

ಕಾಡು ನಾಡಾಗಿ ನಾಡು ಪಟ್ಟಣಗಳಾಗಿ ಈಗ ಪಟ್ಟಣಗಳು ಸ್ಮಾರ್ಟ್ ಸಿಟಿಗಳಾಗುತ್ತಿರುವ ಕಾಲದಲ್ಲಿ ಬೊಜ್ಜು ತುಂಬಿದ ದೇಹಗಳೇ ಎಲ್ಲೆಂದರಲ್ಲಿ. ದಿನದ ಹನ್ನೆರೆಡು ಘಂಟೆಗಳ ಕಾಲ ಲ್ಯಾಪ್ಟಾಪಿನ ಮುಂದೆಯೇ ಕೂತು ದಿನ ಕಳೆಯುವ ಪ್ರಸ್ತುತ ಕೆಲಸಗಳ ಕಾಲದಲ್ಲಿ ಇಂತಹ ಬೊಜ್ಜುದೇಹಗಳಿಗೆ ನಗರದ ಪಾರ್ಕು ಹಾಗು ಆಟದ ಫೀಲ್ಡ್ಗಳೇ ಒಂತರ ಸಾಮೂಹಿಕ ನೈಸರ್ಗಿಕ ಓಪನ್ ಜಿಮ್ಗಳಾಗಿಬಿಟ್ಟಿವೆ. ಬೆಳಗಾದರೆ ಸಾಕು ಹುಡುಗ ಹುಡುಗಿಯರು, ಆಂಟಿ ಅಂಕಲ್ ಗಳಲ್ಲದೆ ಅಜ್ಜ ಅಜ್ಜಿಯರವರೆಗೂ ಜನ ಇಲ್ಲಿ ಬಂದು ನೆರೆಯುತ್ತಾರೆ. ಕೆಲವರು ವಿಚಿತ್ರವಾಗಿ ಗುಂಪುಗಟ್ಟಿಕೊಂಡು ಗಹಗಹನೇ ನಗತೊಡಗಿದರೆ ಕೆಲವರು ಇವರ ಆ ವಿಚಿತ್ರ ವರ್ತನೆಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾ ನೆಡೆಯುವರು. ಮತ್ತೆ ಕೆಲವರು ಮಿಲ್ಕಾ ಸಿಂಗ್ ಗಳಂತೆ ಮುಂದೆ ಸಿಕ್ಕವರನ್ನು ತುಳಿದು ತಿವಿದೇ ಬಿಡುವಂತೆ ಓಡತೊಡಗಿದರೆ ಇನ್ನು ಕೆಲವರು ಓಡುವುದಕ್ಕಿಂತ ಜಾಸ್ತಿ ಜ್ಯೂಸು, ಬಿಸ್ಕತ್ತು ಹಾಗು ಹಣ್ಣುಗಳನ್ನು ತಿಂದು ಸಾಂತ್ವನ ತಂದುಕೊಳ್ಳುವರು. ಇನ್ನು ಮಕ್ಕಳು ಯುವಕರಂತೂ ಇಡೀ ಫೀಲ್ಡ್ನ ತುಂಬೆಲ್ಲ ಪಸರಿಸಿಕೊಂಡು ಕ್ರಿಕೆಟ್ ಆಡುವ ಮೋಜು. ಯಾವ ಆಟಗಾರ ಅದ್ಯಾವ ಮ್ಯಾಚಿನವನೋ ಅದೊಂದು ಬಗೆಯ ಚಿದಂಬರ ರಹಸ್ಯವೇ ಹಲವರಿಗೆ. ಇನ್ನು ಕೆಲವರು ತಾವು ವಾಕ್ ಮಾಡಲು ಬಂದಿರುವುದೋ ಅಥವಾ ತಮ್ಮ ಅತಿ ಧುಬಾರಿ ನಾಯಿಯನ್ನು ಪ್ರದರ್ಶನಕ್ಕೆ ತಂದಿರುವರೋ ಹೇಳುವುದು ಕಷ್ಟ. ಕಿವಿಗೆ ಇಯರ್ ಫೋನನ್ನು ತೂರಿಸಿಕೊಂಡು ಹಜ್ಜೆಗೊಂದು ಹೆಜ್ಜೆಯನ್ನು ಪೋಣಿಸುತ್ತಾ ನೆಡೆದರೆ ಆ ಧುಬಾರಿ ನಾಯಿ ತನ್ನ ಅಗ್ಗದ ನಾಯಿ ಬುದ್ದಿಯನ್ನು ಬಿಡಬೇಕೆ? ಕುತ್ತಿಗೆಗೆ ಹಾಕಿರುವ ಸರಪಳಿಯೇ ತುಂಡಾಗುವಂತೆ ಗಬ್ಬು ವಾಸನೆ ಬರುವೆಡೆಯೊ ಅಥವಾ ಮತ್ಯಾವಾವುದೋ ಅನ್ಯ ಲಿಂಗಿ ನಾಯಿಯ ಸೆಳೆತಕ್ಕೊ ಒಳಗಾಗಿ ಓಟ ಕೀಳುವುದು. ಆಗ ಮಾತ್ರ ಬಹುಷಃ ಆ ನಾಯಿಯೊಟ್ಟಿಗೆ ವಾಕಿಂಗ್ ಬಂದಿರುವವರು ಜಾಗಿಂಗ್ ಮಾಡುವುದು! ಸುಪ್ತವಾಗಿದ್ದ ನಾಯಿಯ ನಾಯಿಬುದ್ಧಿಯನ್ನು ಕೂಡಲೇ ಶಮನಮಾಡುವುದು ಅಷ್ಟು ಸುಲಭವಲ್ಲ ಎಂದೆನಿಸಿ ಏದುಸಿರು ಬಿಡುತ್ತಾ ಕೊನೆಗೂ ಅದನ್ನು ಅದರ ಪಾಡಿಗೆ ಬಿಟ್ಟು ಕಲ್ಲು ಬೆಂಚಿನ ಮೇಲೆ ಕೂತು ನಿಟ್ಟುಸಿರು ಬಿಡುವರು.

ಲೋಕೇಶ ಅದೇನೇ ಬಡಬಡಿಸಿದರೂ ಆದಿ ಒಂದಿನಿತೂ ಪ್ರತಿಕ್ರಿಯೆ ನೀಡದೆಯೆ ಫೀಲ್ಡ್ನವರೆಗೂ ಓಡುತ್ತಲೇ ಬಂದ. ಆತನೊಳಗೆ ಈಗ ಅಪ್ಪ, ಅಮ್ಮ, ಖುಷಿ ಎಂಬ ಮೂರು ಪಾತ್ರಗಳು ಪ್ರೀತಿಯೆಂಬ ನಾಲ್ಕನೇ ಪಾತ್ರವನು ಸೃಷ್ಟಿಸಲು ಆವಣಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಾರಣ ತನ್ನ ಪೋಷಕರೇ ಎಂದು ಆತ ಅಂದುಕೊಳ್ಳುತ್ತಾನೆ. ಕೋಪ ಇನ್ನೂ ವಿಪರೀತವಾಯಿತು. ಲೊಕೇಶನೊಟ್ಟಿಗೆ ಓಡೋಡಿಕೊಂಡೆ ಇಲ್ಲಿಯವರೆಗೂ ಬಂದ ಆದಿ ಒಂದಿನಿತೂ ಸುಸ್ತಾದವನಂತೆ ಕಾಣಲಿಲ್ಲ. ಲೋಕೇಶನೇ ಖುದ್ದಾಗಿ 'ಸ್ವಲ್ಪ ಹೊತ್ತು ಕೂತು ಆಮೇಲೆ ಜಾಗಿಂಗ್ ಮಾಡುವ' ಎಂದರೂ ಕೇಳದ ಆದಿ ಕ್ರೀಡಾಂಗಣದ ಸುತ್ತ ಓಡತೊಡಗುತ್ತಾನೆ. ತಲೆಯ ತುಂಬೆಲ್ಲ ಚಿತ್ತವನ್ನು ಹರಿದು ತಿನ್ನುವ ವಿಷಯಗಳೇ ತುಂಬಿರುವಾಗ ಬಹುಷಃ ಆತನಿಗೆ ತಾನು ಇಲ್ಲಿಗೆ ಬಂದಿರುವದೇ ಗೊತ್ತಿಲ್ಲದಿರಬಹುದು. ಆತ ಓಡುತ್ತಲೇ ಹೋದ. ಓಟ ತೀವ್ರವಾಯಿತು. ಮುಂದೆ ಸಿಕ್ಕ ಬೊಜ್ಜು ತುಂಬಿದ ದೇಹಗಳು ಈತನ ಓಟದ ರಭಸಕ್ಕೆ ಸರ್ರನೆ ದಾರಿ ಸರಿದು ಬದಿಗೆ ನಿಂತವು. ದುಭಾರಿ ನಾಯಿಯೊಂದು ತನ್ನ ಮಾಲೀಕನಿಂದ ಸರಪಣಿ ಸಮೇತ ಬೇರ್ಪಟ್ಟು ಆದಿಯೊಟ್ಟಿಗೆ ಓಡತೊಡಗಿತು.

ಅಷ್ಟು ದೊಡ್ಡ ಕ್ರೀಡಾಂಗಣದ ಎರಡನೇ ಸುತ್ತನ್ನು ಮುಗಿಸಿದ ಆದಿಯನ್ನು ಲೋಕೇಶ ಜೋರಾಗಿ ಕೂಗಿ ನಿಲ್ಲುವಂತೆ ಹೇಳುತ್ತಾನೆ. ಆದಿಗೆ ಆತನ ಕೂಗಿನ ಸದ್ದೂ ಕಿವಿಯ ಮೇಲೆ ಬೀಳಲಿಲ್ಲ. ಓಟ ಮುಂದುವರೆಯಿತು. ಆತನ ಓಟವನ್ನು ನೋಡಿದ ಲೋಕೇಶನಿಗೆ ಈಗ ಅಕ್ಷರ ಸಹ ದಿಗ್ಬ್ರಮೆಯಾಗತೊಡಗಿತು. ಆತ ತನ್ನ ಮೊಬೈಲನ್ನು ಹೊರತೆಗೆದ. ಮೂರನೇ ಸುತ್ತನ್ನು ಮುಗಿಸುವಷ್ಟರಲ್ಲಿ ವಾಕಿಂಗ್ ಗೆ ಬಂದಿದ್ದ ಹಲವರು ಟ್ರ್ಯಾಕ್ ನ ಉದ್ದಕ್ಕೂ ಈತನಿಗೆ ದಾರಿ ಬಿಡುವಂತೆ ಪಕ್ಕಕೆ ಸರಿದು ನಿಂತಿದ್ದರೆ, ಗಹಗಹನೇ ನಗುತ್ತಿದ್ದ ಹಿರಿಯರ ಗುಂಪೂ ಮೊದಲ ಬಾರಿಗೆ ಎಂಬಂತೆ ಅಷ್ಟು ದೊಡ್ಡ ಕ್ರೀಡಾಂಗವನ್ನು ಒಂದೇ ವೇಗದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯುವಕನನ್ನು ಬಾಯ್ಬಿಟ್ಟುಕೊಂಡೇ ನೋಡತೊಡಗಿತು. ನಾಲ್ಕನೇ ಸುತ್ತನ್ನು ತನ್ನ ಮೊಬೈಲಿನ ಟೈಮರ್ ನಲ್ಲಿ ಲೆಕ್ಕ ಹಾಕಿದ ಲೋಕೇಶನಿಗೆ ಆದಿಯ ವೇಗವನ್ನು ಕಂಡು ನಂಬಲೇ ಆಗಲಿಲ್ಲ.

'ಆದಿ...! ಕಮ್ ಆನ್ ಮ್ಯಾನ್ .. ಸ್ಟಾಪ್ ಇಟ್ ನೌ..' ನಾಲ್ಕನೇ ಸುತ್ತನ್ನು ಮುಗಿಸಿದ ಆದಿಯನ್ನು ಉದ್ದೇಶಿಸಿ ಈ ಬಾರಿ ತನ್ನ ಶಕ್ತಿಯನ್ನು ಮೀರಿ ಕೂಗಿದ.

ಆದಿ ನಿಲ್ಲಲಿಲ್ಲ.

ಆದರೆ ಈ ಬಾರಿ ಲೋಕೇಶ ಸುಮ್ಮನಿರದೆ ಆತನೂ ಆದಿಯ ಹಿಂದೆ ಓಡುತ್ತಾ ಒದ್ದೆಯಾಗಿದ್ದ ಆತನ ಶರ್ಟ್ನ ಕುತ್ತಿಗೆಯನ್ನು ಹಿಡಿದು ಜಗ್ಗತೊಡಗಿದ. ದುಃಖಭರಿತ ಸಿಟ್ಟಿನಲ್ಲಿ ಕೂಗುತ್ತಾ ಆದಿ ಲೊಕೇಶನ ಕೈಯನ್ನು ದೂರಕ್ಕೆ ತಳ್ಳುತ್ತಾನೆ. ಆದರೆ ಲೋಕೇಶ ಸುಮ್ಮನಾಗುವುದಿಲ್ಲ. ಆತನ ಕೈಯನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸತೊಡಗುತ್ತಾನೆ. ಕೆಲ ಕ್ಷಣ ಕೊಸರಾಡಿದಂತೆ ಆಡಿದ ಆದಿ ಕೊನೆಗೆ ಶಾಂತವಾಗುತ್ತಾನೆ. ಆತನ ಕಣ್ಣುಗಳು ರಕ್ತ ಕಾರುವಂತೆ ಕೆಂಪಾಗಿದ್ದವು. ಲೋಕೇಶ ಆತನಿಗೆ ಕುಡಿಯಲು ನೀರನ್ನು ಕೊಟ್ಟರು ಒಂದು ಗುಟುಕು ಕುಡಿಯದ ಆತ ಕೂಡಲೇ ಅಲ್ಲಿಂದ ರೂಮಿನೆಡೆಗೆ ಓಡುತ್ತಾನೆ. ಲೋಕೇಶ ಆಶ್ಚರ್ಯದಿಂದ ಆತ ಓಡಿದ ದಿಕ್ಕನೇ ನೋಡುತ್ತಾ ನಿಲ್ಲುತ್ತಾನೆ.

'ಏನಪ್ಪಾ ಆತ ನಿನ್ ಫ್ರೆಂಡ' ಹಿಂದಿನಿಂದ ಬಂದ ಅರ್ವತ್ತರ ವ್ಯಕ್ತಿಯೊಬ್ಬರು ಕೇಳಿದರು.

'ಹೌದು ಸಾರ್.. ಏಕೆ?'

'ನೋಡು, ನಾನ್ ಇಲ್ಲಿ ಕಳೆದ ಮೂವತ್ತು ವರ್ಷದಿಂದ ವಾಕಿಂಗ್ ಗೆ ಬರ್ತಾ ಇದ್ದೀನಿ .. ಆದ್ರೆ ಈ ರೀತಿ ನಾಲ್ಕ್ ರೌಂಡ್ ರನ್ನಿಂಗ್ ನ ಇಷ್ಟ್ ಫಾಸ್ಟಾಗಿ ಓಡಿರೋದ್ನ ಯಾರನ್ನೂ ನೋಡಿಲ್ಲ.. ಅವ್ರು ನ್ಯಾಷನಲ್ ಲೆವೆಲ್ ರನ್ನರ?' ಎಂದು ಕೇಳುತ್ತಾರೆ.

ಅವರ ಪ್ರೆಶ್ನೆಗೆ ನಕ್ಕ ಲೋಕೇಶ ತನ್ನ ಫೋನಿನ ಟೈಮರ್ ಅನ್ನು ತೆಗೆದು ನೋಡುತ್ತಾ,

'ಸದ್ಯಕ್ಕೆ ಒಬ್ಬ ಟ್ರೂ ಲವರ್ ಅಷ್ಟೇ ಸರ್ .. ಇನ್ ಸ್ವಲ್ಪ ದಿನದಲ್ಲಿ ನೋಡಿ ಹಿ ವಿಲ್ ಬಿ ಆ ಡ್ಯಾಶಿಂಗ್ ರನ್ನರ್..' ಎನ್ನುತ್ತಾನೆ.

**

ಸುಪ್ತವಾಗಿದ್ದ ಆದಿಯ ಆ ಅದ್ಭುತ ಓಟ ಲೋಕೇಶನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕಿದ್ದವು. ವರ್ಷಗಳಿಂದ ಓಡುತ್ತಿರುವ ತಾನೇ ಮನಸ್ಸು ಮಾಡಿ ಓಡಿದರೂ ಹೆಚ್ಚೆಂದರೆ ಎರಡು ಸುತ್ತುಗಳನ್ನು ಓಡಬಹುದಾದ ಟ್ರ್ಯಾಕ್ ಅನ್ನು ಆದಿ ಅದೇಗೆ ಒಮ್ಮೆಲೇ ನಾಲ್ಕು ಸುತ್ತನ್ನು ಓಡಿದ ಎಂದು ದಿಗ್ಭ್ರಮೆಯಾಯಿತು. ಒಟ್ಟಿಗೆ ಒಂದು ಹೊಸ ಆಲೋಚನೆಯೂ ಮೂಡಿತು.

ಜಾಗಿಂಗ್ ಮುಗಿಸಿ ಅಲ್ಲಿಂದ ಸೀದಾ ತನ್ನ ಶುಂಠಿ ಗದ್ದೆಗೆ ಹೋಗಿ ಅಜ್ಜಿಯೊಟ್ಟಿಗೆ ಜೀವನದ ಬಗೆಗಿನ ಅರೆಪಕ್ವಗೊಂಡ ಕೆಲವು ವಿಚಾರಗಳನ್ನು ಚರ್ಚಿಸಿ ರೂಮಿಗೆ ಬಂದ ಲೋಕೇಶ ಎಂದಿನಂತೆ ಕೈಕಾಲುಗಳನ್ನು ತೊಳೆಯದೆ ರೂಮಿನೊಳಗೆ ಬಂದು ಮಲಗಿದ್ದ ನನ್ನ ಮೇಲೆ ದೊಪ್ಪನೆ ಬಿದ್ದ. ಕನಸ್ಸಿನ ಲೋಕದಲ್ಲಿ ಆರಾಮಾಗಿ ವಿಶ್ರಮಿಸುತ್ತಿದ್ದ ನನಗೆ ದೊಡ್ಡ ಬಂಡೆಯೊಂದು ಮೈಮೇಲೆ ಕುಸಿದು ಬಿದ್ದಂತಹ ಅನುಭವವಾಯಿತು. ಎದ್ದು ವಾಸ್ತವವನ್ನು ಅರಿತು , ಲೊಕೇಶನ ಅಂಡಿನ ಮೇಲೆ ಎರಡು ಬಾರಿ ಜಾಡಿಸಿ ಒದೆದ ಮೇಲೆಯೇ ನನ್ನ ಕೋಪ ಕೊಂಚ ಶಮನವಾದದ್ದು. ನಾನು ಶಕ್ತಿ ಮೀರಿ ಕೊಟ್ಟ ಏಟನ್ನೂ ಅಷ್ಟಾಗಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಆತ,

'ಮಚಿ.. ಇವತ್ತಿಂದ ಇನ್ ಆರ್ ತಿಂಗಳ್ಲಲಿ ನಮ್ಮಲ್ಲಿ ಒಬ್ಬ ಯೂನಿವರ್ಸಿಟಿ ಚಾಂಪಿಯನ್ ಆಗ್ತಾನೆ.. ದಿ ರನ್ನಿಂಗ್ ಚಾಂಪಿಯನ್'. ಎಂದು ಆತ ಹೇಳಿದ. ಬಾಯ್ಬಿಟ್ಟರೆ ಆಕಾಶಕ್ಕೆ ಹಾರುವ ಮಾತಾಡುವ ಆತನ ಮಾತನ್ನು ನಾನು ಕೇಳಿಯೂ ಕೇಳದವನಂತೆ ಸುಮ್ಮನಾದೆ. ಆದರೂ ಯಾಕೋ ಕೇಳಬೇಕೆಂದ್ದಾಗಿ,

'ಯಾರಪ್ಪ ಅದು ಮಹಾತ್ಮಾ' ಎಂದು ಹೊದೆದುಕೊಂಡಿದ್ದ ರಗ್ಗನ್ನು ಮುಖ ಮುಚ್ಚುವಂತೆ ಮೇಲಕ್ಕೆ ಎಳೆದುಕೊಂಡೆ.

'ಆದಿ..' ಎಂದಷ್ಟೇ ಹೇಳಿದ ಆತ ಸುಮ್ಮನಾದ. ಓದುವ ಕಾಲದಲ್ಲಿ ಶುಂಠಿ ಬಿಸಿನೆಸ್ನಂತ ಅಡ್ಡ ಕಸುಬನ್ನು ಹಿಡಿದಿರುವ ಈ ಅಡ್ಡಕಸುಬಿ ಇನ್ನು ಆ ಅಮಾಯಕ ಆದಿಶೇಷನನ್ನು ಮುಗಿಸಿಬಿಡುವನೋ ಎಂದು ಕೂಡಲೇ ಎದ್ದು ಕೂತೆ.

'ವ್ಹಾಟ್ ?! ಮಗ್ನೆ ನೀನು ಫೇಲ್ ಆಗೋದಲ್ದೆ ಅವನ್ನೂ ಜೊತೆಗೆ ಕೂರ್ಸ್ಕೊಬೇಕು ಅನ್ಕೊಂಡಿದ್ದೀಯ?! ಪಾಪ ಅವ್ನ್ ಏನ್ ಮಾಡ್ದ ಅಂತ ಈಗ ರನ್ನಿಂಗು'

'ಏನ್ ಮಾಡಿದಾನ.. ನೋಡಿಲ್ಲಿ' ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ತೋರಿಸುತ್ತಾ 'ರೆಕಾರ್ಡ್ ಬ್ರೇಕಿಂಗ್ ಸ್ಪೀಡಲ್ಲಿ ಓಡ್ತಾನೇ ಕಾಣಪ್ಪಾ ಈ ಮಹಾಶಯ.. ನಂಗಂತೂ ಅಷ್ಟ್ ಓಡೋಕೆ ಸಾಧ್ಯನೇ ಇಲ್ಲ ಬಿಡು .. ಅದ್ ಯಾರನ್ನ ಓಡಿಸ್ಕೊಂಡ್ ಹೋಗ್ತಾ ಇದ್ನೋ ಗೊತ್ತಿಲ್ಲ' ಎಂದು ನಗತೊಡಗಿದ.

'ಲೋಕಿ ಬೇಡ್ವೊ .. ಅವ್ನ್ ಏನಾದ್ರೂ ಫೇಲ್ ಆದ್ರೆ ನಮ್ ಕತೇನೂ ಅಷ್ಟೇ.. ಅವ್ನ್ ಪಾಡಿಗೆ ಅವ್ನ ಓದೋಕ್ಕೆ ಬಿಡು' ನಾನೆಂದೆ.

'ನೋ ವೇಸ್.. ನೀನ್ ಸುಮ್ನಿರಪ್ಪಾ, ನಾನೇನ್ ಅವ್ನ ಮಾರ್ಸಿಗೂ ಅಥವಾ ಮತ್ತೊಂದು ಗ್ರಹಕ್ಕೋ ಕಳ್ಸ್ತಾ ಇಲ್ಲ..ಏನ್ ದಿನಕ್ಕೆ ಒಂದ್ ಘಂಟೆ ಖರ್ಚ್ ಮಾಡಿದ್ರೆ ಸಾಕು' ಎನ್ನುತ್ತಾನೆ. ಅಷ್ಟರಲ್ಲಿ ಸ್ನಾನಕ್ಕೆ ಹೋಗಿದ್ದ ಆದಿ ಹೊರಬರುತ್ತಾನೆ. ಎಂದಿನಂತೆ ಯಾರೊಟ್ಟಿಗೂ ಮಾತನಾಡದೆ ಸೆಪ್ಪೆಮೋರೆಯನ್ನು ಹಾಕಿಕೊಂಡೆ ಕಾಲೇಜಿಗೆ ರೆಡಿಯಾಗತೊಡಗುತ್ತಾನೆ.

'ಆದಿ, ದಾರೀಲಿ ಪ್ರಿನ್ಸಿಪಲ್ ಸಿಕ್ಕಿದ್ರು' ಲೋಕೇಶ ಹೇಳಿದ.

'ಒಹ್, ಏನಂತೆ'

'ಅವ್ರ್ ಮಗಳಿಗೆ ಒಬ್ಬ ಬಾಯ್ ಫ್ರೆಂಡ್ ಬೇಕಂತೆ..' ಎಂದ ಆತ ಗೊಳ್ಳನೆ ನಗತೊಡಗಿದ. ಒಮ್ಮೆಲೇ ಮೂಡಿದ ಆ ಪ್ರತಿಕ್ರಿಯೆಗೆ ನನಗೂ ನಗುವನ್ನು ತಡೆಯಲಾಗಲಿಲ್ಲ.

ಆದಿ ಸುಮ್ಮನಿದ್ದ.

ಕೂಡಲೇ ಲೋಕೇಶ ಆತನ ಬಳಿಗೋಗಿ 'ಮಚಿ, ನೀನ್ ಈ ಪಾಟಿ ಓಡಿರೋದನ್ನ ನಾನು ನೋಡಿರಲೇ ಇಲ್ಲ. ಏನ್ ಅಂತ ಬ್ರಿಲಿಯಂಟ್ ರನ್ನಿಂಗ್ ಅಲ್ದೆ ಇದ್ರೂ ಇಟ್ಸ್ ಪ್ರಾಮಿಸಿಂಗ್. ಡೈಲಿ ಇದೆ ರೀತಿ ಪ್ರಾಕ್ಟೀಸ್ ಮಾಡಿದ್ರೆ ಯೂನಿವರ್ಸಿಟಿ ಚಾಂಪಿಯನ್ಶಿಪ್ಗೆ ಟ್ರೈ ಮಾಡಬಹುದು..' ಎಂದು ಸುಮ್ಮನಾದ.

'ನನ್ನ್ ಲೈಫೇ ಒಂದು ಚಾಂಪಿಯನ್ ಶಿಪ್ ಆಗಿದೆ ಇವಾಗ .. ಮೊದ್ಲು ಅದನ್ನ ಗೆದ್ರೆ ದೊಡ್ಡ್ ವಿಷ್ಯ..' ಎಂದ ಆದಿ ಮತ್ತೇನೂ ಮಾತನಾಡದೆ ಬಿರಬಿರನೆ ರೂಮಿನಿಂದ ಹೊರನೆಡೆದ.

ಲೋಕೇಶನಿಗೆ ಏನೇಳಬೇಕೆಂದು ತೋಚದೆ ನನ್ನೆಡೆಗೆ ನೋಡತೊಡಗಿದ.



****



ಮದ್ಯಾಹ್ನದ ಊಟಕೆಂದು ಬರ್ಗರ್ ತಿನ್ನಲು ಕಾಲೇಜಿನ ಹತ್ತಿರದ ಮಾಲಿಗೆ ಬಂದು ಕೂತಿರುವಾಗ ಪಕ್ಕದ ಟೇಬಲ್ಲಿನ ತಿಂದು ಬಿಟ್ಟ ಪ್ಲೇಟ್ಗಳನ್ನು ತೆಗೆಯಲಿಲ್ಲವೆಂದು ಬೊಜ್ಜುಗಟ್ಟಿದ್ದ ದೇಹಗಳೆರೆಡು ಅಲ್ಲಿನ ಕ್ಲೀನರನ್ನು ಕರೆದು ಒಂದೇ ಬೈಯತೊಡಗಿದವು. ಬಿರಬಿರನೆ ವಾನರರಂತೆ ಅರೆಬರೆ ತಿಂದು ಬಿಸುಟು ಹೋಗಿದ್ದ ಆಹಾರವನ್ನು ಆತ 'ಸಾರಿ ಸಾರ್ , ಸಾರಿ ಮೇಡಂ' ಏನುತಾ ಎತ್ತಿ ಪ್ಲೇಟ್ ಒಂದಕ್ಕೆ ಸುರಿದು ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಹಾಕಿ ಬಂದು, ಸ್ಪ್ರೇಯ ನೀರನ್ನು ಟೇಬಲ್ಲಿನ ಮೇಲೆಲ್ಲಾ ಚುಮುಕಿಸಿ ಬಟ್ಟೆಯೊಂದನ್ನು ತೆಗೆದು ನೀಟಾಗಿ ಒರೆಸಿ ಅವರನ್ನು ಕೂರುವಂತೆ ಹೇಳುತ್ತಾನೆ.

'ಹ್ಯುಮಾನಿಟಿ ಅನ್ನೋ ಪದಕ್ಕೆ ಅರ್ಥ ಹೋಗಿರೋದೇ ಇಂತವರಿಂದ..' ಸಂಕಟದ ಅಲೆಯೊಂದು ಲೋಕೇಶನ ಮುಖದ ಮೇಲೆ ಮೂಡಿ ಮರೆಯಾಯಿತು.

'ಅಲ್ ನೋಡ್ ಮಚಿ ಆ ಕಾಗೆಗಳನ್ನ.. ತಿನ್ನೋಕ್ಕೆ ಒಂಚೂರು ಊಟ ಸಿಕ್ರು ಸಾಕು ಹೇಗೆ ಕೂಗಿ ತನ್ನವರೆಲ್ಲರನ್ನು ಕರೆಯುತ್ತೆ..ಅಲ್ಲಿ ವರ್ಣ, ಜಾತಿ, ಮೇಲು ಕೀಳು ಅನ್ನೋ ಒಂಚೂರೂ ತಾರತಮ್ಯ ಇಲ್ಲ. ಹಸಿದಾಗ ಮಾತ್ರ ಆಹಾರ ಇಲ್ಲವರಾದರೆ ವಿರಾಳವಾದ ವಿಹಾರ. ಇಂತಹ ಮುಗ್ದ ಪ್ರಾಣಿಗಳ ನಡುವೆ ಮಾನವ ಅದೇಗೆ ಜನ್ಮ ತಾಳಿದ ಅನ್ನೋದೇ ತಿಳಿಯೋಲ್ಲ . ಅದೆಷ್ಟು ಕೆಟಗರಿಯ ಮಾನವರು ಇದ್ದಾರೆ ಇಲ್ಲಿ. ದೇಶ, ಭಾಷೆ, ಜಾತಿ, ವರ್ಣದಿಂದಿಡು ಪ್ರಗತಿಪರ, ದೇಶದ್ರೋಹಿ, ಅತ್ಯಾಚಾರಿ.. ಥು.. ನಮ್ದು ಒಂದು ಜೀವ್ನಾನ..' ಲೋಕೇಶನ ಸದ್ದು ನಾವು ಕೂತಿದ್ದ ಮೂರು ಟೇಬಲ್ಲಿನ ಆಚೆಗೂ ಕೇಳಿ ಕೆಲವರು ನಮ್ಮೆಡೆಗೆ ತಿರುಗುವಂತೆ ಮಾಡಿತು.

'ಹೊಟ್ಟೆ ತುಂಬಿದಾಗ ಮಾತ್ರ ಕೊಡ್ಬೇಕು ಅನ್ಸೋದು ..ಇಲ್ಲ ಅಂದ್ರೆ ಪ್ರಾಣಿಗಳಿಂತ ಕೀಳು.. ಆ ಕಣ್ಣುಗಳನ್ನು ನೋಡು ಮಚಿ .. ಬರಿ ನಾನು , ನನಗೆ , ನನ್ನದು ಅನ್ನೋದೇ ತುಂಬಿ ಕೊಬ್ಬಿ ಹೋಗಿದೆ..’

'ಗುರು.. ತಿಂದ್ ಆಯ್ತಾ.. ಫಸ್ಟ್ ಪಿರಿಯಡ್ ನಿಮ್ ಕುಂಬಕರ್ಣಿ ಅತ್ತೆದು.. ಬರ್ತೀಯೋ ಇಲ್ಲ ಇಲ್ಲೇ ಕೊಬ್ಬಿರೋ ಕಣ್ಣ್ಗಳನ್ನ ನೋಡ್ತಾ ಕೂರ್ತಿಯೋ ' ಎಂದು ಆತನ ಮಾತಿಗೆ ಕಿಂಚಿತ್ತು ಬೆಲೆಕೊಡದಂತೆ ಆತನಿಗೆ ನೆನಪಿಸಿದೆ.

ಆದಿ ಒಂದು ಮುಗುಳ್ನಕ್ಕ. ಆತನ ಮುಖದ ಮೇಲೆ ಇತ್ತೀಚಿಗೆ ನಗುವೆಂಬುದನ್ನು ಕಂಡು ತಿಂಗಳುಗಳೇ ಆಗಿವೆ.

'ಹಲೋ.. ಮಿಸ್ಟರ್!!' ಎಂದು ಜೋರಾಗಿ ಅರಚಿದ ಲೋಕಿ. ತುಸು ಮೊದಲು ತಾವೇ ಪರಮಪಾವನರಂತೆ ಟೇಬಲನ್ನು ಕ್ಲೀನರೊಬ್ಬನಿಂದ ಶುಚಿಗೊಳಿಸಿ ಈಗ ಬೇಕಾದ ಬೇಡವಾದ ಎಲ್ಲವನ್ನು ಆರ್ಡರ್ ಕೊಟ್ಟು ತಂದು, ರಕ್ಕಸರಂತೆ ತಿಂದು, ಫ್ರೆಂಚ್ ಫ್ರೈ ಹಾಗು ಕೆಚಪ್ಪಿನ ಒಡೆದ ಪ್ಯಾಕನ್ನು ಟೇಬಲ್ಲಿನ ಮೇಲೆಲ್ಲಾ ಚೆಲ್ಲಿ, ಬರ್ಗರ್ನ ಸುತ್ತಿ ಕೊಡುವ ಪೇಪರ್ ಹಾಗು ಟಿಶ್ಯೂವನ್ನು ಉಂಡೆಗಟ್ಟಿ ಕಸದ ತೊಟ್ಟಿಯಲ್ಲಿ ಬಿಸಾಡುವಂತೆ ಎಸೆದು ಗೊರ್ರನೆ ತೇಗುತ್ತಾ ಎದ್ದು ನೆಡೆಯತೊಡಗಿದ ಆ ಜೋಡಿಗೆ ಲೊಕೇಶನ ಗದರಿಸುವ ಸದ್ದು ಇತ್ತ ಕಡೆ ತಿರುಗುವಂತೆ ಮಾಡಿತು.

'ಯೆ..ಸ್..' ಅಮೇರಿಕ ಅಧ್ಯಕ್ಷನ ಹೆಂಡತಿಯಂತೆ ಧಿಮಾಕಿನ ಧ್ವನಿಯಲ್ಲಿ ನುಡಿದಳು ಆತನೊಟ್ಟಿಗಿದ್ದ ಆಕೆ.

'ಟೇಬಲನ್ನು ಅಷ್ಟ್ ಕ್ಲೀನ್ ಆಗಿ ಯಾಕ್ರೀ ಬಿಟ್ ಹೋಗ್ತಾ ಇದ್ದೀರಾ.. ಇನ್ನೂ ಸ್ವಲ್ಪ ಗಲೀಜ್ ಮಾಡಿ.. ಕ್ಲೀನರ್ ಬಾಯ್ ಅನ್ನೋ ಪ್ರಾಣಿ ಕಮ್ ಮಷೀನ್ ಇದ್ಯಲ್ಲ .. ಕ್ಲೀನ್ ಮಾಡುತ್ತೆ..’ ಅವರನ್ನೇ ದುರುಗುಟ್ಟಿ ನೋಡುತ್ತಾ ಹೇಳಿದ ಲೋಕೇಶ.

'Excuse me .. Mind your own Business!!'

‘I’m midning my own business Ma’m.. Now will you be kind enough to clean the table & leave..?' ತನ್ನ ಸಿಟ್ಟನ್ನು ಬಿಟ್ಟೂ ಬಿಡದವನಂತೆ ಹೇಳತೊಡಗಿದ ಲೋಕೇಶ.

‘Fuck off..’ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಆಕೆ ತನ್ನೊಟ್ಟಿಗೆ ಬಂದ ಯುವಕನ ಕೈ ಹಿಡಿದು ಎಳೆದುಕೊಂಡು ಹೊರಡತೊಡಗಿದಳು.

ಕೂಡಲೇ ಅಲ್ಲಿಗೆ ಬಂದ ಕ್ಲೀನರ್ ಹುಡುಗನನ್ನು ಕಣ್ ಸನ್ನೆಯಲ್ಲೇ ಶುಚಿಗೊಳಿಸದಂತೆ ಹೇಳಿದ ಲೋಕೇಶ,

'ಕ್ಲೀನ್ ಮಾಡೇ ಹೋಗ್ಬೇಕು.. ಇಲ್ಲ ಅಂದ್ರೆ ಇದೆ ಫೋಟೋನ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನ ತೆಗಿಬೇಕಾಗುತ್ತೆ..' ಎಂದು ಆತ ಅವರಿಬ್ಬರು ಕೂತು ತಿನ್ನುತ್ತಿದ್ದ ಹಾಗು ತಿಂದ ನಂತರದಲ್ಲಿ ಸೆರೆಹಿಡಿದಿದ್ದ ಫೋಟೋವನ್ನು ಕಾಣುವಂತೆ ತನ್ನ ಮೊಬೈಲಿನಲ್ಲಿ ಅವರಿಗೆ ತೋರಿಸುತ್ತಾನೆ. ಫೋಟೋವನ್ನು ಯಾವಾಗ ಅವರುಗಳು ಕಂಡರೋ ಕೊಂಚ ಹೊತ್ತು ಯೋಚಿಸುವಂತೆ ಮಾಡಿ ತಮ್ಮೆಲ್ಲ ಅಟ್ಟಿಟ್ಯೂಡನ್ನು ಬದಿಗಿಟ್ಟವರಂತೆ ಸಿಡುಕು ಮೊರೆಯಲ್ಲಿಯೇ ತಿಂದ ಅಷ್ಟೂ ವೆಸ್ಟನ್ನು ಪ್ಲೇಟ್ನ ಮೇಲಿರಿಸಿ ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಸುರಿದು ಗೊಣಗಿಗೊಳ್ಳುತ್ತಾ ಅಲ್ಲಿಂದ ಜಾಗ ಕಿತ್ತರು.

ಅಲ್ಲಿಯವರೆಗೂ ನೆರೆದಿದ್ದ ಎಲ್ಲರೂ ಇತ್ತಕಡೆಯೇ ನೋಡುತ್ತಿದ್ದರು ಹಾಗು ಊಟವಾದ ನಂತರ ತಮ್ಮ್ ತಮ್ಮ ಪ್ಲೇಟಿನಲ್ಲಿದ್ದ ಮಿಕ್ಕ ಊಟವನ್ನು ಖುದ್ದು ತಾವಾಗಿಯೇ ಎತ್ತಿ ಕಸದ ಬುಟ್ಟಿಗೆ ಸುರಿದು ಬರತೊಡಗಿದರು.

'ನೋಡ್ದ ಮಚಿ.. ಎಲ್ಲದಕ್ಕೂ ಒಂದ್ ಟ್ರಿಕ್ ಇರುತ್ತೆ' ಎಂದ ಲೋಕೇಶ ನಮತ್ತ ನೋಡುತ್ತಾ ನಗತೊಡಗಿದ.

'ಏನೋ ಬಿಡಪ್ಪ.. ಆದ್ರೆ ನಿನ್ ಈ ಸೋಶಿಯಲ್ ರಿಫಾರ್ಮ್ ಅಲ್ಲಿ ಆ ಅಮಾಯಕ ಕ್ಲೀನರ್ ಬಾಯ್ ಕೆಲ್ಸ ಹೋಗ್ಬಾರ್ದು ಅಷ್ಟೇ' ಎಂದೇ ನಾನು.

'ಹಾಗೇನಾದ್ರೂ ಆದ್ರೆ ಇವ್ನ್ ಅಂಗಡಿ ಮುಚ್ಚ್ಸಲ್ವ..'

'ಹೌದು ಬಾರಪ್ಪ ರೌಡಿ ರಂಗಣ್ಣ.. ಬಿಟ್ರೆ ನೀನು ಕಾಲೇಜನ್ನೂ ಮುಚ್ಚುಸ್ತಿಯ' ಎಂದ ನಾನು ಹೊರಡಲು ಅಣಿಯಾದೆ.

ಎಲ್ಲಿ ತಮ್ಮ ಫೋಟೋವನ್ನೂ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನವನ್ನು ಹರಾಜು ಹಾಕುವನೋ ಎಂಬಂತೆ ಆದಿ ನಮ್ಮೆಲ್ಲರ ಪ್ಲೇಟ್ಗಳನ್ನೂ ಎತ್ತಿ ಬದಿಗಿಟ್ಟು ಟೇಬಲನ್ನು ಶುಚಿಗೊಳಿಸಿದ.

ಲೋಕೇಶ ಏನೋ ಮೊಬೈಲ್ನಲ್ಲಿ ಟೈಪ್ ಮಾಡುವಂತೆ ಮಾಡಿ ದೊಡ್ಡದಾದ ಮಂದಹಾಸವನ್ನು ಬೀರತೊಡಗಿದ.

'ಈಗ್ ಏನಾಯಿತೋ ತಂದೆ?' ನಾನು ಕೇಳಿದೆ.

'ಏನಿಲ್ಲ.. ಆ ಧಡೂತಿ ಜೋಡಿ ಫೋಟೋನ ಆರ್ಕುಟ್ ನಲ್ಲಿ ಅಪ್ಲೋಡ್ ಮಾಡ್ದೆ ಅಷ್ಟೇ'

'ಎಂಥ ಕುಟ್ಟು??' ಮೊದಲಬಾರಿಗೆ ಎಂಬಂತೆ ಕೇಳಿದ ವಿಚಿತ್ರ ಪದವನ್ನು ಮಗದೊಮ್ಮೆ ಕೇಳಿದೆ.

'ಒಂದು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ .. ಅಲ್ಲಿ ನೂರಾರ್ ಜನ ಫ್ರೆಂಡ್ಸ್ ಗ್ರೂಪ್ಸ್ ಇರುತ್ತೆ .. ಕೆಲವ್ ತಿಂಗಳ ಮೊದಲಷ್ಟೇ ಲಾಂಚ್ ಆಗಿದ್ದು .. ನಮ್ ಕಾಲೇಜ್ ಗ್ರೂಪು ಅದ್ರಲ್ಲಿದೆ.. ಅದೇ ಒಂದು ಗ್ರೂಪಿಗೆ ಈ ಫೋಟೋ ಹಾಕಿ ಕಾಮೆಂಟ್ಸ್ ಬರ್ದಿದ್ದೀನಿ ..'

'ಲೋ ಯಾಕೋ ಇದೆಲ್ಲ.. ಅವ್ರ್ ಕ್ಲೀನ್ ಮಾಡಿ ಹೋದ್ರಲ್ಲ '

'ಹೌದು ಗುರು .. ಆದ್ರೆ ಏನ್ ಮಾಡೋದು, Fuck off ಅಂತ ಬೈದ್ಲಲ್ಲ ' ಎಂದ ಲೋಕೇಶ ವ್ಯಂಗ್ಯಭರಿತ ನಗುವನ್ನು ಬೀರಿದ.

Continues..

Saturday, July 4, 2020

ಪಯಣ - 10

ತಿಳಿದ ಮಟ್ಟಿನ ಕನ್ನಡ ವ್ಯಾಕರಣಗಳ ಜ್ಞಾನದಿಂದಲೇ ಕಾದಂಬರಿಯ ಓದಿನಲ್ಲಿ ಮಗ್ನಳಾಗಿದ್ದ ಅಮೇಲಿಗೆ ಬೆಂಬಿಡದೆ ಮೂಡುತ್ತಿದ್ದ ಮೊಬೈಲಿನ ಸದ್ದು ಎಚ್ಚರಿಸಿತು. ಅಷ್ಟರಲ್ಲಾಗಲೇ ನಾಲ್ಕೈದು ಬಾರಿ ಕಾಲನ್ನು ಡಿಸ್ಕನೆಕ್ಟ್ ಮಾಡಿದರೂ ಪುನ್ಹ ರಿಂಗಣಿಸುತ್ತಿದ್ದ ಫೋನನ್ನು ಸಿಟ್ಟಿನಿಂದ ಕೈಗೆತ್ತುಕೊಂಡು 'ಹಲೋ .. ಬಡ್ಡಿಮಗ್ನೆ .. ರಾತ್ರಿ ಆದ್ರೂ ಏನೋ ನಿಂದು ಪ್ರಾಬ್ಲಮ್ಮು' ಎಂದು ಚೀರಿದಳು. ಚೀರುವಿಕೆಯ ಆ ರಭಸಕ್ಕೆ ಆಕೆಯ ಮುಂಗೂದಲು ಗಾಳಿಯಲ್ಲಿ ಹಾರುತ್ತ ಕೆಳ ಬೀಳುತ್ತಿತ್ತು.

'ಒಹ್ .. ಮೈ .. ಗಾಡ್ .. ಏನೇ ಅಮೆಲಿ ಇಷ್ಟ್ ಚೆನ್ನಾಗಿ ಬೈಯೋದನ್ನ ಯಾವಾಗ ಕಲ್ತೆ..?' ಎಂದು ಅತ್ತಕಡೆಯಿಂದ ನಗುತ್ತ ಹೇಳಿದ ರಾಜ್. ದೂರದೂರಿನಲ್ಲಿ ಕನ್ನಡದ ಬೈಗುಳವೂ ಆತನಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿತಲ್ಲದೆ ಆಕೆ ಪುನಃ ಮತ್ತೇನಾದರೂ ಬೈಯಲಿ ಎಂದು ಕಾಯತೊಡಗಿದ.

'ರಾಜ್ .. ಡೋಂಟ್ ಟೆಸ್ಟ್ ಮೈ ಪೇಶೆನ್ಸ್ .. ಐಮ್ ರೀಡಿಂಗ್ ಎ ಕನ್ನಡ ನಾವೆಲ್ .. ಪ್ಲೀಸ್ ಲೀವ್ ಮೀ ಅಲೋನ್' ಎಂದು ಫೋನನ್ನು ಕಟ್ ಮಾಡಿ ತನ್ನ ಬೆಡ್ಡಿನ ಪಕ್ಕಕ್ಕೆ ಎಸೆದಳು. ಕೆಲ ಸೆಕಂಡುಗಳ ಒಳಗೆಯೇ ಪುನ್ಹ ರಿಂಗಣಿಸಿದ ಫೋನನ್ನು ಪುನಃ ಕೈಗೆತ್ತುಕೊಂಡು 'ರಾಜ್ .. ವಾಟ್ ಹೆಪ್ಪೆನ್ಡ್ .. ನಾಳೆ ಮಾತಾಡಿದ್ರೆ ಆಗೋಲ್ವಾ . ಪ್ಲೀಸ್..' ಎಂದು ಶಾಂತವಾಗಿಯೇ ಹೇಳಿದಳು. ಆಕೆ ಹಾಗೆಂದು ಇನ್ನೇನು ಫೋನನ್ನು ಬದಿಗೆಸೆಯಬೇಕು ಎನ್ನುವಷ್ಟರಲ್ಲಿ ರಾಜ್ ಮಾತನಾಡಿ,

'ಅಮಿ .. ಏನಿಲ್ಲ .. ಇಶಾ ಎಲ್ಲಿದ್ದಾಳೆ .. ಆಗಿಂದ ಫೋನ್ ಮಾಡ್ತಾ ಇದ್ದೀನಿ . ಪಿಕ್ ಮಾಡ್ತಾ ಇಲ್ಲ' ಎಂದು ಕೇಳಿದನು.

'ಅವ್ಳು ಕೃಷ್ಣನ ಟೆಂಪಲ್ಗೆ ಹೋಗಿದ್ದಾಳೆ..ಮೇ ಬಿ ಅಲ್ಲೇ ಇರ್ಬೇಕು..' ಎಂದು ಮುಂದೇನೋ ಕೇಳುವಷ್ಟರಲ್ಲಿಯೇ ಅತ್ತ ಕಡೆಯಿಂದ ಕಾಲ್ ಡಿಸ್ಕನೆಕ್ಟ್ ಟೋನ್ ಬರತೊಡಗಿತು. ಹೆಚ್ಚೇನೂ ತಲೆ ಕೆಡಿಸಿಕೊಳ್ಳದೆ ಆಮೇಲಿ ತನ್ನ ಓದಿನಲ್ಲಿ ಮುಂದುವರೆದಳು. ಆ ರಾತ್ರಿಯೇ ಅಷ್ಟೂ ಪುಟಗಳನ್ನು ಓದೇ ತೀರಬೇಕೆಂಬ ಅಧಮ್ಯ ಆಸೆಯಿಂದ.



*********************************************************************************



ಪುಟ 51

'ಯಾಕಪ್ಪ ಮರಿ .. ಏನ್ ಸಮಾಚಾರ .. ಊಟ , ತಿಂಡಿ , ನಿದ್ದೆ ಎಲ್ಲ ಸರಿಯಾಗ್ ಮಾಡ್ತಾ ಇಲ್ವಂತೆ.. ಏನ್ ವಿಷ್ಯ' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ರೂಮಿನೊಳಗೆ ಬರುತ್ತಾ ಕೇಳಿದ ಲೋಕೇಶ. ಪ್ರತ್ಯುತ್ತರವಾಗಿ ಆದಿ ಆತನನ್ನು ಒಂದೆರಡು ಕ್ಷಣ ಗುರಾಯಿಸಿ ಸುಮ್ಮನಾದ. ಹಾಡುಗಳ ಸಂತೆಯಲ್ಲಿ ನಾನು ನನ್ನದೇ ಲೋಕವೊಂದರಲ್ಲಿ ಮುಳುಗಿಹೋಗಿದ್ದೆ. ಶಾಂತವಾಗಿದ್ದ ರೂಮಿನ ಏಕಾಂತತೆಯನ್ನು ಲೊಕೇಶನ ಆಗಮನ ಅಲ್ಲೊಲ್ಲ ಕಲ್ಲೋಲ ಮಾಡಿತು. ಗದ್ದೆಯ ಕೆಸರು ಮೆತ್ತಿದ ಶೂ ಗಳು , ನಾತ ಭರಿತ ಆ ಸಾಕ್ಸ್ಗಳು, ಬಡಬಡನೆ ತನ್ಮಯತೆಗೆ ಭಂಗ ತರುವ ಆತನ ಮಾತುಗಳ ಸದ್ದು ಕೋಪದ ಅಗ್ನಿಗೆ ತುಪ್ಪವನ್ನು ಸುರಿದಂತೆ ಮಾಡಿದವು.

'ಹೋಗಿ ಕಾಲ್ ತೊಳ್ಕೊ ಬಾರೋ ಹಂದಿಮುಂಡೆಗಂಡ!!' ಇನ್ನೂ ಉಸಿರು ತಡೆಯಿಡಿಯಲಾರದೆ ನಾನು ಅರಚಿದೆ.

'ಹ್ಯಾಂಡಿ ಮೂನ್ ಡೇ ಗಾಂಡ.. ವಾಟ್ ಡಸ್ ಇಟ್ ಮೀನ್ ಮೈ ಬೇಬಿ' ಎಂದ ಆತ ನನ್ನ ತಬ್ಬಿಕೊಳ್ಳಲು ಮುಂದಾದ. ಅತಿ ಖುಷಿಯಾದಾಗ ಅಥವಾ ಬೇರ್ಯಾರೊ ದುಃಖದಲ್ಲಿದ್ದಾಗ ಆತನ ಈ ಬಗೆಯ ನಟನೆ ತೀರಾನೇ ಸಾಮಾನ್ಯ. ಕೂಡಲೇ ನಾನು ಕಾಲಿನಿಂದ ಆತನ ಎದೆಗೆ ದೊಪ್ಪನೆ ಗುದ್ದಿದೆ. ಅದರ ರಭಸಕ್ಕೆಆತ ಸಿನಿಮೀಯ ರೀತಿಯಲ್ಲಿ ನಟಿಸುತ್ತಾ ಆದಿಯ ಮೇಲೆರಗಿ ಬಿದ್ದ. ಆತ ಆದಿಯನ್ನು ತಬ್ಬಿ ಮುದ್ದಾಡುವಂತೆ ನಟಿಸಿದ. ಮೂಗನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳುತ್ತ ನಾನು ನಗತೊಡಗಿದೆ. ಖುಷಿಯ ಮೆಸೇಜುಗಳ ಬರದಲ್ಲಿ ಅಲ್ಲಿಯವರೆಗೂ ದುಃಖದ ಕರಿಛಾಯೆಯನ್ನು ಮುಖದ ಮೇಲೆ ಹೊದ್ದಿಕೊಂಡಿದ್ದ ಆದಿ ಲೊಕೇಶನನ್ನು ಪಕ್ಕಕ್ಕೆ ತಳ್ಳಿ ಛಟಾರನೆ ಆತನ ಕೆನ್ನೆಯ ಮೇಲೊಂದು ಭಾರಿಸಿದ! ಕರೆಂಟು ಹೋದ ಟೀವಿಯಂತೆ ನನ್ನ ನಗು ಒಮ್ಮೆಲೇ ಕಾಣೆಯಾಯಿತು. ನೆನ್ನೆಯಷ್ಟೇ ಟೆರೇಸಿನ ಮೇಲೆ ಬಿದ್ದ ರಾಧಾರ ಹೊಡೆತವನ್ನು ಮರೆಯಲೆತ್ನಿಸುತ್ತಿದ್ದ ನೆನಪು ನನ್ನೊಳಗೆ ಮತ್ತೊಮ್ಮೆ ಮೂಡಿತು. ಕೈಗಳು ತಂತಾನೇ ನನ್ನ ಕೆನ್ನೆಯನ್ನು ಅವರಿಸಿದವು. ಕೋಣೆ ಎಲ್ಲಿಲ್ಲದ ಮಹಾ ಮೌನದಲ್ಲಿ ಲೀನವಾಯಿತು. ಅಷ್ಟರಲ್ಲಾಗಲೇ ಎಳೆಮಕ್ಕಳ ಮುಖದಂತೆ ಕೂಡಲೇ ರಂಗೇರಿದ ಲೊಕೇಶನ ಚಹರೆಗೆ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ತೋಚಲಿಲ್ಲವೆಂದೆನಿಸುತ್ತದೆ.

'ಬಡ್ಡಿ ಮಗ್ನೆ .. ಅಮ್ಮ .. ಏನ್ ತಿಂತೀಯಾ ಮಾರಾಯ .. ಒಳ್ಳೆ ಸನ್ನಿ ಡಿಯೋಲ್ ಕೈ ತರ ಇದಾವಾಲೋ ಅವು' ಎಂದು ಮುಖವನ್ನು ಹಿಂಡಿಕೊಂಡು, ಕೆನ್ನೆಯನ್ನು ಒರೆಸಿಕೊಳ್ಳುತ್ತಾ ಹೇಳಿದ.

ಪ್ರತ್ಯುತರವಾಗಿ ಆದಿ ಏನನ್ನೂ ಉತ್ತರಿಸದೆ ಅಲ್ಲಿಂದ ಎದ್ದು ಹೊರನೆಡೆದ. ಏನಾಗಿದೆ ಎಂಬಂತೆ ಲೋಕೇಶ ಸನ್ನೆಯಲೇ ನನ್ನ ಕೇಳಿದ.

ಸಾಕ್ಸ್ಗಳ ದುರ್ವಾಸನೆ ಅದಾಗಲೇ ರೂಮನ್ನು ಪಸರಿಸಿ ನನ್ನ ಮೂಗನ್ನೂ ಅದಕ್ಕೆ ಒಗ್ಗಿಕೊಂಡಿದ್ದರಿಂದಲೋ ಏನೋ, ಏನೂ ಗೊತ್ತಿಲ್ಲವೆಂಬಂತೆ ನಾನು ತಲೆಯಾಡಿಸಿದೆ.



****



ಬಣ್ಣ ಬಣ್ಣದ ಹಣ್ಣುಗಳನ್ನು ಭಿನ್ನ ವಿಭಿನ್ನವಾಗಿ ಬೆರೆಸೆ, ಅದಕೊಂದಿಷ್ಟು ಬಗೆಬಗೆಯ ಪೌಡರುಗಳನ್ನು ಸೇರಿಸಿ, ಕಣ್ಣು ನಾಲಿಗೆ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವ ಕಲಾಕೇಂದ್ರವೆಂದೇ ಪ್ರಸಿದ್ದಿ ಕಾಲೇಜಿನ ಪಕ್ಕದ ಈ ಜ್ಯೂಸ್ ಶಾಪು. ಚಿತ್ರಗಾರ ಬಳಸುವ ಕುಂಚದ ಬಣ್ಣಗಳಂತೆ ಬಗೆ ಬಗೆಯ ಹಣ್ಣುಗಳನ್ನು ಬೆರೆಸಿ ಮಾಡಿ ನೀಡುವ ಆ ಪಾನಕ ದ ಆ ಶಾಪು ಪಾಕೇಟು ಮನಿ ಕೈಸೇರಿದಾಗಲಷ್ಟೇ ಹೋಗಲು ಅರ್ಹತೆ ಪಡೆಯುವ ಜಾಗವಾಗಿದ್ದಿತು. ಇಂದು ಬೆಳಗಿನ ಮೊದಲ ಘಂಟೆಗೇ ಚಚ್ಚಿ ಹೊಡೆಯುತ್ತಿದ್ದ ನಿದ್ರೆಯ ಜೋಂಪನ್ನು ಚಚ್ಚಿ ಹೊಡೆಯಲು ಲೋಕೇಶ ನನ್ನನ್ನು ಇಲ್ಲಿಗೆ ಕರೆತಂದ ಎಂಬ ನನ್ನ ಯೋಚನೆ ಸುಳ್ಳಾಯಿತು.

‘Oh god, are you Serious dude?!’ ಕುಡಿಯುತ್ತಿದ್ದ ಜ್ಯೂಸಿನ ಗುಟುಕು ನತ್ತಿಗೇರುವಂತೆ ನಾನು ಅರಚಿದೆ.

'ನಿಧಾನಕ್ಕೋ ಮಾರಾಯ .. ಅದೇನ್ ಒಳ್ಳೆ ಜೀವ ಹೋದರಾಗೆ ಆಡ್ತೀಯ..' ಅತ್ಯಂತ ಶಾಂತ ಪದಗಳಲ್ಲಿ ಹೇಳಿದ ಲೋಕೇಶ ಆತ ತನ್ನ ಮುಂದಿದ್ದ ಜ್ಯೂಸನ್ನು ಸ್ಟ್ರೇ ಮೂಲಕ ಗೋಲಾಕಾರದಲ್ಲಿ ತಿರುಗಿಸತೊಡಗಿದ.

'ಮಗ್ನೆ, ಸುಮ್ನೆ ಬಾಯಿಗ್ ಬಂದಾಗೇ ಮಾತಾಡ್ಬೇಡ..ನಿಜ ಹೇಳು.. Are you fucking serious ?!'

'Yes I do..' ಅತಿ ಗಂಭೀರವಾದ ಧ್ವನಿಯಲ್ಲಿ ಆತ ನುಡಿದ.

ಕೂಡಲೇ ಏನೇಳಬೇಕೆಂದು ತಿಳಿಯದೆ ಕೊಂಚ ಸುಮ್ಮನಾದ ನಾನು,

'ಮಚಿ.. ನಂಗೊತ್ತು. ಈ ಬ್ಯುಟಿ, ಬಾಡಿ, ಕಲ್ಲರು ಮತ್ತೊಂದು ಮಗದೊಂದು ಎಲ್ಲ ಟೈಮ್ ಪಾಸ್ ಆದಹಾಗೆ ಸುಕ್ಕುಗಟ್ಟಿ ಹೋಗೋ ವಿಷಯಗಳು ಅಂತ .. But in practicle, I mean.. No! its not possible at all .. ಸುಮ್ನೆ ಆಟ ಆಡ್ಬೇಡ, ನಿಜ ಹೇಳು..Do you really love her..?' ಸಾಧ್ಯವಾದಷ್ಟು ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಂಡು ನಾನು ಬಡಬಡಿಸಿದೆ.

'ನೋಡಪ್ಪ .. ನಂದು ಏನಿದ್ರೂ ಸ್ಟ್ರೇಟ್ ಫಾರ್ವರ್ಡ್ ಥಿಂಗ್ಸ್ .. ನಾನು ಶಶಿನ ಮೀಟ್ ಮಾಡೋಕ್ಕೆ ಶುರು ಮಾಡಿದ್ದು ಉಷಾನ ಅವಾಯ್ಡ್ ಮಾಡೋಕ್ಕೇ ಇರ್ಬಹುದು. ಮೊದ್ಲೆಲ್ಲಾ ಸುಮ್ನೆ ಟೈಮ್ ಪಾಸ್ ಅಂತ ಕ್ಯಾಂಟೀನು ಅಲ್ಲಿ ಇಲ್ಲಿ ಸಿಗ್ತಾ ಇದ್ದೆ. ಆದ್ರೆ ದಿನಾ ಹೋದಂತೆ ತಿಳೀತು ಆಕೆ ಅದೆಂತ ಅದ್ಭುತ ಹುಡ್ಗಿ ಅಂತ. ಮಚಿ, ನಿಮ್ಗ್ಯಾರಿಗೂ ಗೊತ್ತಿಲ್ಲ ಆಕೆ ಕಾಲೇಜ್ ಮುಗ್ಸಿ ಬೇಗ ಮನೆಗ್ ಹೋಗಿ ಅಡಿಗೆ ಮಾಡಿಟ್ಟು ಸೀದಾ ಬಿಪಿಓ ಒಂದಕ್ಕೆ ಹೋಗ್ತಾಳೆ. ಅಲ್ಲಿ ರಾತ್ರಿ ಹನ್ನೊಂದ್ ಘಂಟೆ ತನ್ಕ ಕೆಲ್ಸ ಮಾಡ್ತಾಳೆ.. ಆಮೇಲೆ ಬಂದು ಮತ್ತೆ ಓದಿ ಬೆಳಗ್ಗೆ ಆರಕ್ಕೆ ಎದ್ದು ತಿಂಡೀ ಊಟ ಮಾಡಿಟ್ಟು ಕಾಲೇಜಿಗೆ ಬರ್ತಾಳೆ. ಅಷ್ಟೆಲ್ಲ ಕಷ್ಟ ಪಟ್ಟೂ ಆಕೆ ಕ್ಲಾಸಿಗೆ ಫಸ್ಟ್ ಬರ್ತಾಳೆ ಯು ನೋ.. ' ಎಂದು ಆಕೆಯ ದಿನಚರಿಯನ್ನು ಅಚ್ಚುಗಟ್ಟಾಗಿ ಬಾಯಿಪಾಠ ಮಾಡಿಕೊಂಡವನಂತೆ ಹೇಳಿದ.

'ಒಂದ್ ನಿಮಿಷ ' ಎಂದು ನಾನು ಆತನನ್ನು ಅಲ್ಲಿಗೇ ತಡೆದು 'ಕಾಲೇಜ್ ಓಕೆ, ಬಿಪಿಒನೂ ಓಕೆ.. ಅಲ್ಲ ತಿಂಡಿ ಊಟ ಎಲ್ಲ ಮಾಡೋಕ್ಕೆ ಅವ್ರ್ ಮನೇಲಿ ಬೇರೆ ಯಾರು ಮನುಷ್ರೆ ಇಲ್ವಾ?' ಸಂಶಯದ ದೃಷ್ಟಿಯಿಂದ ನಾನು ಕೇಳಿದೆ.

'ಅಪ್ಪ ಒಬ್ರೇ ಮಚಿ.. ಅಮ್ಮ ಇಲ್ಲ.. ಅಪ್ಪನೂ ಪಾರ್ಶ್ವವಾಯು ಬಂದು ಬೆಡ್ಡಲ್ಲೇ ಯಾವಾಗ್ಲೂ' ಎಂದ ಲೋಕೇಶ ತನ್ನ ತಲೆಯನ್ನು ತಗ್ಗಿಸಿದ.

ನಾನು ಸುಮ್ಮನ್ನಿದ್ದೆ.

ಆತನೇ ಮುಂದುವರೆಸಿ,

'ಜೀವನ ಯಾರನ್ನು ಇಷ್ಟ್ ಕಾಡಬಾರ್ದು ಮಚಿ.. ಕೈಲಾಗದ ಅಪ್ಪ, ಹತ್ತಿರಕ್ಕೆ ಸುಳಿಯದ ನೆಂಟರಿಷ್ಟರು, ಒಬ್ಳೆ ಹುಡ್ಗಿ. ಓದು, ಜೀವನ, ಕನಸ್ಸು, ಕಷ್ಟ, ಜಿಗುಪ್ಸೆ, ಅಸಹಾಯಕತೆ, ಇವೆಲ್ಲದರ ಜೊತೆಗೆ ಅಮ್ಮನ ನೆನಪು.. ಅದೇಗೆ ಅವೆಲ್ಲನ ಸಹಿಸ್ಕೊಂಡು ಇರ್ತಾಳೋ ನಂಗಂತೂ ತಿಳಿಯಲ್ಲ.. ಬಟ್ ಇಷ್ಟೆಲ್ಲಾ ಇದ್ರೂ ಅವ್ಳ್ ಯಾವತ್ತಾದ್ರೂ ಬೇಜಾರು ಮಾಡ್ಕೊಂಡಿರೋದಾಗ್ಲಿ, ಅಳ್ತಾ ಇರೋದಾಗಲಿ ನೋಡಿದ್ದೀಯಾ? ಎಲ್ಲೂ ಇಲ್ಲದ ಒಂದು ಸ್ಮೈಲ್ ಯಾವಾಗಲೂ ಅವ್ಳ ಫೇಸ್ ಮೇಲೆ ನಲಿತ ಇರುತ್ತೆ.. ನಿಜವಾಗಲು ಹೇಳ್ಬೇಕಂದ್ರೆ ನಂಗೆ ಆಕೆ ಇಷ್ಟ ಆಗಿದ್ದು ಅದೇ ಚಾರ್ಮಿಂಗ್ ಅಂಡ್ ಇನ್ಸ್ಪಿರೇಷನಲ್ ಸ್ಮೈಲ್ ನಿಂದ. ಅವ್ಳ ಬಣ್ಣ, ಬ್ಯೂಟಿ ಎಲ್ಲ ಅವ್ಳ್ ಪಡ್ಕೊ ಬಂದಿರೋ ಥಿಂಗ್ಸ್ ಅಲ್ಲ.. ಒಂದ್ ಪಕ್ಷ ಅವುನ್ನ ಇಲ್ಲೇ ಏನಾದ್ರು ಗಳಿಸೋದಾಗಿದ್ರೆ ಇವ್ಳು ಅದೆಷ್ಟು ಗಳಿಸ್ತಾ ಇದ್ಲು ಅಂದ್ರೆ ರಂಭೆ ಊರ್ವಶಿ ಎಲ್ಲರೂ ಇವಳ ಕಾಲ್ ಧೂಳಿಗೆ ಸಮ ಆಗ್ತಾ ಇದ್ರು..’ಎಂದು ಸುಮ್ಮನಾದ.

ಹತ್ತಾರು ಯೋಚನೆಗಳು ಅದಾಗಲೇ ನನ್ನ ತಲೆಯನ್ನು ಸುತ್ತಲಾರಂಬಿಸಿದವು.

ನಿಷ್ಕಲ್ಮಶ ಪ್ರೀತಿ ಎಂದರೆ ಇದೆಯೇ?

ಕಾಲೇಜಿನ ಯಾವೊಬ್ಬ ಹುಡುಗನೂ ಕಣ್ಣೆತ್ತಿ ನೋಡದ ಹುಡುಗಿಯೊಬ್ಬಳನ್ನು ತಾನು ಮನಸ್ಸು ಮಾಡಿದರೆ ಯಾವ ಹುಡುಗಿಯನ್ನೂ ಬೀಳಿಸಿಕೊಳ್ಳಬಲ್ಲೆ ಎಂಬ ಹುಡುಗನೊಬ್ಬ ಇಷ್ಟ ಪಡುವುದೆಂದರೆ ತೀರಾ ಸಾಮನ್ಯವಾದ ಮಾತಲ್ಲ. ಪ್ರೀತಿ ಹೀಗೂ ಚಿಗುರಬಹುದೇ ಎಂದನಿಸಿತು ನನಗೆ. ಲೋಕೇಶನ ರೂಪದಲ್ಲಿ ಘನ ವ್ಯಕ್ತಿತ್ವವೊಂದು ನನ್ನ ಕುರಿತು ಮಾತಾಡಿದಂತೆ ಭಾಸವಾಯಿತು.

ಕೂಡಲೇ ಗ್ಲಾಸಿನಲ್ಲಿದ್ದ ಜ್ಯೂಸನ್ನು ಅರ್ಧಕ್ಕೆ ಬಿಟ್ಟು, ಲೋಕೇಶ ಏನೋ ಹೇಳುತ್ತಿರುದನ್ನೂ ಆಲಿಸದೆ ಅಲ್ಲಿಂದ ಎದ್ದು ಟೆರೇಸಿನ ಮೇಲೆ ಹೋದೆ. ದೂರದ ಬೃಹತ್ ಬೆಟ್ಟವನ್ನು ಧಿಟ್ಟಿಸುತ್ತ ಹಲವು ನಿಮಿಷಗಳ ಕಾಲ ಕಲ್ಲಿನಂತೆ ನಿಂತೇ.

ಅದೆಷ್ಟೋ ಸಮಯದ ನಂತರ ಮನಸ್ಸು ಹಗುರಾಯಿತು.



****



'ಮಂತ್ ಎಂಡ್' ಎಂಬ ಕಷ್ಟಗಾಲದ ದಿನಗಳಲ್ಲೂ ಹೇಗೋ ಚಿಲ್ಲರೆ ಕಾಸನ್ನು ಹೊಂದಿಸಿ ನಮಗಾಗಿ ಬಿಯರ್ ಹಾಗು ರಸ್ತೆಬದಿಯ ಖಾರವಪ್ಪರಿಸಿದ ಮೀನಿನ ಫ್ರೈ ಗಳನ್ನು ಬಾಳೆಯೆಲೆಯಲ್ಲಿ ಕಟ್ಟಿಸಿಕೊಂಡು ಬಂದು 'cheer....!' ಎಂದ ಲೋಕೇಶ ಗಟಗಟನೆ ಒಮ್ಮೆಲೇ ಅರ್ಧಬಾಟಲಿಯ ಪೇಯವನ್ನು ಮುಗಿಸಿಹಾಕಿದ. ಉಷಾಳ ಮನೆ ಎಂದು ಆ ದಿನ ನೆಡೆದಿದ್ದ ಕರ್ಮಕಾಂಡದ ನಂತರ ಯಾರೊಬ್ಬರೂ ಬಿಯರ್ ಒಂದನ್ನು ಬಿಟ್ಟು ಬೇರೇನನ್ನೂ ಮುಟ್ಟುತ್ತಿರಲಿಲ್ಲ. ಅದೂ ಸಹ ನಾವು ಮಾಡುತ್ತಿರುವುದು ಯಾವುದೊ ಒಂದು ಪಾಪದ ಕೆಲಸವೆಂಬ ತಪ್ಪಿತಸ್ಥ ಭಾವನೆಯಿಂದ!

ಲೊಕೇಶನ ಆ ಭೀಮವರ್ತನೆಗೆ ಬೆರಗಾಗಿಯೇನೋ ಎಂಬಂತೆ ಆದಿ ತನ್ನ ಮೊದಲ ಸಿಪ್ಪನ್ನು ಕುಡಿಯಬೇಕೋ ಬೇಡವೋ ಎಂಬಂತೆ ನೋಡಹತ್ತಿದ್ದ. ಮೋಡದ ಕುರುಹುಗಳಿಲ್ಲದ ಎಲ್ಲೆಂದರಲ್ಲಿ ನಕ್ಷತ್ರಗಳೇ ಮಿನುಗುತ್ತಿರುವ ಸ್ವಚ್ಛಂದ ಆಗಸದ ನೀರವ ಮೌನದೊಟ್ಟಿಗೆ ಆಗೊಮ್ಮೆ ಹೀಗೊಮ್ಮೆ ಬೀಸುವ ತಂಗಾಳಿ ಟೆರೇಸಿನ ವಾತಾವರಣವನ್ನು ಮೋಹಕವಾಗಿಸುತ್ತಿತ್ತು. ಲೋಕೇಶ ಕೂಡಲೇ ರೂಮಿಗೆ ಹೋಗಿ ಟ್ರೆಕಿಂಗ್ಗೆ ಹೋದಾಗ ಬೇಕಾಗುತ್ತದೆಯೆಂದು ತಂದಿದ್ದ ಕೆಂಡದ ಒಲೆಯನ್ನು ಜೊತೆಗೆ ಒಂದಿಷ್ಟು ಇದ್ದಿಲನ್ನು ಹೊತ್ತು ತಂದು ಕಬ್ಬಿಣದ ಆ ಒಲೆಯೊಳಗೆ ಅವುಗಳನ್ನು ಸುರಿದು ನಿಧಾನವಾಗಿ ಬೆಂಕಿಯತ್ತಿಸಿದ. ನೋಡನೋಡುತ್ತಿದ್ದಂತೆ ಕಪ್ಪುಬಣ್ಣದ ಇದ್ದಿಲ ಪುಡಿಗಳು ಸುಂದರವಾದ ಕೆಂಪುಬಣ್ಣದಕ್ಕೆ ತಿರುಗಿ ಉರಿಯತೊಡಗಿದವು. ಬೆಚ್ಚನೆಯ ಬಿಸಿಗೆ ರುಚಿಯೇರಿಸುವ ತಣ್ಣನೆಯ ಬೀಯರು ಹಾಗು ಖಾರವಾದ ಮೀನಿನ ಫ್ರೈ ಹೇಳಿಮಾಡಿಸಿದಂತೆ ಒಗ್ಗಿಕೊಂಡವು. ಲೋಕೇಶ ಎಂದಿನಂತೆ ಶರವೇಗದ ಮಾತುಗಳನ್ನು ಒಂದರಿಂದೊಂದು ಹರಿಯಬಿಡುತ್ತಿದ್ದರೆ ಇತ್ತ ಕಡೆ ಆದಿ ಖುಷಿಯ ನೆನಪಿನಲ್ಲಿ ತನ್ನ ಜೋಲು ಮುಖವನ್ನು ಇಳಿಬಿಟ್ಟು ಅಷ್ಟೇನೂ ಮಾತನಾಡದೆ ಸುಮ್ಮನಿದ್ದ. ನಾನಾಗಲಿ ಅಥವಾ ಲೊಕೇಶನಾಗಲಿ ಆತನನ್ನು ಕೆಣಕುವ ಗೋಜಿಗೆ ಹೋಗಲಿಲ್ಲ.

ಕೆಲಸಮಯದ ನಂತರ ತನ್ನ ದಿನದ ರೂಟೀನನ್ನು ಪೂರ್ಣಗೊಳಿಸಲೆಂಬಂತೆ ಲೋಕೇಶನೂ ಶಶಿಯ ನಂಬರಿಗೆ ಫೋನಾಯಿಸಿ ಬ್ಯುಸಿಯಾದರೆ, ಆದಿ ನಿದ್ರೆಬರುತ್ತಿದೆ ಎಂಬ ಸುಳ್ಳು ಸಬೂಬನ್ನು ನೀಡಿ ಅಲ್ಲಿಂದ ಎದ್ದು ರೂಮಿಗೆ ನೆಡೆದ. ತಾನು ಖುಷಿಯೊಟ್ಟಿಗೆ ಆಡಿರುವ ಮಾತುಗಳನ್ನು ತನ್ನ ಮೊಬೈಲಿನ ಚಾಟ್ ಹಿಸ್ಟರಿಗೆ ಹೋಗಿ ಓದುತ್ತಾ ದುಃಖಿಸುತ್ತಾ ಕೂರುವನು ಎಂಬುದು ತಿಳಿದಿದ್ದರೂ ನಾನು ಆತನನ್ನು ತಡೆಯಲಿಲ್ಲ.

ಪಂಪುಹುಳದ ದೇಹದಂತೆ ಪ್ರಕಾಶಮಾನವಾಗಿ ಮಿನುಗಿ ಮತ್ತೆ ಕಪ್ಪಾಗುತ್ತಿದ್ದ ಕೆಂಡವನ್ನು ನೊಡುತ್ತಾ ಕಳೆದುಹೋದ ನನಗೆ ಯಾಕೋ ನೂರಾರು ವರ್ಷಗಳ ಹಿಂದಕ್ಕೆ ಯೋಚನಾಲಹರಿಯನ್ನು ಹೊತ್ತೊಯ್ಯಲು ಮನಸ್ಸಾಯಿತು!

ಸಂಬಂಧಗಳು ಅದೆಷ್ಟು ನಶ್ವರ? ಕಾಲವೆಂಬ ಸಾರ್ವಕಾಲಿಕ ಸತ್ಯ ಈ ಜಗತ್ತಿನಲ್ಲಿ ಏನನ್ನೂ ಶಾಶ್ವತವಾಗಿ ನೆಲೆಯೂರಲು ಬಿಡದು. ಕುಡಿದ ಮೇಲೆ ಪ್ರತಿಯೊಬ್ಬರೂ ನಮ್ಮ ಸಂಬಂಧಿಗಳೇ ಆಗುತ್ತಾರೆ. ಇನ್ನು ನಿಜ ಸಂಬಂಧಿಗಳಂತೂ ಒಡಹುಟ್ಟಿದವರೇನೋ ಎಂಬಂತೆ ಭಾಸವಾಗುತ್ತಾರೆ. ಅವರುಗಳು ಪಕ್ಕದಲ್ಲಿ ಕೂತು ಲೋಕಾಭಿರಾಮದ ಮಾತನ್ನು ಆಡುತ್ತಾ ಹೋದರೆ ಎಲ್ಲವೂ ಸ್ವಚ್ಛಂದವಾಗಿ ಕಾಣುತ್ತದೆ. ಅವರ ಸುಳ್ಳೂ ಸುಳ್ಳೆನಿಸುವುದಿಲ್ಲ. ಬಹುಶಃ ಕುಡಿದಾಗ ಅವರು ಸುಳ್ಳನೆ ಹೇಳದಿರಬಹುದು! ಅತ್ತರೆ ಅವರೊಟ್ಟಿಗೆ ಗಳಗಳನೆ ಅತ್ತುಬಿಡುವ, ನಕ್ಕರೆ ಅವರೊಟ್ಟಿಗೆ ನಲಿದುಬಿಡುವ, ದ್ವೇಷ, ಅಸೂಹೆ, ನಾಚಿಕೆ, ಸಂಶಯಗಳಿಲ್ಲದ ಈ ಅಮಲಿನ ಘಳಿಗೆ ಅದೆಷ್ಟು ಚೆಂದ?! ಭಾವ ಮೈಧುನ, ಮಾವ ಅಳಿಯ, ಕೆಲವೊಮ್ಮೆ ಅಣ್ಣ ತಮ್ಮಂದಿರೂ ಕೂತು ಹೀಗೆ ಒಟ್ಟಿಗೆ ಕುಡಿದು ಕಾಲದ ಮೂಸೆಯಲ್ಲಿ ಅದೆಷ್ಟು ಭಾರಿ ನಲಿದು, ಕುಣಿದು ಮರೆಯಾಗಿರಬಹದುದು?

ನೂರು ವರ್ಷದ ಹಿಂದಿನ ನನ್ನ ಹಿರಿಕರು ಯಾಕಿಂದು ನೆನಪಾಗುತ್ತಿದ್ದಾರೆ?

ದಿನವಿಡಿ ಗದ್ದೆ ತೋಟಗಳಲ್ಲಿ ದುಡಿದು, ದಣಿದು ಸಂಜೆಯಪ್ಪುವ ವೇಳೆಗೆ ತವರಿಗೆ ಹೋಗಿರುವ ಮಡದಿಯನ್ನು ನೋಡಲು ಲೈಟು ಟಾರ್ಚುಗಳಿಲ್ಲದ ಕಗ್ಗತ್ತಲೆಯ ಸಾಗರದಲ್ಲಿಯೆ ದಾರಿಯ ಗುರುತಿಡಿದು, ಹೊರಟು , ದಾರಿಯಲ್ಲಿ ಸಿಕ್ಕ ಬೈನೆ ಸೇಂದಿಯನ್ನು ಬಿದಿರಿನ ಒಳ್ಳೆಯೊಳಗೆ ಸುರಿಸಿಕೊಂಡು, ಪಕ್ಕದ ಗೂಡಂಗಡಿಯಲ್ಲಿ ಮಡದಿಗೆಂದು ಒಂದಿಷ್ಟು ಸಿಹಿತಿಂಡಿಗಳನ್ನು ಕಟ್ಟಿಸಿ ತನ್ನ ಕೋಟಿನ ಜೇಬಿನೊಳಗಿಟ್ಟು, ಅಲ್ಲಿಯವರೆಗೂ ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಯನ್ನು ಕಲ್ಲಿನಿಂದ ಹೊಡೆದು ದೂರಕ್ಕೆ ಓಡಿಸಿ ಬಿರಬಿರನೆ ನೆಡೆಯಹತ್ತಿ, ತುಸು ದೂರ ಸಾಗುತ್ತಿದ್ದಂತೆ ಹಿಂದಿನಿಂದ ಪುನ್ಹ ಏನೋ ನೆಡೆದುಕೊಂಡು ಬರುತ್ತಿರುವ ಸದ್ದಾಗುವುದನ್ನು ಆಲಿಸಿ ಅಲ್ಲಿಯೇ ನಿಂತು ಹೆಗಲ ಮೇಲಿದ್ದ ತಾಮ್ರದ ಹುಲಿಗುರುತಿನ ಕೇಪಿನ ಕೋವಿಯ ಕುದುರೆಯನ್ನು ಮೇಲೇರಿಸಿ , ಮೂಡುತ್ತಿದ್ದ ಶಬ್ದವನ್ನು ಕಿವಿಗೊಟ್ಟು ಕೇಳಿ ಅದು ತಮ್ಮ ಮನೆಯ ಕರಿಯ ನಾಯಿ ಎಂದು ತಿಳಿದು 'ಕರಿಯ!! ನಿನ್ ಜಾತಿಗ್ ನನ್ ಮೆಟ್ ಹೊಡ್ಯ..! ದಾರಿ ಮೂಸ್ಕೊಂಡೆ ಬಂತು ನೋಡ್ ಬೇವರ್ಸಿ ಮುಂಡೇದು' ಎಂದು ಅರಚಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಕುಯ್ ಗುಡುತ್ತಾ ಬರುವ ನಾಯಿಗೆ ಕೈಗೆ ಸಿಕ್ಕ ಏನಾದರೊಂದರಿಂದ ಹೊಡೆದು, ಮತ್ತೊಮ್ಮೆ ಬೈದು, ಬೆಂಬಿಡದ ಅದನ್ನು ಕಂಡು ಕೊನೆಗೆ ಬಂದರೆ ಬರಲಿ ಎನುತ ಮಾವನ ಮನೆಗೆ ಜೊತೆಗಾರನಾಗಿ ಕರೆದುಕೊಂಡು ಹೋಗುತ್ತಿದ್ದ ಹಿರಿಯಳಿಯ!

ಹೊಲಗೇರಿಯ ಕೆಂಚ ನೆನ್ನೆಯಷ್ಟೇ ಅಳಿಯ ಬರುವ ಸುದ್ದಿಯನ್ನು ಮಾವನಿಗೆ ಹೇಳಿದ ಕೂಡಲೇ ಹುರಿದ ಕಾಡಂದಿ ಮಾಂಸ ಹಾಗು ಮನೆಕೋಳಿಯ ಬಾಡೂಟವನ್ನು ಅವರು ಏರ್ಪಡಿಸಿದ್ದರು. ಸಂಜೆಯಿಂದ ಕಾದು ಕಾದು ಕೊನೆಗೆ ದೂರದಲ್ಲಿ ನಾಯಿಗಳು ಬೊಗಳುವ ಸದ್ದನ್ನು ಕೇಳಿ ಕೆಂಚನನ್ನು ಕೂಗಿ ಕರೆದು ಬೆಳಕಿನ ಪಂಜನ್ನು ಮಾಡಿಕೊಂಡು ಅಳಿಯರನ್ನು ಬರಮಾಡಿಕೊಳ್ಳಲು ತಾವೂ ಹೊರಟುಬಿಟ್ಟರು. ಊರಿನ ನಾಯಿಗಳು ಅದಾಗಲೇ ತಮ್ಮ ವಲಯಕ್ಕೆ ಬಂದಿರುವ ಅಳಿಯನ ಏಕೈಕ ನಾಯಿಯ ಮೇಲೆ ಆಕ್ರಮಣವನ್ನು ಘೋಷಿಸಿದ್ದವು. ಮಾವನ ಊರಿನ ನಾಯಿಗಳ ಕಾಟಕ್ಕೆ ತಮ್ಮ ಮನೆಯ ಕರಿಯನೇ ಕಾರಣವೆಂದು ಅದಕ್ಕೆ ಬೈಯುತ್ತಾ, ಶಪಿಸುತ್ತಾ ಇತರೆ ನಾಯಿಗಳಿಂದ ರಕ್ಷಿಸಿಕೊಳ್ಳುತ್ತಾ ಬರುತ್ತಿದ್ದ ಅಳಿಯನನ್ನು ಮಾವಯ್ಯ ಕೊನೆಗೂ ಬರಮಾಡಿಕೊಂಡು, ಯೋಗಕ್ಷೇಮ ಹಾಗು ಮಳೆ ಬೆಳೆಯನ್ನು ಕೇಳಿ ಊರಿನ ನಾಯಿಗಳನ್ನು ಗದರಿಸಿ ಅಲ್ಲಿಂದ ಮನೆಯೆ ಹಾದಿಯನ್ನು ಹಿಡಿಯುತ್ತಿದ್ದರು. ಮನೆಯ ಬಾಗಿಲಲ್ಲೇ ಬಿಂದಿಗೆ ನೀರನ್ನಿಡಿದು ಕಾಯುತ್ತಿದ್ದ ಆತ್ತೆ ಹಾಗು ಮಗಳನ್ನು ಕಂಡು ಊರಿಂದ ತಂದ ಭತ್ತ, ಬೇಳೆ, ತರಕಾರಿ ಹಾಗು ಸಿಹಿತಿಂಡಿಗಳನ್ನು ನೀಡಿ, ಬಿಂದಿಗೆಯ ಬೆಚ್ಚನೆಯ ನೀರನ್ನು ಕಾಲುಗಳ ಮೇಲೆ ಹೊಯ್ದುಕೊಂಡು ಮನೆಯೊಳಗೇ ಹೋಗುತ್ತಿದ್ದ ಅಳಿಯ. ಕೆಂಚ ದೂರದೂರಿನ ನಾಯಿಯನ್ನು ಮಕ್ಕಳಂತೆ ಮುದ್ದಿಸುತ್ತಾ ಅಲ್ಲಿಯೇ ಜಗಲಿಯಲ್ಲಿ ಕೂರುತ್ತಿದ್ದ. ಒಂದು ಪಕ್ಷ ಒಡೆಯ ಬಂದು ಹೋಗೆಂದರೂ ಆತ ಅಲ್ಲಿಂದ ಕದಲುತ್ತಿರಲಿಲ್ಲ. ಕಾರಣ ಹಿರಿಮನೆಯ ಬಾಡೂಟದ ಜೊತೆಗೆ ಅಳಿಯರ ಹೆಗಲಿಗೆ ತಗಲಾಕಿಕೊಂಡಿದ್ದ ಸೇಂದಿಯ ಒಳ್ಳೆ! ಅಳಿಯ ಮಡದಿಯ ಕೋಣೆಗೆ ಹೋಗಿ ಒಂದರೆನಿಮಿಷ ತಮಾಷೆಯ ಮಾತನಾಡಿ ತನ್ನ ಕೋಟಿನ ಒಳಗಿಟ್ಟಿದ್ದ ಮಲ್ಲಿಗೆ ಹೂವಿನ ಹಾರವನ್ನು ತೆಗೆದು ಅವಳ ಕೈಯ ಮೇಲಿಟ್ಟು ಅಲ್ಲಿಂದ ಹೊರನೆಡೆದ. ಸಂತೋಷಗೊಂಡ ಮಡದಿ ಎಲ್ಲಿ ಅದರ ಘಮ ಪಸರಿಸಿ ಯಾರು ಏನೆಂದು ಕೇಳುವರೋ ಎಂಬ ನಾಚಿಕೆಯಲ್ಲಿ ಕೊಡಲೇ ತನ್ನ ಕಬ್ಬಿಣದ ಪೆಟ್ಟಿಗೆಯೊಳಕ್ಕೆ ಅದನ್ನು ಹಾಕಿ ಬೀಗವನ್ನು ಹಾಕುತ್ತಾಳೆ.

ಹಂದಿ ಮಾಂಸವನ್ನು ಮನೆಯೊಳಗೆ ತಾರದ ಕಾರಣ ಮನೆಯೋರಗಡೆಯ ಒಲೆಯ ಮುಂದೆ ಕುಳಿತರು ಶತಮಾನದ ಹಿಂದಿನ ಮಾವ ಹಾಗು ಅಳಿಯ. ಮಾವ ಮನೆಯಲ್ಲೇ ಮಾಡಿದ ಕಳ್ಳಭಟ್ಟಿಯ ಬಾಟಲಿಯನ್ನು ಕುಸ್ತಿ ಪಂದ್ಯದಲ್ಲಿ ಗೆದ್ದ ಪ್ರಶಸ್ತಿಯಂತೆ ತಂದರೆ ಅಳಿಯ ಹಾದಿಯಲ್ಲಿ ಕಟ್ಟಿಸಿಕೊಂಡು ತಂದಿದ್ದ ಹುಳಿ ಸೇಂದಿಯನ್ನು ಹೊರತೆಗೆದ. ಮನೆಯಾಕೆ ಕಡುಗಪ್ಪುಬಣ್ಣದ ಹುರಿದ ಹಂದಿಯ ತುಂಡುಗಳು, ನಾಟಿ ಕೋಳಿಯ ಸಾರು ಹಾಗು ಕಂಚಿಹಣ್ಣಿನ ಕೆಂಬಣ್ಣದ ಉಪ್ಪಿನಕಾಯಿಯನ್ನು ತಂದಿಟ್ಟು ಜೊತೆಗೆ ಒಲೆಯ ಪಕ್ಕದ ಗೋಡೆಯ ಮೇಲಕ್ಕೆ ನೇತಾಕಿದ್ದ ಲೋಟ ಹಾಗು ತಟ್ಟೆಯನ್ನೂ ತೆಗೆದು ಕೆಳಗಿಟ್ಟಳು. ತಟ್ಟೆ ಹಾಗು ಲೋಟದ ಸದ್ದನ್ನು ಕೇಳಿದ ಕೂಡಲೇ ಕೆಂಚ ಕ್ಷಣಮಾತ್ರದಲ್ಲಿ ಮುಂದಿನ ಬಾಗಿಲಿನಿಂದ ಹಿತ್ತಲುಬಾಗಿಲಿಗೆ ಅಹ್ವಾನವಿಲ್ಲದೆಯೇ ಬಂದು ಹಲ್ಲುಕಿರಿದುಕೊಂಡು ನಿಂತ.

ಮುಂದೆ ಮಾವ ಒಲೆಯ ಕೆಂಡವನ್ನು ಮೆಲ್ಲ ಮೆಲ್ಲನೆ ಕಬ್ಬಿಣದ ಕೊಳಪೆಯಲ್ಲಿ ಊದುತ್ತಾ ಸೇಂದಿ ಹಾಗು ಕಳ್ಳಭಟ್ಟಿಯ ಕಹಿ ಸಿಹಿಯನ್ನು ಸವಿಯುತ್ತಾ, ಕೆಂಚ ಹಾಗು ಆತನ ಪ್ರೇಮಕಥೆಯನ್ನು ಅಣಕಿಸುತ್ತಾ, ಅಳಿಯನ ಊರಿನ ನಾಯಿಗೆ ಪ್ರೀತಿ ತೋರುವಂತೆ ತಿಂದು ಬಿಟ್ಟ ಮೂಳೆಗಳನ್ನು ಎಸೆಯುತ್ತಾ, ನಗುತ್ತ, ನಗಿಸುತ್ತಾ, ಒಮ್ಮೊಮ್ಮೆ ಗಂಭೀರವಾಗಿ 'ಅಳಿಯರೇ ನೀವು ನೂರ್ ಕಾಲ ಬಾಳಿ ಬದುಕಬೇಕು.. ನನ್ನ ಆಯಸ್ಸೂ ನಿಮ್ಗೆ ಹೋಗ್ಲಿ' ಎಂದು ಅತ್ತರೆ ಇತ್ತ ಕಡೆ ಅಳಿಯ ಮಾವನ ಕಾಲನ್ನು ಹಿಡಿಕೊಂಡು 'ದೇವರಂತ ಮಾವಯ್ಯ .. ನೀವು ನೂರ್ ಕಾಲ ಬದುಕ್ ಬೇಕು ..' ಎಂದು ತೊದಲುತ್ತಾ ಆತನೂ ರೋಧಿಸುತ್ತಾನೆ. ಅವರಿಬ್ಬರ ರೋಧನೆಯಲ್ಲಿ ಲಾಭ ಅನುಭವಿಸಿದ್ದು ಮಾತ್ರ ಕೆಂಚ ಹಾಗು ಅಳಿಯನ ನಾಯಿ ಮಾತ್ರ.

ಸಮಯ ಸಾಗಿದಂತೆ ಮಾತಿನ ಸದ್ದು ಹೆಚ್ಚಾದಂತೆ ಮನೆಯೊಳಗಿಂದ 'ಲೇ ಕೆಂಚ .. ಬಿಟ್ರೆ ಊರೇ ಮುಳುಗಸ್ತಿಯ ನೀನು .. ಬಾರ್ಲ ಈಕಡೆ .. ಹೊತ್ತು ಗೊತ್ತು ಅನ್ನೋದ್ ಇಲ್ಲ .. ಉಣ್ಣು ಬಾ' ಎಂದು ಮನೆಯಾಕೆ ಪರೋಕ್ಷವಾಗಿ ಮಾವ ಹಾಗು ಅಳಿಯನನ್ನು ಕುರಿತು ಚಾಟಿ ಬೀಸಿದರೆ ಅದರ ಅರ್ಥವನ್ನು ಅರಿತ ಅಳಿಯ ಹೇಗೋ ಪುಸಲಾಯಿಸಿ ನಶೆಯೇರಿ ವಾಲಾಡುವ ಮಾವನನ್ನು ತಂದು ಊಟಕ್ಕೆ ಕೂರಿಸುತ್ತಿದ್ದ.

ತಮ್ಮ ಹಿರೀಕರು ಹೀಗಿದ್ದಿರಬಹುದೇ ..? ಎಂದು ನೆನೆದು ನಗತೊಡಗಿದ ನನ್ನನ್ನು ಫೋನಿನಲ್ಲಿ ಪ್ರೇಮಶಾಸ್ತ್ರವನ್ನು ಹೇಳುತ್ತಿದ್ದ ಲೋಕೇಶ ಏನೆಂಬಂತೆ ಕೇಳಿದ. ನಾನು ಏನು ಆಗಿಲ್ಲವೆಂಬತೆ ಮುಸುಕುಗಟ್ಟುತ್ತಿದ್ದ ಕೆಂಡವನ್ನು ಊದಿದೆ.

'ಈ ಕೆಂಡಗಳಂತೆ ಆಗಲೂ ಅಲ್ಲಿ ಕೆಂಡವೊಂದು ಉರಿಯುತ್ತಿತ್ತು. ಮಾವ ಅಳಿಯ ಕಾಲದ ಗಾಲಿಯಲ್ಲಿ ತಮ್ ತಮ್ಮ ಆಯಸ್ಸನ್ನು ಒಬ್ಬಬ್ಬರಿಗೊಬ್ಬರು ಕೊಡತೊಡಗಿದ್ದರು. ಅಸಲಿಗೆ ಅವರು ಯಾರು, ಯಾರಿಗೆ ಏನನ್ನು ಕೊಡುತ್ತಿದ್ದರು?! ಅವರೆಲ್ಲ ಹೀಗೆಲ್ಲಿ? ಮಾವ, ಅಳಿಯ, ಮಡದಿ, ಅತ್ತೆ, ಕೆಂಚ ಹಾಗು ಊರಿನ ನಾಯಿ. ಈಗ ಯಾರೊಬ್ಬರೂ ಇಲ್ಲ. ಕಾಲಚಕ್ತ್ರ ಎಲ್ಲರನ್ನೂ ಮರೆಯಾಗಿಸಿದೆಯೇ ? ಕೊನೆ ಪಕ್ಷ ಅವರು ಆಡಿದ ಮಾತುಗಳಾಗಲಿ, ಮದಭರಿತ ಆ ಸಂಜೆಗಳಾಗಲಿ ಈಗ ಯಾವುವೂ ಇಲ್ಲ. ಇಂದು ನಾವಿಲ್ಲಿ ಅಕ್ಕ ಪಕ್ಕದಲ್ಲೇ ಇದ್ದರೂ ನೂರು ವರ್ಷಗಳ ನಂತರ ಈ ಘಳಿಗೆಗೂ ಅದ್ಯಾವ ಬೆಲೆ? ಕಳೆದುಹೋದ ಘಳಿಗೆಯ ಬೆಲೆ ಅದೆಂದಿನವರೆಗೆ?' ಆದರೆ ಮಾವ ಅಳಿಯರ ಆ ಸುಂದರ ಜೀವನದ ಒಂದೆರೆಡು ಜೀನ್ಸ್ಗಳು ಬಹುಷಃ ನನ್ನ ರಕ್ತದಲ್ಲಿರಬಹುದೇ? ಅವುಗಳೇ ಇಂದು ನನಗೆ ಅವರನ್ನು ಕಲ್ಪಿಸುತ್ತಿರಬಹುದೇ? ತಿಳಿಯಲಿಲ್ಲ.

ದೂರದ ಒಂದೆರೆಡು ನಕ್ಷತ್ರಗಳು ಬಲು ಪ್ರಕಾಶಮಾನವಾಗಿ ಮಿನುಗಿದಂತೆ ಭಾಸವಾಯಿತು.

ಒಟ್ಟಿನಲ್ಲಿ ಪ್ರಸ್ತುತ ಕಾಲದ ಬೀಯರ್ ಎಂಬ ಮಹಾಶಯ ನನಗೆ ಗತಕಾಲದ ತನ್ನ ಸಹೋದ್ಯೋಗಿಗಳನ್ನು ನೆನಪಿಸಿ ಒಂದು ಹೊಸ ಭಾವವನ್ನು ಹುಟ್ಟು ಹಾಕಿದ. ಅಳಿಯ ಮಾವನನ್ನು ಊಟಕ್ಕೆ ಕರೆದುಕೊಂಡುಹೋದ ಹಾಗೆ ಲೋಕಿ ನನ್ನನ್ನು ರೂಮಿನೊಳಗೆ ಕರೆದುಕೊಂಡು ಹೋಗಿ ಪಾರ್ಸೆಲ್ ತರಿಸಿದ್ದ ಬಿರಿಯಾನಿಯನ್ನು ಪ್ಲೇಟಿನ ತುಂಬಾ ಹಾಕಿ ತಿನ್ನಲು ಕೊಟ್ಟ. ಆಗಲೂ ನನ್ನಲ್ಲಿ ಮೂಡಿದ ಪ್ರೆಶ್ನೆ,

'ನಾನ್ಯಾಕೆ ಮುಂದೆ ಮಾವ ಅಳಿಯನ ತರಹದ್ದೇ ಜೀವನವನ್ನು ನೆಡೆಸಬಾರದು?'

Continues..