ಕಳೆದ ಆಗಸ್ಟ್ 31ರ ಸಂಜೆ ದೇಶದ ವಿತ್ತ ವಲಯದಲ್ಲಷ್ಟೇ ಅಲ್ಲದೆ ಭಾಗಶಃ ಇತರ ಎಲ್ಲಾ ವಲಯಗಳಲ್ಲೂ ಹೆಚ್ಚಾಗಿ ಚರ್ಚೆಗೊಳಗಾದ ವಿಷಯ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರದ ಬಗೆಗೆ. ಕಾರಣ ಅಂದು ‘ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಜೇಷನ್’ (CSO) ತಿಳಿಯಪಡಿಸಿದ ಅಂಕಿಅಂಶಗಳ ಪ್ರಖಾರ 2017-18 ನೇ ಸಾಲಿನ ಮೊದಲ ತ್ರೈಮಾಸಿಕದ (ಏಪ್ರಿಲ್ ನಿಂದ ಜೂನ್ ವರೆಗೆ) ಜಿಡಿಪಿಯ ದರ 5.7%. ಈ ದರ ಕಳೆದ ತ್ರೈಮಾಸಿಕ್ಕೆ, ಅದರ ಮೊದಲಿನ ತ್ರೈಮಾಸಿಕ ಅಷ್ಟೇ ಏಕೆ ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ದರವೆನಿಸಿಕೊಂಡಿದೆ! ಪರಿಣಾಮ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ, ಅವುಗಳ ದೂರದೃಷ್ಟಿಯ ಬಗೆಗೆ ಹಲವರಲ್ಲಿ ಸಂಶಯ, ಗೊಂದಲ ಹಾಗು ಹತಾಶೆಯನ್ನು ಹುಟ್ಟಿಸಿವೆ. ಬೆಂಕಿಯ ಮೇಲೆ ತುಪ್ಪ ಸುರಿದಂತೆ ಕೇಂದ್ರ ಹಣಕಾಸು ಮಂತ್ರಿಗಳೂ ತಮ್ಮ ಪತ್ರಿಕಾಗೋಷ್ಠಿಯಲ್ಲಿ 'ಪ್ರಸ್ತುತ ಜಿಡಿಪಿ ದರ ಕಳವಳಕಾರಿಯಾಗಿದ್ದೂ ಸರ್ಕಾರದ ಮುಂದೆ ಸವಾಲು ಎದುರಾಗಿದೆ' ಎಂಬ ಹೇಳಿಕೆಯ ನಂತರವಂತೂ ಈ ವಿಷಯದ ತೀವ್ರತೆ ಇನ್ನೂ ಹೆಚ್ಚಾಗಿದೆ.
ಜಿಡಿಪಿ ಎಂಬುದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಎಲ್ಲಾ ಅಂತಿಮ ಸರಕುಗಳ (ಟಿವಿ, ಫ್ರಿಡ್ಜ್, ಬಸ್ಸು ಕಾರು, ಬಟ್ಟೆ, ಸೋಪು, ಬಿಸ್ಕತ್ತು ಇತ್ಯಾಗಿ ಇತ್ಯಾದಿ) ಒಟ್ಟು ಮೊತ್ತ ಎನ್ನಬಹುದು. ಕಳೆದ ಬಾರಿಯ ದೇಶದ ಒಟ್ಟು ಜಿಡಿಪಿಯ ಮೊತ್ತ ಸುಮಾರು 150 ಲಕ್ಷ ಕೋಟಿ ರೂಪಾಯಿಗಳ ಆಸುಪಾಸು. ಈ ಮೊತ್ತದ ಮೂಲಕ ಇಡೀ ವಿಶ್ವದ ಜಿಡಿಪಿಯ ಬೆಳವಣಿಗೆಯಲ್ಲಿ ದೇಶದ ಕೊಡುಗೆ ಸುಮಾರು 3% ನಷ್ಟಿದ್ದಿತು. ಇದು ಭಾರತವನ್ನು ವಿಶ್ವದಲ್ಲೇ ಏಳನೇ ಅತಿ ಹೆಚ್ಚು ಜಿಡಿಪಿಯ ದೇಶವನ್ನಾಗಿಸಿತ್ತು. ಇನ್ನು ಅಮೇರಿಕ ಸುಮಾರು 1250 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜಿಡಿಪಿಯ ಮೊತ್ತದೊಂದಿದೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು.
ಇನ್ನು ಆಯಾ ವರ್ಷದ ಜಿಡಿಪಿಯ ಮೊತ್ತವನ್ನು ಕಳೆದ ವರ್ಷದ ಅಥವಾ ತ್ರೈಮಾಸಿಕದ ಮೊತ್ತಕ್ಕೆ ಹೋಲಿಸಿದರೆ ನಮಗೆ ಸಿಗುವ ಶೇಕಡಾವಾರುವನ್ನೇ 'ಜಿಡಿಪಿ ದರ' ಎನ್ನಲಾಗುತ್ತದೆ. ಕಳೆದ ವರ್ಷ ಇದೆ ತಿಂಗಳಿನಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ದರ 7.9% ರ ಆಸುಪಾಸಿನಲ್ಲಿದ್ದಿತು. ಆದರೆ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಅದು 5.7 % ನಷ್ಟಾಗಿದೆ. ಪ್ರಸ್ತುತ ಬೆಳವಣಿಗೆಯ ಕುಂಠಿತ ದರ ದೇಶದ ಇತಿಹಾಸದಲ್ಲೇ ಮೊದಲೇನಲ್ಲ. ಈ ಮೊದಲೂ ಎಪ್ಪತ್ತು ಹಾಗು ಎಂಬತ್ತರ ದಶಕದ ಹಲವು ವರ್ಷಗಳಲ್ಲಿ ಜಿಡಿಪಿಯ ದರ ಶೂನ್ಯಕ್ಕಿಂತಲೂ ಕಡಿಮೆ ಅಂದರೆ ಋಣಾತ್ಮಕವಾಗಿರುವುದೂ ಉಂಟು. ಆದರೆ ಕಳೆದ ಹಲವು ತ್ರೈಮಾಸಿಕಗಳಿಂದ ಏರುತ್ತಲೇ ಅಥವಾ ಬಾಗಶಃ ಅಚಲವಾಗಿದ್ದ ದರ ಒಮ್ಮಿಂದೊಮ್ಮೆಲೆ ಕುಸಿಯಲು ಕಾರಣವೇನು? ನೋಟ್ ಬ್ಯಾನ್, ಜಿಎಸ್ಟಿ, ಸಾಲಮನ್ನಾ ಎಂಬ ಮತ್ತೊಂದು ಮಗದೊಂದು ಯೋಜನೆಗಳನ್ನು ರಾತ್ರಿ ಕಳೆದು ಹಗಲಾಗುವುದರೊಳಗೆ ಜಾರಿಗೊಳಿಸಿ, ಊರೆಲ್ಲ ಡಂಗೂರ ಒಡೆಸಿ, ಕೊನೆಗೆ ಜನರ ಮುಂದೆ ತಲೆ ಕೆರೆದುಕೊಳ್ಳುವಂತಹ ನಿರ್ಧಾರಗಳು ಪ್ರಸ್ತುತ ಅಂಕಿಅಂಶಗಳ ಹಿನ್ನಲೆಯೊಂದಿಗೆ ದೇಶಕ್ಕೆ ಅದ್ಯಾವ ಬಗೆಯಲ್ಲಿ ಪೂರಕವಾಗಲಿವೆ ಎಂಬುದೇ ಪ್ರೆಶ್ನೆ.
ನೋಟು ಅಮಾನಿಕರಣ ದೇಶ ಕಂಡ ಹಲವು ದಿಟ್ಟ ನಿರ್ಧಾರಗಳಲ್ಲೊಂದು. ಪ್ರಸ್ತುತ ಜಾರಿಯಲ್ಲಿದ್ದ ಕಪ್ಪು ಹಣವನ್ನು ಮಟ್ಟ ಹಾಕುವುದೇ ಈ ನಿರ್ಧಾರದ ಹಿಂದಿದ್ದ ಬಹು ಮುಖ್ಯ ಚಿಂತನೆ. ಆದರ ಪ್ರಕಾರ ದೇಶದಲ್ಲಿ ಅಂದು ಜಾರಿಯಲ್ಲಿದ್ದ 15.44 ಲಕ್ಷ ಕೋಟಿ ರೂಪಾಯಿಗಳಲ್ಲಿ (ಕೇವಲ 500 ಹಾಗು 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ) ಒಟ್ಟು ಕಪ್ಪು ಹಣದ ಮೊತ್ತ ಸುಮಾರು ನಾಲ್ಕು ಲಕ್ಷ ಕೋಟಿಯಷ್ಟಾಗಿದ್ದಿತು(ಕೇಂದ್ರ ಸರ್ಕಾರದ ಪ್ರಕಾರ). ಹಾಗಾಗಿ ನೋಟು ಅಮಾನಿಕರಣದಿಂದ ದೇಶದ ಜೋಳಿಗೆಗೆ ಬಂದು ಸೇರಬೇಕಿದ್ದ ಮೊತ್ತ ಅಂದಾಜು ಹನ್ನೊಂದರಿಂದ ಹನ್ನೆಡರೆದು ಲಕ್ಷ ಕೋಟಿ ರೂಪಾಯಿಗಳು. ಆದರೆ ವಿಪರ್ಯಾಸವೊ, ಅವಿವೇಕಿತನವೋ ಅಥವಾ ಬಹುಜನರ ಬಹುಬಗೆಯ ಕೈಚಳಕದ ಫಲವೋ ಸುಮಾರು 99% ಹಣ ದೇಶದ ಜೋಳಿಗೆಗೆ ಇಂದು ವಾಪಸ್ಸುಬಿದ್ದಿದೆ! ಅರ್ತಾಥ್ ದೇಶದಲ್ಲಿ ಅಂದು ಇದ್ದ ಅಷ್ಟೂ ಹಣವು ಬಿಳಿಯ ಹಣವೇ ಆಗಿದ್ದಿತು ಎಂದರೆ ನಂಬಬಹುದೇ? ಹಾಗಾದರೆ ಸರ್ಕಾರದ ಅಂಕಿ ಅಂಶಗಳು ಅಂದು ಆಧಾರರಹಿತವಾಗಿದ್ದವೇ?
ನೋಟು ಅಮಾನ್ಯದಿಂದ ದೇಶದ ಬೊಕ್ಕಸಕ್ಕೆ ಆಗಿರುವ ನಷ್ಟ ಹಲವು ಸಾವಿರ ಕೋಟಿ ರೂಪಾಯಿಗಳು. ದೇಶದ ನಿರ್ಮಾಣ ವಲಯ ನೋಟು ಅಮಾನಿಕರಣದಿಂದ ತತ್ತರಿಸಿದ ಅತಿ ದೊಡ್ಡ ವಲಯ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಈ ವಲಯವನ್ನು ಸದ್ಯಕಂತೂ ಶಕ್ತಿ ಮೀರಿ ಎಳೆದರೂ ಮೇಲೇಳುವುದು ಕಷ್ಟಸಾಧ್ಯ. ಇಂತಹ ಒಂದು ವಲಯದ ದಿಢೀರ್ ಕುಸಿತ ಜಿಡಿಪಿ ದರದ ಕುಂಠಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ ದೇಶದ ಉತ್ಪಾದನಾ ವಲಯವೂ ಇಂತಹದ್ದೇ ಬಹುಮುಖ ಇಳಿಕೆಯನ್ನು ಇಲ್ಲಿ ಕಂಡಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಸುಮಾರು 10.2% ನಷ್ಟಿದ್ದ ಈ ವಲಯದ ಅಭಿವೃದ್ಧಿಯ ದರ ಇಂದು 1.2% ರಷ್ಟರಲ್ಲಿ ಬಂದು ನಿಂತಿದೆ ಎಂದರೆ ನಂಬಲಸಾಧ್ಯ. ಇದಕ್ಕೆ ಪೂರಕವೆಂಬಂತೆ ನೋಟು ಅಮಾನ್ಯದ ಮೊದಲು 7.5% ರಷ್ಟಿದ್ದ ಜಿಡಿಪಿಯ ದರ ನಂತರದ ಕೆಲವೇ ದಿನಗಳಲ್ಲಿ 6.1% ರಷ್ಟಾಗಿದ್ದಿತು. ಕಳೆದ ಜುಲೈನ ಜಿಎಸ್ಟಿ ಜಾರಿಯ ನಂತರ ಉಂಟಾಗಿರುವ ಪರಿಣಾಮ ಮುಂದಿನ ತಿಂಗಳ ಜಿಡಿಪಿಯ ದರದಲ್ಲಿ ವ್ಯಕ್ತವಾಗಲಿದೆ. ಹಾಗು ಈ ದರ ಇನ್ನೂ ಹೆಚ್ಚು ಕ್ಷೀಣಿಸುವ ಸಂಭವವೇ ಹೆಚ್ಚು! ಇವುಗಳೆಲ್ಲದರ ಹಿನ್ನಲೆಯಲ್ಲಿ ಮೇಲೆದ್ದಿರುವ ಇಂತಹ ಹಲವು ಪ್ರೆಶ್ನೆಗಳಿಗೆ ಕೇಂದ್ರ ಸಮಜಾಯಿಷಿಕೊಡಬೇಕಿದೆ.
ಇಂದು ವಿಶ್ವದ ಇತರೆಲ್ಲ ದೇಶಗಳನ್ನೂ ಹಿಂದಿಕ್ಕಿ ಅತಿ ದೊಡ್ಡ ಆರ್ಥಿಕತೆಯಾಗುವ ಕನಸನ್ನು ಹೊತ್ತಿರುವ ಭಾರತ ಈ ರೀತಿಯ ಇಳಿಮುಖವಾದ ಬೆಳವಣಿಗೆಯ ದರವನ್ನು ಹೊತ್ತು ಅಂತಹ ಗುರಿಯೊಂದನ್ನುಸಾಧಿಸಲು ಸಾಧ್ಯವುಂಟೆ? ಜಿಡಿಪಿ ಎಂಬುದು ಒಂದು ದೇಶದ ಜನತೆಯ ಜೀವನಮಟ್ಟವನ್ನು(Standard Of Living) ಅಳೆಯುವ ಬಹುಮುಖ್ಯ ಮಾಪನಗಳಲ್ಲೊಂದು. ಇಂತಹ ಒಂದು ಮಾಪನದ ಸಂಖ್ಯ ಸೂಚಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರಲೇಬೇಕು. ಭಾರತದನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಂತೂ ಇದರ ಅಂಕಿ ಅಂಶಗಳ ಇಳಿಮುಖವಾಗುವಿಕೆ ತೀರಾ ಆತಂಕಕರ. ಹಿಂದೂ ಮುಂದೂ ನೋಡದೆ ಸಿನಿಮೀಯ ರೀತಿಯಲ್ಲಿ ಒಂದರ ಮೇಲೊಂದು ಕಾನೂನುಗಳನ್ನು ದೇಶದ ಜನತೆಯ ಮೇಲೇರಿಸುವ ಸರ್ಕಾರಗಳು ತಮ್ಮ ಉದ್ದೇಶ ಅದೆಷ್ಟೇ ಸಾತ್ವಿಕವಾಗಿದ್ದರೂ ಜಾರಿ ತರುವ ಮೊದಲು ಹಲವು ಬಾರಿ ಒರೆಹಚ್ಚಿ ಪರೀಕ್ಷಿಸಿ ನೋಡಬೇಕು. ಅಲ್ಲದೆ ಎಲ್ಲಿಯವರೆಗೂ ನಾವುಗಳೂ ಸಹ ಏರಲಾಗುವ ಪ್ರತಿಯೊಂದು ಕಾಯಿದೆ ಕಾನೂನುಗಳನ್ನು ಪ್ರೆಶ್ನಿಸುವ, ಪರೀಕ್ಷಿಸುವ ಗುಣವನ್ನು ಬೆಳೆಸಿಕೊಳ್ಳದೆ ಗುಂಪು ಸಮ್ಮತಿಸಿದಂತೆ ತಲೆಯಾಡಿಸುವ ಜಾಯಮಾನದವರಾಗಿರುತ್ತೇವೆಯೋ ಅಲ್ಲಿಯವರೆಗೂ ಗೆದ್ದೂ ಸೋತಂತೆ. ಅಲ್ಲದೆ ದೇಶದ ಅಭಿವೃದ್ಧಿ ಕೇವಲ ಜನತೆಯ ಮೇಲೆ ತೆರಿಗೆಯನ್ನೊರಿಸುವುದೇ ಆಗಿದೆ ಎಂಬ ಮನಸ್ಥಿತಿ ದೂರವಾಗಿ ಕಸದಿಂದಲೂ ರಸ ತೆಗೆಯುವಂತಹ ಯೋಜನಾಲೋಚನೆಗಳು ಸರ್ಕಾರಗಳ ಕಾರ್ಯಸೂಚಿಯಲ್ಲಿ ಮೂಡಬೇಕು. ಮುಂದಿನ ದಿನಗಳಿಗೆ ಹಾಕಿಕೊಂಡಿರುವ ಗುರಿಯನ್ನು ಅಂದುಕೊಂಡಂತೆಯೇ ಸಾಧಿಸಿ ತೋರಿಸಲೂಬೇಕು.
ಜಿಡಿಪಿ ಎಂಬುದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಎಲ್ಲಾ ಅಂತಿಮ ಸರಕುಗಳ (ಟಿವಿ, ಫ್ರಿಡ್ಜ್, ಬಸ್ಸು ಕಾರು, ಬಟ್ಟೆ, ಸೋಪು, ಬಿಸ್ಕತ್ತು ಇತ್ಯಾಗಿ ಇತ್ಯಾದಿ) ಒಟ್ಟು ಮೊತ್ತ ಎನ್ನಬಹುದು. ಕಳೆದ ಬಾರಿಯ ದೇಶದ ಒಟ್ಟು ಜಿಡಿಪಿಯ ಮೊತ್ತ ಸುಮಾರು 150 ಲಕ್ಷ ಕೋಟಿ ರೂಪಾಯಿಗಳ ಆಸುಪಾಸು. ಈ ಮೊತ್ತದ ಮೂಲಕ ಇಡೀ ವಿಶ್ವದ ಜಿಡಿಪಿಯ ಬೆಳವಣಿಗೆಯಲ್ಲಿ ದೇಶದ ಕೊಡುಗೆ ಸುಮಾರು 3% ನಷ್ಟಿದ್ದಿತು. ಇದು ಭಾರತವನ್ನು ವಿಶ್ವದಲ್ಲೇ ಏಳನೇ ಅತಿ ಹೆಚ್ಚು ಜಿಡಿಪಿಯ ದೇಶವನ್ನಾಗಿಸಿತ್ತು. ಇನ್ನು ಅಮೇರಿಕ ಸುಮಾರು 1250 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜಿಡಿಪಿಯ ಮೊತ್ತದೊಂದಿದೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು.
ಇನ್ನು ಆಯಾ ವರ್ಷದ ಜಿಡಿಪಿಯ ಮೊತ್ತವನ್ನು ಕಳೆದ ವರ್ಷದ ಅಥವಾ ತ್ರೈಮಾಸಿಕದ ಮೊತ್ತಕ್ಕೆ ಹೋಲಿಸಿದರೆ ನಮಗೆ ಸಿಗುವ ಶೇಕಡಾವಾರುವನ್ನೇ 'ಜಿಡಿಪಿ ದರ' ಎನ್ನಲಾಗುತ್ತದೆ. ಕಳೆದ ವರ್ಷ ಇದೆ ತಿಂಗಳಿನಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ದರ 7.9% ರ ಆಸುಪಾಸಿನಲ್ಲಿದ್ದಿತು. ಆದರೆ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಅದು 5.7 % ನಷ್ಟಾಗಿದೆ. ಪ್ರಸ್ತುತ ಬೆಳವಣಿಗೆಯ ಕುಂಠಿತ ದರ ದೇಶದ ಇತಿಹಾಸದಲ್ಲೇ ಮೊದಲೇನಲ್ಲ. ಈ ಮೊದಲೂ ಎಪ್ಪತ್ತು ಹಾಗು ಎಂಬತ್ತರ ದಶಕದ ಹಲವು ವರ್ಷಗಳಲ್ಲಿ ಜಿಡಿಪಿಯ ದರ ಶೂನ್ಯಕ್ಕಿಂತಲೂ ಕಡಿಮೆ ಅಂದರೆ ಋಣಾತ್ಮಕವಾಗಿರುವುದೂ ಉಂಟು. ಆದರೆ ಕಳೆದ ಹಲವು ತ್ರೈಮಾಸಿಕಗಳಿಂದ ಏರುತ್ತಲೇ ಅಥವಾ ಬಾಗಶಃ ಅಚಲವಾಗಿದ್ದ ದರ ಒಮ್ಮಿಂದೊಮ್ಮೆಲೆ ಕುಸಿಯಲು ಕಾರಣವೇನು? ನೋಟ್ ಬ್ಯಾನ್, ಜಿಎಸ್ಟಿ, ಸಾಲಮನ್ನಾ ಎಂಬ ಮತ್ತೊಂದು ಮಗದೊಂದು ಯೋಜನೆಗಳನ್ನು ರಾತ್ರಿ ಕಳೆದು ಹಗಲಾಗುವುದರೊಳಗೆ ಜಾರಿಗೊಳಿಸಿ, ಊರೆಲ್ಲ ಡಂಗೂರ ಒಡೆಸಿ, ಕೊನೆಗೆ ಜನರ ಮುಂದೆ ತಲೆ ಕೆರೆದುಕೊಳ್ಳುವಂತಹ ನಿರ್ಧಾರಗಳು ಪ್ರಸ್ತುತ ಅಂಕಿಅಂಶಗಳ ಹಿನ್ನಲೆಯೊಂದಿಗೆ ದೇಶಕ್ಕೆ ಅದ್ಯಾವ ಬಗೆಯಲ್ಲಿ ಪೂರಕವಾಗಲಿವೆ ಎಂಬುದೇ ಪ್ರೆಶ್ನೆ.
ನೋಟು ಅಮಾನಿಕರಣ ದೇಶ ಕಂಡ ಹಲವು ದಿಟ್ಟ ನಿರ್ಧಾರಗಳಲ್ಲೊಂದು. ಪ್ರಸ್ತುತ ಜಾರಿಯಲ್ಲಿದ್ದ ಕಪ್ಪು ಹಣವನ್ನು ಮಟ್ಟ ಹಾಕುವುದೇ ಈ ನಿರ್ಧಾರದ ಹಿಂದಿದ್ದ ಬಹು ಮುಖ್ಯ ಚಿಂತನೆ. ಆದರ ಪ್ರಕಾರ ದೇಶದಲ್ಲಿ ಅಂದು ಜಾರಿಯಲ್ಲಿದ್ದ 15.44 ಲಕ್ಷ ಕೋಟಿ ರೂಪಾಯಿಗಳಲ್ಲಿ (ಕೇವಲ 500 ಹಾಗು 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ) ಒಟ್ಟು ಕಪ್ಪು ಹಣದ ಮೊತ್ತ ಸುಮಾರು ನಾಲ್ಕು ಲಕ್ಷ ಕೋಟಿಯಷ್ಟಾಗಿದ್ದಿತು(ಕೇಂದ್ರ ಸರ್ಕಾರದ ಪ್ರಕಾರ). ಹಾಗಾಗಿ ನೋಟು ಅಮಾನಿಕರಣದಿಂದ ದೇಶದ ಜೋಳಿಗೆಗೆ ಬಂದು ಸೇರಬೇಕಿದ್ದ ಮೊತ್ತ ಅಂದಾಜು ಹನ್ನೊಂದರಿಂದ ಹನ್ನೆಡರೆದು ಲಕ್ಷ ಕೋಟಿ ರೂಪಾಯಿಗಳು. ಆದರೆ ವಿಪರ್ಯಾಸವೊ, ಅವಿವೇಕಿತನವೋ ಅಥವಾ ಬಹುಜನರ ಬಹುಬಗೆಯ ಕೈಚಳಕದ ಫಲವೋ ಸುಮಾರು 99% ಹಣ ದೇಶದ ಜೋಳಿಗೆಗೆ ಇಂದು ವಾಪಸ್ಸುಬಿದ್ದಿದೆ! ಅರ್ತಾಥ್ ದೇಶದಲ್ಲಿ ಅಂದು ಇದ್ದ ಅಷ್ಟೂ ಹಣವು ಬಿಳಿಯ ಹಣವೇ ಆಗಿದ್ದಿತು ಎಂದರೆ ನಂಬಬಹುದೇ? ಹಾಗಾದರೆ ಸರ್ಕಾರದ ಅಂಕಿ ಅಂಶಗಳು ಅಂದು ಆಧಾರರಹಿತವಾಗಿದ್ದವೇ?
ನೋಟು ಅಮಾನ್ಯದಿಂದ ದೇಶದ ಬೊಕ್ಕಸಕ್ಕೆ ಆಗಿರುವ ನಷ್ಟ ಹಲವು ಸಾವಿರ ಕೋಟಿ ರೂಪಾಯಿಗಳು. ದೇಶದ ನಿರ್ಮಾಣ ವಲಯ ನೋಟು ಅಮಾನಿಕರಣದಿಂದ ತತ್ತರಿಸಿದ ಅತಿ ದೊಡ್ಡ ವಲಯ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಈ ವಲಯವನ್ನು ಸದ್ಯಕಂತೂ ಶಕ್ತಿ ಮೀರಿ ಎಳೆದರೂ ಮೇಲೇಳುವುದು ಕಷ್ಟಸಾಧ್ಯ. ಇಂತಹ ಒಂದು ವಲಯದ ದಿಢೀರ್ ಕುಸಿತ ಜಿಡಿಪಿ ದರದ ಕುಂಠಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ ದೇಶದ ಉತ್ಪಾದನಾ ವಲಯವೂ ಇಂತಹದ್ದೇ ಬಹುಮುಖ ಇಳಿಕೆಯನ್ನು ಇಲ್ಲಿ ಕಂಡಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಸುಮಾರು 10.2% ನಷ್ಟಿದ್ದ ಈ ವಲಯದ ಅಭಿವೃದ್ಧಿಯ ದರ ಇಂದು 1.2% ರಷ್ಟರಲ್ಲಿ ಬಂದು ನಿಂತಿದೆ ಎಂದರೆ ನಂಬಲಸಾಧ್ಯ. ಇದಕ್ಕೆ ಪೂರಕವೆಂಬಂತೆ ನೋಟು ಅಮಾನ್ಯದ ಮೊದಲು 7.5% ರಷ್ಟಿದ್ದ ಜಿಡಿಪಿಯ ದರ ನಂತರದ ಕೆಲವೇ ದಿನಗಳಲ್ಲಿ 6.1% ರಷ್ಟಾಗಿದ್ದಿತು. ಕಳೆದ ಜುಲೈನ ಜಿಎಸ್ಟಿ ಜಾರಿಯ ನಂತರ ಉಂಟಾಗಿರುವ ಪರಿಣಾಮ ಮುಂದಿನ ತಿಂಗಳ ಜಿಡಿಪಿಯ ದರದಲ್ಲಿ ವ್ಯಕ್ತವಾಗಲಿದೆ. ಹಾಗು ಈ ದರ ಇನ್ನೂ ಹೆಚ್ಚು ಕ್ಷೀಣಿಸುವ ಸಂಭವವೇ ಹೆಚ್ಚು! ಇವುಗಳೆಲ್ಲದರ ಹಿನ್ನಲೆಯಲ್ಲಿ ಮೇಲೆದ್ದಿರುವ ಇಂತಹ ಹಲವು ಪ್ರೆಶ್ನೆಗಳಿಗೆ ಕೇಂದ್ರ ಸಮಜಾಯಿಷಿಕೊಡಬೇಕಿದೆ.
ಇಂದು ವಿಶ್ವದ ಇತರೆಲ್ಲ ದೇಶಗಳನ್ನೂ ಹಿಂದಿಕ್ಕಿ ಅತಿ ದೊಡ್ಡ ಆರ್ಥಿಕತೆಯಾಗುವ ಕನಸನ್ನು ಹೊತ್ತಿರುವ ಭಾರತ ಈ ರೀತಿಯ ಇಳಿಮುಖವಾದ ಬೆಳವಣಿಗೆಯ ದರವನ್ನು ಹೊತ್ತು ಅಂತಹ ಗುರಿಯೊಂದನ್ನುಸಾಧಿಸಲು ಸಾಧ್ಯವುಂಟೆ? ಜಿಡಿಪಿ ಎಂಬುದು ಒಂದು ದೇಶದ ಜನತೆಯ ಜೀವನಮಟ್ಟವನ್ನು(Standard Of Living) ಅಳೆಯುವ ಬಹುಮುಖ್ಯ ಮಾಪನಗಳಲ್ಲೊಂದು. ಇಂತಹ ಒಂದು ಮಾಪನದ ಸಂಖ್ಯ ಸೂಚಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರಲೇಬೇಕು. ಭಾರತದನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಂತೂ ಇದರ ಅಂಕಿ ಅಂಶಗಳ ಇಳಿಮುಖವಾಗುವಿಕೆ ತೀರಾ ಆತಂಕಕರ. ಹಿಂದೂ ಮುಂದೂ ನೋಡದೆ ಸಿನಿಮೀಯ ರೀತಿಯಲ್ಲಿ ಒಂದರ ಮೇಲೊಂದು ಕಾನೂನುಗಳನ್ನು ದೇಶದ ಜನತೆಯ ಮೇಲೇರಿಸುವ ಸರ್ಕಾರಗಳು ತಮ್ಮ ಉದ್ದೇಶ ಅದೆಷ್ಟೇ ಸಾತ್ವಿಕವಾಗಿದ್ದರೂ ಜಾರಿ ತರುವ ಮೊದಲು ಹಲವು ಬಾರಿ ಒರೆಹಚ್ಚಿ ಪರೀಕ್ಷಿಸಿ ನೋಡಬೇಕು. ಅಲ್ಲದೆ ಎಲ್ಲಿಯವರೆಗೂ ನಾವುಗಳೂ ಸಹ ಏರಲಾಗುವ ಪ್ರತಿಯೊಂದು ಕಾಯಿದೆ ಕಾನೂನುಗಳನ್ನು ಪ್ರೆಶ್ನಿಸುವ, ಪರೀಕ್ಷಿಸುವ ಗುಣವನ್ನು ಬೆಳೆಸಿಕೊಳ್ಳದೆ ಗುಂಪು ಸಮ್ಮತಿಸಿದಂತೆ ತಲೆಯಾಡಿಸುವ ಜಾಯಮಾನದವರಾಗಿರುತ್ತೇವೆಯೋ ಅಲ್ಲಿಯವರೆಗೂ ಗೆದ್ದೂ ಸೋತಂತೆ. ಅಲ್ಲದೆ ದೇಶದ ಅಭಿವೃದ್ಧಿ ಕೇವಲ ಜನತೆಯ ಮೇಲೆ ತೆರಿಗೆಯನ್ನೊರಿಸುವುದೇ ಆಗಿದೆ ಎಂಬ ಮನಸ್ಥಿತಿ ದೂರವಾಗಿ ಕಸದಿಂದಲೂ ರಸ ತೆಗೆಯುವಂತಹ ಯೋಜನಾಲೋಚನೆಗಳು ಸರ್ಕಾರಗಳ ಕಾರ್ಯಸೂಚಿಯಲ್ಲಿ ಮೂಡಬೇಕು. ಮುಂದಿನ ದಿನಗಳಿಗೆ ಹಾಕಿಕೊಂಡಿರುವ ಗುರಿಯನ್ನು ಅಂದುಕೊಂಡಂತೆಯೇ ಸಾಧಿಸಿ ತೋರಿಸಲೂಬೇಕು.
No comments:
Post a Comment